ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 17 APRIL 2023
SHIMOGA : ಮಕ್ಕಳ ಬಟ್ಟೆ ಸೈಸ್ ವ್ಯತ್ಯಾಸವಾಗಿದ್ದು ಬದಲು ಮಾಡಿಕೊಡುವಂತೆ ಬಂದ ಗ್ರಾಹಕ ಮತ್ತು ಅಂಗಡಿ (Shop) ಮಾಲೀಕನ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಗಾಂಧಿ ಬಜಾರ್ನ ಬಟ್ಟೆ ಮಾರುಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಅಂಗಡಿಯೊಂದರಲ್ಲಿ (Shop) ಅಬ್ದುಲ್ ಖಾದರ್ ಅವರ ಮನೆಯ ಮಕ್ಕಳಿಗೆ ಬಟ್ಟೆ ಖರೀದಿಸಲಾಗಿತ್ತು. ಆದರೆ ಮನೆಗೆ ಕೊಂಡೊಯ್ದಾಗ ಸೈಸ್ ವ್ಯತ್ಯಸವಾಗಿತ್ತು. ಮರುದಿನ ಬಟ್ಟೆ ಬದಲಾಯಿಸಿಕೊಂಡು ಹೋಗಲು ಅಬ್ದುಲ್ ಖಾದರ್ ಮತ್ತು ಅವರ ಸೊಸೆ ಬಂದಿದ್ದರು. ಈ ವೇಳೆ ಅಂಗಡಿ ಮಾಲೀಕ ಮತ್ತು ಅಬ್ದುಲ್ ಖಾದರ್ ಅವರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ಇದನ್ನೂ ಓದಿ – ಕಂಬದ ಮೇಲೆ ಲೈನ್ ಮ್ಯಾನ್ಗೆ ಕರೆಂಟ್ ಶಾಕ್, ಕೆಳಗೆ ಬಿದ್ದು ಸಾವು, ಶಿವಮೊಗ್ಗದಲ್ಲಿ ಪ್ರಕರಣ ದಾಖಲು
ಅಂಗಡಿ ಮಾಲೀಕ ಮತ್ತು ಅಂಗಡಿಯಲ್ಲಿ ಇದ್ದವರು ಅಬ್ದುಲ್ ಖಾದರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

CLICK HERE TO JOIN SHIVAMOGGA LIVE WHATSAPP GROUP




