ಶಿವಮೊಗ್ಗದ ಚೇತನ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್‌ ಶಿಫಾರಸು

ಶಿವಮೊಗ್ಗ: ಬಾಕಿ ಉಳಿದಿದ್ದ ನಿಗಮ ಮಂಡಳಿಗಳಿಗೆ (Board Corporation) ಅಧ್ಯಕ್ಷರ ನೇಮಕಾತಿ ಮಾಡಲು ಕಾಂಗ್ರೆಸ್‌ ಪಕ್ಷ ಕೊನಗೂ ಮುಂದಾಗಿದೆ. 39 ಮುಖಂಡರು, ಕಾರ್ಯಕರ್ತರನ್ನು ವಿವಿಧ ನಿಗಮ ಮಂಡಳಿಗಳಿಗೆ ನೇಮಕ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಶಿಫಾರಸು ಮಾಡಿದ್ದಾರೆ.

ಶಿವಮೊಗ್ಗದ ಯುವ ಕಾಂಗ್ರೆಸ್‌ ಮುಖಂಡ ಚೇತನ್‌ ಕೆ.ಗೌಡ ಅವರಿಗೆ ರಾಜ್ಯ ಕೈಮಗ್ಗ ಮೂಲಸೌಕರ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷರಾಗಿ, ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಚೇತನ್‌ ಸಕ್ರಿಯವಾಗಿದ್ದಾರೆ. ಇನ್ನು, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡು ಬಾರಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಬೆರಳೆಣಿಗೆ ಮತದಿಂದ ಸೋಲನುಭವಿಸಿದ್ದರು.

Chetan-Gowda-Youth-Congress-Shimoga.

ಇದನ್ನೂ ಓದಿ » ಕಂತೆ ಕಂತೆ ಹಣ, ಲಕ್ಷ ಲಕ್ಷ ಮೌಲ್ಯದ ಆಭರಣ ಸಹಿತ ಶಿವಮೊಗ್ಗದಲ್ಲಿ ಆಟೋ ಚಾಲಕ ಅರೆಸ್ಟ್‌

JNNCE-Admission-Advt-scaled

Chetan-Gowda-Youth-Congress-Shimoga.

Leave a Comment