ಶಿವಮೊಗ್ಗದಲ್ಲಿ ರಾಜ್ಯೋತ್ಸವ ಜೋರು, ಹಲವು ಜನಪ್ರತಿನಿಧಿಗಳು ಗೈರು, ಫೋಟೊಗಾಗಿ ಸ್ಟೇಜ್ ಇಳಿದು ಬಂದ ಸಚಿವರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 1 ನವೆಂಬರ್ 2019

ಶಿವಮೊಗ್ಗದಲ್ಲಿ ಇವತ್ತು 64ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ರಾಷ್ಟ್ರಧ್ವಜಾರೋಹಣ ಮಾಡಿದರು.

73196493 961936910834396 4888578711709810688 n.jpg? nc cat=102& nc oc=AQnQZed7mxr0Yr gfuLFqUYhBbVVuqjMnX7A2e5gtwkn7jlpOhUIv1Mcs4mSEHRXT38& nc ht=scontent.fblr11 1

ಪೊಲೀಸ್ ಡಿಎಆರ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಸಲಾಯಿತು. ಈ ವೇಳೆ KSRP ಮತ್ತು ಪೊಲೀಸ್ ಬ್ಯಾಂಡ್ ವತಿಯಿಂದ ಪಥ ಸಂಚಲನ ನಡೆಯಿತು.

ಬಳಿಕ ಶಿಕಾರಿಪುರ ಗಾಮದ ಚೌಡೇಶ್ವರಿ ಕಲಾ ಸಂಘದ ವತಿಯಿಂದ ಡೊಳ್ಳು ಕುಣಿತ, ಶಿವಮೊಗ್ಗ ಪೆರುಮಾಳ್ ನೃತ್ಯ ಕಲಾಕೇಂದ್ರದ ವತಿಯಿಂದ ಸಮೂಹ ನೃತ್ಯ, ಯಲವಟ್ಟಿ ಪಾರ್ವತಿ ಪರಮೇಶ್ವರ ವೀರಗಾಸೆ, ಬೆಳಲಕಟ್ಟೆ ರಂಗಮೋಹ ತಂಡದ ವತಿಯಿಂದ ಪಟಕುಣಿತ ನಡೆಯಿತು. ಈ ವೇಳೆ ವಿವಿಧ ಇಲಾಖೆಯಿಂದ ಸ್ಥಬ್ಧಚಿತ್ರ ಮೆರವಣಿಗೆ ನಡೆಯಿತು.

ವೇದಿಕೆ ಬಿಟ್ಟು ಹೋಗಿ ಫೋಟೊ ತೆಗೆಸಿಕೊಂಡ ಮಿನಿಸ್ಟರ್

ಕೆಎಸ್ಆರ್’ಟಿಸಿ ವತಿಯಿಂದ ವಿಭಿನ್ನವಾದ ಸ್ಥಬ್ಧಚಿತ್ರವನ್ನು ರೂಪಿಸಲಾಗಿತ್ತು. ಇದನ್ನು ಗಮನಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ವೇದಿಕೆಯಿಂದ ಕೆಳಗಿಳದು ಹೋಗಿ ಸ್ಥಬ್ಧಚಿತ್ರ ಮತ್ತು ಅದರಲ್ಲಿದ್ದ ಕಲಾವಿದರ ಜೊತೆಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು. ಜಿಲ್ಲಾಧಿಕಾರಿ ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು, ಅಪರ ಜಿಲ್ಲಾಧಿಕಾರಿ ಅನುರಾಧ, ಸಿಇಒ ವೈಶಾಲಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

74634382 961937044167716 452417050208370688 n.jpg? nc cat=109& nc oc=AQlB Lb nf RRAFZBtGP1 utDHiCfJqinlTR cgFgj8zawUAEdHyDF3YPS2pOajvFw& nc ht=scontent.fblr11 1

ಜನರಿಲ್ಲ, ಜನಪ್ರತಿಧಿಗಳು ಇಲ್ಲ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಈ ಬಾರಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಮಾರಂಭದಲ್ಲಿ ಸಾರ್ವಜನಿಕರ ಸಂಖ್ಯೆ ಬಹಳ ಕಡಿಮೆಯಿತ್ತು. ಶಾಲೆ, ಕಾಲೇಜು ವಿದ್ಯಾರ್ಥಿಗಳಷ್ಟೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮತ್ತೊಂದೆಡೆ ಜನಪ್ರತಿನಿಧಿಗಳು ಕೂಡ ರಾಜ್ಯೋತ್ಸವಕ್ಕೆ ಗೈರಾಗಿದ್ದು ಎದ್ದು ಕಾಣುತ್ತಿತ್ತು. ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ರುದ್ರೇಗೌಡ, ಪ್ರಸನ್ನಕುಮಾರ್, ಸಿ.ಎಂ.ಇಬ್ರಾಹಿಂ ಸೇರಿದಂತೆ ಹಲವರು ಗೈರಾಗಿದ್ದರು.  

73194946 961936944167726 877444776142569472 n.jpg? nc cat=107& nc oc=AQkL 46noIaUC0daitO1riuUt5XlubwncLtZsmHOVU EPGbSVvvFatGL PQkOX4IZk& nc ht=scontent.fblr11 1
76935221 961936937501060 2273126770146279424 n.jpg? nc cat=103& nc oc=AQlH2BDjqlCAe8exXZUlEU4MvuqlDuF8b1MTHd1DBijbC vTzyPeUOt8A5egBDGARoQ& nc ht=scontent.fblr11 1
74328126 961936987501055 8600810630309478400 n.jpg? nc cat=103& nc oc=AQlrAkqarWqmqdwvBDSYQNJAYhzoTlgfGU3rozC 44UE8OpkAxTQObCo2 2aXmVuAl0& nc ht=scontent.fblr11 1
73249618 961937024167718 6411297617761796096 n.jpg? nc cat=101& nc oc=AQkYSyHns7 dxD8vfVokvcedoXZBwUrbz4qIXL Y1Q0hzScqknB2C YZDvkBH99Q8ZM& nc ht=scontent.fblr11 1
74647620 961937060834381 4235667348264058880 n.jpg? nc cat=104& nc oc=AQkuNwsjTg11QOwgmp6K Co4l8SqLAbO1wyT2QHg1CHEm2iq4KAfyQvJLerZtJfZSSI& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment