ರಾಗಿಗುಡ್ಡಕ್ಕೆ ತೆರಳಬೇಕಿದ್ದ ಪ್ರಮೋದ್‌ ಮುತಾಲಿಕ್‌ಗೆ ಮಾಸ್ತಿಕಟೆಯಲ್ಲಿ ತಡೆ, ನೊಟೀಸ್‌ ಜಾರಿ

SHIVAMOGGA LIVE NEWS | 19 OCTOBER 2023

SHIMOGA : ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಶಿವಮೊಗ್ಗ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿಷೇಧ (Notice) ವಿಧಿಸಿದೆ. ಈಚೆಗೆ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಸಂಭವಿಸಿತ್ತು. ಹಾನಿಗೊಳಗಾದ ಮನೆಗಳಿಗೆ ಬುಧವಾರ ಪ್ರಮೋದ್‌ ಮುತಾಲಿಕ್‌ ಭೇಟಿ ನೀಡಿ ಸಾಂತ್ವನ ಹೇಳುವ ಕಾರ್ಯಕ್ರಮ ನಿಗದಿಯಾಗಿತ್ತು.

ಮಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಪ್ರಮೋದ್‌ ಮುತಾಲಿಕ್‌ ಅವರನ್ನು ಹೊಸನಗರ ತಾಲೂಕು ಮಾಸ್ತಿಕಟ್ಟೆ ಬಳಿ ಬುಧವಾರ ಬೆಳಗಿನ ಜಾವ ತಡೆದ ಪೊಲೀಸರು, ನೊಟೀಸ್‌ ನೀಡಿದ್ದರು. ಅಲ್ಲಿಂದ ದಾವಣಗೆರೆ ಜಿಲ್ಲೆಗೆ ಬಿಟ್ಟು ಬಂದಿದ್ದಾರೆ.

ಇದನ್ನೂ ಓದಿ – ದಸರಾ ಹಿನ್ನೆಲೆ, ಮೈಸೂರು–ಶಿವಮೊಗ್ಗದ 4 ರೈಲುಗಳಿಗೆ ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ ಸ್ಟಾಪ್‌?

ಪ್ರಮೋದ್‌ ಮುತಾಲಿಕ್‌ ಅವರು ಪ್ರಬಲ ಹಿಂದೂ ಧರ್ಮ ಪ್ರತಿಪಾದಕರಾಗಿದ್ದಾರೆ. ಇವರ ಭಾಷಣ ಪ್ರಚೋದನಕಾರಿಯಾಗಿದೆ. ಇನ್ನೊಂದು ಧರ್ಮದ ಬಗ್ಗೆ ದ್ವೇಷ, ವೈಷಮ್ಯ ಹುಟ್ಟಿಸಿ, ಭಾವನೆಗಳನ್ನು ಕೆರಳಿಸುವ ಸಾದ್ಯತೆ ಇದೆ. ಶಿವಮೊಗ್ಗ ನಗರಕ್ಕೆ ಆಗಮಿಸಿ ಸಾಂತ್ವನ ಹೇಳುವ ನೆಪದಲ್ಲಿ ಮತ್ತೊಮ್ಮೆ ಶಾಂತಿ ಸುವ್ಯವಸ್ಥೆ ಕದಡಬಹುದು. ರಾಗಿಗುಡ್ಡದಲ್ಲಿ ಇನ್ನೂ ಸೆಕ್ಷನ್‌ 144ರ ಅನ್ವಯ ನಿಷೆಧಾಜ್ಞೆ ಜಾರಿಯಲ್ಲಿದೆ. ಆದ್ದರಿಂದ ಪ್ರಮೋದ್‌ ಮುತಾಲಿಕ್‌ ಅವರ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ ಎಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ದಸರಾ, ಕಾರ್ಯಕ್ರಮಗಳ ಬಗ್ಗೆ ಜನರಿಗೆ ಏನೇನೂ ಗೊತ್ತಿಲ್ಲ, ಕೆಲವರಿಗಷ್ಟೆ ಸೀಮಿತವಾಯ್ತಾ ಉತ್ಸವ?

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : October 19, 2023 at 8:40 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಅಕ್ಟೋಬರ್ 19, 2023

Leave a Comment