ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS |29 DECEMBER 2022
ಶಿವಮೊಗ್ಗ : ಖಾಸಗಿ ಬಸ್ಸಿನಲ್ಲಿ ಬದಲಿ ಸೀಟ್ (bus seat) ಕೊಡಲಿಲ್ಲ ಎಂಬ ಕಾರಣಕ್ಕೆ ಪ್ರಯಾಣಿಕ ಮತ್ತು ಆತನ ಜೊತೆಗೆ ಬಂದಿದ್ದವರು ಕಚೇರಿಯಲ್ಲಿದ್ದ ವಸ್ತುಗಳನ್ನು ಹಾನಿಗೆಡವಿದ್ದಾರೆ. ಅಲ್ಲದೆ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ.

ಈಸ್ಟ್ ವೆಸ್ಟ್ ಬಸ್ ಸಂಸ್ಥೆಯ ಉದ್ಯೋಗಿ ಮೊಹಮ್ಮದ್ ಶೋಹೆಬ್ ಅಹಮದ್ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ.
ಏನಿದು ಪ್ರಕರಣ? (bus seat)
ಉಮರ್ ಎಂಬಾತ ಮುಂಬೈಗೆ ತೆರಳಲು ಆನ್ ಲೈನ್ ಮೂಲಕ ಸೀಟ್ ಬುಕ್ ಮಾಡಿದ್ದ. ಬಸ್ ಹತ್ತುವಾಗ ತನಗೆ ಬೇರೆ ಸೀಟ್ (bus seat) ಬೇಕು ಎಂದು ಕೇಳಿದ್ದಾನೆ. ಆಗ ಮೊಹಮ್ಮದ್ ಶೋಹೆಬ್ ಅವರು ಸದ್ಯಕ್ಕೆ ಸೀಟ್ ಖಾಲಿ ಇಲ್ಲ. ಮುಂದೆ ಖಾಲಿಯಾದರೆ ಬದಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ಕೆರಳಿದ ಉಮರ್, ಈಸ್ಟ್ ವೆಸ್ಟ್ ಬಸ್ ಕಚೇರಿಗೆ ನುಗ್ಗಿ ಶೋಹೆಬ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗದಲ್ಲಿ ಹುಕ್ಕಾ ಬಾರ್, ಪೊಲೀಸರು, ಅಧಿಕಾರಿಗಳಿಂದ ದಾಳಿ
ಉಮರ್ ಜೊತೆಗೆ ಬಂದಿದ್ದ ಇತರೆ 7 ಮಂದಿ ಕೂಡ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ತನ್ನ ಜೇಬಿನಲ್ಲಿದ್ದ 23 ಸಾವಿರ ರೂ. ನಗದು ನಾಪತ್ತೆಯಾಗಿದೆ. ಕಚೇರಿಯಲ್ಲಿದ್ದ ಪ್ರಿಂಟರ್ ಹಾನಿಗೀಡಾಗಿದೆ. ಎಟಿಎಂ ಮೆಷಿನ್ ನಿಂದ ತನ್ನ ತಲೆಗೆ ಹೊಡೆದಿದ್ದಾರೆ ಎಂದು ಮೊಹಮ್ಮದ್ ಶೋಹೆಬ್ ಆರೋಪಿಸಿದ್ದಾರೆ.
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 27 ಮಾರ್ಚ್ 2026

- ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್ ಜಾಮ್

- ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

- ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್ಗಳ ಅನಾವರಣ

- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

About The Editor
ನಿತಿನ್ ಆರ್.ಕೈದೊಟ್ಲು

CLICK & JOIN – OUR WHATSAPP GROUP














