ಶಿವಮೊಗ್ಗ ಸಿಟಿಯೊಳಗೆ ಗೋಸುಂಬೆ ರಕ್ಷಣೆ, ಪತ್ತೆಯಾಗಿದ್ದು ಎಲ್ಲಿ? ರಕ್ಷಣೆ ಹೇಗಾಯ್ತು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 06 JANUARY 2021

ಶಿವಮೊಗ್ಗ ಸಿಟಿಯಲ್ಲಿ ಗೋಸುಂಬೆ ಒಂದನ್ನು ರಕ್ಷಣೆ ಮಾಡಲಾಗಿದೆ. ಹಿರಿಯ ಛಾಯಗ್ರಾಹಕ ಶಿವಮೊಗ್ಗ ನಂದನ್ ಅವರು ಗೋಸುಂಬೆಯನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.

ಎಲ್ಲಿ ಕಾಣಿಸ್ತು ಗೋಸುಂಬೆ?

ಶಿವಮೊಗ್ಗದ ಅಚ್ಚುತರಾವ್ ಲೇಔಟ್‍ 3ನೇ ಅಡ್ಡರಸ್ತೆಯ ಮೋಹನ್ ಶಾಸ್ತ್ರಿ ಅವರ ಮನೆ ಬಳಿ ಗೋಸುಂಬೆ ಕಾಣಿಸಿಕೊಂಡಿದೆ. ಶಿವಮೊಗ್ಗ ನಂದನ್‍ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ನಂದನ್, ಗೋಸುಂಬೆಯನ್ನು ರಕ್ಷಿಸಿದ್ದಾರೆ. ಅಲ್ಲದೆ ಸ್ಥಳೀಯರಿಗೆ ಗೋಸುಂಬೆ ಕುರಿತು ಮಾಹಿತಿ ನೀಡಿದರು.

ಗೋಸುಂಬೆ ಇಲ್ಲಿಗೆ ಬಂದಿದ್ದು ಹೇಗೆ?

ಶಿವಮೊಗ್ಗ ಸಿಟಿಯ ಒಳಗೆ ಗೋಸುಂಬೆಗಳು ತುಂಬಾ ವಿರಳ. ಕುವೆಂಪು ರಸ್ತೆ ಪಕ್ಕದ ಅಚ್ಚುತರಾವ್ ಲೇಔಟ್‍ನಲ್ಲಿ ಗೋಸುಂಬೆ ಕಾಣಿಸಿಕೊಂಡಿರುವುದು ಅನುಮಾನ ಮೂಡಿಸಿದೆ. ಗೋಸುಂಬೆಯನ್ನು ಯಾರೋ ತಂದು ಬಿಟ್ಟಿರುವ ಶಂಕೆ ಇದೆ. ಸ್ಥಳೀಯರು ಕೂಡ ಇದೆ ಅನುಮಾನ ವ್ಯಕ್ತಪಡಿಸಿದ್ದಾರೆ. ವನ್ಯಜೀವ ಕಾಯ್ದೆ ಅಡಿ ಇದು ಶಿಕ್ಷಾರ್ಹ ಅಪರಾಧವಾಗಿದೆ.

ಗೋಸುಂಬೆ ರಕ್ಷಣೆಯ ವಿಡಿಯೋ ರಿಪೋರ್ಟ್

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment