SHIVAMOGGA LIVE NEWS | 15 AUGUST 2023
SHIMOGA : ಸ್ವಾತಂತ್ರ್ಯ ದಿನಾಚರಣೆ ಪಥಸಂಚಲನಕ್ಕೆ (Parade) ಈ ಬಾರಿ ಕನ್ನಡದಲ್ಲಿ ಆದೇಶ ನೀಡಲಾಯಿತು. ಶಿವಮೊಗ್ಗದಲ್ಲಿ ಇದೆ ಮೊದಲ ಬಾರಿ ಕನ್ನಡದಲ್ಲಿ ಆದೇಶ ನೀಡಿದ್ದು, ಸಭೀಕರ ಗಮನ ಸೆಳೆಯಿತು.
ಡಿಎಆರ್ ಮೈದಾನದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಪಥ ಸಂಚಲನ ನಡೆಯಿತು. ಪ್ರೊಬೇಷನರಿ ಐಪಿಎಸ್ ಅಧಿಕಾರಿ ಎನ್.ಆರ್.ಬಿಂದು ಮಣಿ ಅವರು ಪಥ ಸಂಚಲನದ (Parade) ನೇತೃತ್ವ ವಹಿಸಿದ್ದರು.
ಕನ್ನಡ ಆದೇಶ ಇದೇ ಮೊದಲು
ಈವರೆಗೂ ಪರೇಡ್ ಕಮಾಂಡರ್ಗಳು ಹಿಂದಿ ಭಾಷೆಯಲ್ಲಿ ಆದೇಶಗಳನ್ನು ನೀಡುತ್ತಿದ್ದರು. ಆದರೆ ಇದೇ ಮೊದಲ ಬಾರಿ ಪ್ರೊಬೇಷನರಿಗೆ ಐಪಿಎಸ್ ಅಧಿಕಾರಿ ಬಿಂದು ಮಣಿ ಕನ್ನಡದಲ್ಲಿ ಆದೇಶ ನೀಡಿದರು. ತುಕಡಿಗಳ ಪರಿಶೀಲನೆ, ಪಥ ಸಂಚಲನಕ್ಕೆ ಅನುಮತಿ, ತುಕಡಿಗಳ ನಿರ್ಗಮನದ ಆದೇಶ ಮತ್ತು ಅನುಮತಿಗಳನ್ನು ಬಿಂದು ಮಣಿ ಅವರು ಕನ್ನಡದಲ್ಲಿ ನಿರ್ವಹಿಸಿದರು.
ಸರ್ಕಾರಿ ಶಾಲೆ ಮಕ್ಕಳಿಗೆ ಪ್ರಥಮ ಬಹುಮಾನ
ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ವಿವಿಧ ಶಾಲೆ, ಕಾಲೇಜು ಮಕ್ಕಳಿಗೆ ಬಹುಮಾನ ವಿತರಿಸಲಾಗುತ್ತದೆ. ಈ ಬಾರಿ ಅತ್ಯುತ್ತಮವಾಗಿ ಪಥ ಸಂಚಲನ ಮಾಡಿದ ಸರ್ಕಾರಿ ಬಾಲ ಮಂದಿರ ಶಾಲೆ ಮಕ್ಕಳು ಮೊದಲ ಬಹುಮಾನ ಪಡೆದರು. ಗಾಜನೂರು ಮೊರಾರ್ಜಿ ವಸತಿ ಶಾಲೆ ಮಕ್ಕಳು ದ್ವಿತೀಯ, ಪ್ರಿಯದರ್ಶಿನಿ ಶಾಲೆ ಮಕ್ಕಳು ತೃತೀಯ ಸ್ಥಾನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಹುಮಾನ ವಿತರಿಸಿದರು.
ಇದೇ ವೇಳೆ, ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಕಟಿಸಲಾಗಿರುವ ಗ್ಯಾರಂಟಿ ಯೋಜನೆಗಳ ಪುಸ್ತಕವನ್ನು ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು. ಬಳಿಕ ವಿವಿಧ ಶಾಲೆ, ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಮಿನಿಸ್ಟರ್, ಇಲ್ಲಿದೆ 6 ಪ್ರಮುಖ ಪಾಯಿಂಟ್
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಲೋಖಂಡೆ ಸ್ನೇಹಲ್ ಸುಧಾಕರ್, ಪಾಲಿಕೆ ಕಮಿಷನರ್ ಮಾಯಣ್ಣಗೌಡ ಸೇರಿದಂತೆ ಹಲವರು ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200