ಶಿವಮೊಗ್ಗದಲ್ಲಿ ಕನಕದಾಸರ ಜಯಂತಿ, ಇದೇ ಮೊದಲು ದಾಸರ ಜೀವನ ಆಧಾರಿತ ಯಕ್ಷಗಾನ ಪ್ರದರ್ಶನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 DECEMBER 2023

SHIMOGA : ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕನಕದಾಸರ ಜಯಂತಿ (Kanakadasa Jayanthi) ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಇದೆ ವೇಳೆ ಕನಕದಾಸರ ಜೀವನ ಆಧಾರಿತ ಯಕ್ಷಗಾನ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಯಾರೆಲ್ಲ ಏನೇನು ಹೇಳಿದರು?

ಮಧು ಬಂಗಾರಪ್ಪ, ಉಸ್ತುವಾರಿ ಸಚಿವ : ಕನಕದಾಸರ ಕೀರ್ತನೆಗಳು ಈ ದೇಶದ ಸಂವಿಧಾನದ ಆಶಯಗಳನ್ನು ಹೊಂದಿದೆ. 16ನೇ ಶತಮಾನದಲ್ಲೇ ಕೀರ್ತನೆಗಳ ಮೂಲಕ ಸಾಮಾಜಿಕ ನ್ಯಾಯಕ್ಕೆ ನಾಂದಿ ಹಾಡಿದ್ದರು. ಕನಕದಾಸರ ಕೀರ್ತನೆಗಳಲ್ಲಿನ ಸಮಾನತೆಗೆ ಶ್ರೀಕೃಷ್ಣನೆ ತಿರುಗಿ ನಿಂತಿದ್ದ. ನಾವೆಲ್ಲ ಈಗ ಜಾತಿಯ ಸಂಕೋಲೆಯಿಂದ ಹೊರಬರಬೇಕಿದೆ.

ಎಸ್.ಎನ್.ಚನ್ನಬಸಪ್ಪ, ಶಾಸಕ : ಕನಕದಾಸರು ಜಾತಿ ಕುರಿತು ಯೋಚಿಸಲಿಲ್ಲ. ಬದಲಾಗಿ ಒಟ್ಟು ಸಮಾಜದ ಕುರಿತು ಚಿಂತಿಸಿದರು. ಇದೆ ಕಾರಣಕ್ಕೆ ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಾರಿದರು. ಭಗವಂತ ಕೃಷ್ಣನನ್ನೆ ತನ್ನೆಡೆಗೆ ತಿರುಗಿಸಿಕೊಂಡರು.

ಇದನ್ನೂ ಓದಿ-ವರದಿ ಜಾರಿಯಾಗದಿದ್ದರೆ ಹೋರಾಟ, ನಾರಾಯಣ ಗುರು ವಿಚಾರ ವೇದಿಕೆ ಎಚ್ಚರಿಕೆ

ಡಿವಿಎಸ್‌ ಪದವಿಪೂರ್ವ ಕಾಲೇಜು ಕನ್ನಡ ವಿಭಾಗದ ನಿವೃತ್ತ ಉಪನ್ಯಾಸಕ ಕೆ.ಭಾಸ್ಕರ್‌ ಅವರು ಕನಕದಾಸರ ಜೀವನ, ಕೀರ್ತನೆ ಮತ್ತು ಆದರ್ಶದ ಕುರಿತು ಉಪನ್ಯಾಸ ನೀಡಿದರು. ಬಳಿಕ ಕನಕದಾಸರ ಜೀವನ ಆಧಾರಿತ ಯಕ್ಷಗಾನ ಪ್ರದರ್ಶಿಸಲಾಯಿತು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಿ ಮೈಲಾರಪ್ಪ, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್, ವಿಧಾನ ಪರಿಷತ್‌ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್‌, ಸಮಾಜದ ಮುಖಂಡರಾದ ನೆ.ಲ.ನರೇಂದ್ರಬಾಬು, ಎಸ್.ಕೆ.ಮರಿಯಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್,  ಜಿ.ಪಂ. ಸಿಇಓ ಲೋಖಂಡೆ ಸ್ನೇಹಲ್ ಸುಧಾಕರ್, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್.ಹೆಚ್ ಸೇರಿದಂತೆ ಹಲವರು ಇದ್ದರು.

kanaka 1

kanaka2

kanaka 3

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment