ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಪೋಸ್ಟರ್ ವೈರಲ್, ಏನಿದೆ ಅದರಲ್ಲಿ? ವೈರಲ್ ಆಗಿದ್ದೇಕೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 3 FEBRUARY 2023

SHIMOGA : ವಿಧಾನ ಸಭೆ ಚುನಾವಣೆಗೆ ಶಿವಮೊಗ್ಗ ನಗರದಿಂದ ಬಿಜೆಪಿ ಅಭ್ಯರ್ಥಿ (BJP Candidate) ಯಾರಾಗುತ್ತಾರೆ ಎಂಬ ಕುತೂಹಲದ ನಡುವೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಆಯನೂರು ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂಬ ಪೋಸ್ಟ್ (Post) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ.

041119 Ayanur Manjunath Press Meet 1

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದೆ. ಹಾಗಾಗಿ ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೆ.ಈ.ಕಾಂತೇಶ್ ಅವರು ತಮ್ಮ ಉತ್ತರಾಧಿಕಾರಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಅವರು ಬಿಂಬಿಸಲು ಮುಂದಾಗಿದ್ದಾರೆ. ಈ ನಡುವೆ ಆಯನೂರು ಮಂಜುನಾಥ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ (Viral) ಆಗಿದೆ.

ಏನಿದು ಪೋಸ್ಟ್?

ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಆಯನೂರು ಮಂಜುನಾಥ್ ಅವರ ಪರವಾಗಿ ಪೋಸ್ಟರ್ ಗಳು ಷೇರ್ ಆಗುತ್ತಿವೆ. ‘ನಗರದಲ್ಲಿ ಶಾಂತಿ ನೆಮ್ಮದಿಗಾಗಿ ಕೈಗಾರಿಕೆ, ವ್ಯಾಪಾರ, ವಹಿವಾಟುಗಳು ನಿರ್ಭಯವಾಗಿ ನಡೆದು ಬಡವರ ಬದುಕು ಹಸನಾಗಿಸಲು ಆಯನೂರು ಮಂಜುನಾಥ್ ಅವರಿಗೆ ಅವಕಾಶ ಸಿಗಲಿ’ ಎಂದು ಪೋಸ್ಟರ್ ಗಳು ವೈರಲ್ ಆಗುತ್ತಿವೆ.

IMG 20230202 WA0014

ಎಲ್ಲೆಲ್ಲಿ ವೈರಲ್ ಆಗುತ್ತಿದೆ?

ಆಯನೂರು ಮಂಜುನಾಥ್ ಅವರು ಕಾರ್ಮಿಕ ನಾಯಕರೆಂದು ಗುರುತಿಸಿಕೊಂಡಿದ್ದಾರೆ. ಕಾರ್ಮಿಕರ ವಲಯದಲ್ಲಿ ಈ ಪೋಸ್ಟರ್ ಹೆಚ್ಚಿಗೆ ಷೇರ್ ಆಗುತ್ತಿದೆ. ಕಾರ್ಮಿಕರ ವಾಟ್ಸಪ್ ಗುಂಪುಗಳು, ಶಿಕ್ಷಕರು, ಉಪನ್ಯಾಸಕರ ಗುಂಪುಗಳು, ಉದ್ಯಮಿಗಳ ವಲಯದಲ್ಲಿ ಪೋಸ್ಟರ್ ಷೇರ್ ಆಗುತ್ತಿದೆ. ಫೇಸ್ ಬುಕ್ಕಿನಲ್ಲಿಯು ಕೂಡ ಪೋಸ್ಟರ್ ಕಾಣಸಿಗುತ್ತಿದೆ.

ಇನ್ನೊಂದು ವರ್ಷ ಅವಧಿ ಇದೆ

ಆಯನೂರು ಮಂಜುನಾಥ್ ಅವರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. 2024ರ ಜೂನ್ ವರೆಗೆ ಅವರಿಗೆ ಅಧಿಕಾರವಧಿ ಇದೆ. ಹೀಗಿದ್ದೂ ಅವರ ಅಭಿಮಾನಿಗಳು ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.

JANUARY-2023-REACH

ಕೆ.ಎಸ್.ಈಶ್ವರಪ್ಪ ಅವರು 2018ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವಾಗ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದರು. ಅವರ ಎಂ.ಎಲ್.ಸಿ ಅವಧಿ ಇನ್ನೂ ಎರಡು ವರ್ಷವಿತ್ತು. ಈಗಿನ ಎಂ.ಎಲ್.ಸಿ ರುದ್ರೇಗೌಡ ಅವರು ಆಗ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಕೆ.ಎಸ್.ಈಶ್ವರಪ್ಪ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಅದೆ ರೀತಿ ಆಯನೂರು ಮಂಜುನಾಥ್ ಅವರಿಗೂ ಅವಕಾಶ ಸಿಗಬಹುದು ಎಂಬುದು ಅವರ ಅಭಿಮಾನಿಗಳ ವಿಶ್ವಾಸ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ 3 ಗ್ರಾಮ ಪಂಚಾಯಿತಿಯ 4 ಸ್ಥಾನಕ್ಕೆ ಉಪ ಚುನಾವಣೆ, ದಿನಾಂಕ ನಿಗದಿ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment