Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಜನ ಶತಾಬ್ದಿ, ಇಂಟರ್‌ಸಿಟಿ ವಿರುದ್ಧ ದೂರು, ಬಳಕೆದಾರರ ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು? ಇಲ್ಲಿದೆ 7 ಪಾಯಿಂಟ್‌

ಜನ ಶತಾಬ್ದಿ, ಇಂಟರ್‌ಸಿಟಿ ವಿರುದ್ಧ ದೂರು, ಬಳಕೆದಾರರ ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು? ಇಲ್ಲಿದೆ 7 ಪಾಯಿಂಟ್‌

10/12/2023 11:24 AM
ನಿತಿನ್‌ ಕೈದೊಟ್ಲು

SHIVAMOGGA LIVE NEWS | 10 DECEMBER 2023

» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

SHIMOGA : ನಗರದಲ್ಲಿ ನೈಋತ್ಯ ರೈಲ್ವೆ ಬಳಕೆದಾರರ ಸಭೆ ನಡೆಯಿತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಶಾಂತಲಾ ಸ್ಪೆರೋಕಾಸ್ಟ್‌ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ರೈಲ್ವೆ ಕುರಿತು ಪ್ರಮುಖ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಹುಬ್ಬಳ್ಳಿ ವಲಯದ ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ನೇಮಕವಾಗಿರುವ ಕೆ.ವಿ.ವಸಂತ ಕುಮಾರ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್‌.ಗೋಪಿನಾಥ್‌ ರೈಲ್ವೆ ಬಳಕೆದಾರರ ಅಹವಾಲು ಆಲಿಸಿದರು.

ಏನೇನೆಲ್ಲ ಸಲಹೆಗಳು ಬಂದವು?

ಸಲಹೆ 1 : ಜನಶತಾಬ್ದಿ ರೈಲು

point-1ಶಿವಮೊಗ್ಗದ ಜನಶತಾಬ್ದಿ ರೈಲಿನಲ್ಲಿ ಶೌಚಾಲಯದ ಕೆಟ್ಟ ವಾಸನೆ ಬರುತ್ತದೆ. ಎಸಿ ಬೋಗಿಯಲ್ಲಿಯು ಇದೆ ಸ್ಥಿತಿ ಇದೆ. ರೈಲಿನಲ್ಲಿ ಕೆಲವು ಸೀಟುಗಳು ಹಾಳಾಗಿವೆ. ಅವುಗಳ ರಿಪೇರಿ ಕಾರ್ಯ ನಡೆಯುತ್ತಿಲ್ಲ.

ಮೆಜೆಸ್ಟಿಕ್‌ನಲ್ಲಿ ಪ್ಲಾಟ್‌ಫಾರಂ ಖಾಲಿ ಇಲ್ಲ ಎಂದು ಜನತಶಾಬ್ದಿ ರೈಲನ್ನು ಚಿಕ್ಕಬಾಣಾವರ ಅಥವಾ ಯಶವಂತಪುರ ಸಮೀಪ ಒಂದು ಗಂಟೆ ನಿಲ್ಲಿಸುತ್ತಾರೆ. ಅದರ ಬದಲು ಜನಶತಾಬ್ದಿ ರೈಲು ಶಿವಮೊಗ್ಗದಿಂದ 5.15ಕ್ಕೆ ಹೊರಡುವ ಬದಲು 6 ಗಂಟೆಗೆ ಹೊರಡುವಂತೆ ವ್ಯವಸ್ಥೆ ಮಾಡಲಿ. ಜನ ನೆಮ್ಮದಿಯಿಂದ ಬಂದು ರೈಲು ಹತ್ತಬಹುದು.ರವಿಪ್ರಕಾಶ್‌, ಕೈಗಾರಿಕೋದ್ಯಮಿ
ಶಿವಮೊಗ್ಗದಲ್ಲಿ ಜನ ಶತಾಬ್ದಿ ರೈಲು ಹತ್ತಲು ಎರಡನೇ ಪ್ಲಾಟ್‌ಫಾರಂಗೆ ಹೋಗಬೇಕು. ಹಿರಿಯರು ಸೇರಿದಂತೆ ಮೆಟ್ಟಲು ಹತ್ತಲಾಗದವರಿಗೆ ಲಿಫ್ಟ್‌ ಇದೆ. ಆದರೆ ಅದಕ್ಕೆ ಹೆಚ್ಚು ಜನರಿರುತ್ತಾರೆ. ಆದ್ದರಿಂದ ಬೆಂಗಳೂರು ಮಾದರಿ ಶಿವಮೊಗ್ಗ ನಿಲ್ದಾಣದಲ್ಲಿಯು ಎಸ್ಕಲೇಟರ್‌ ಅಗತ್ಯವಿದೆ.ಸೌಮ್ಯಾ ಗುರುರಾಜ್‌

railway meeting

ಸಲಹೆ 2 : ಇಂಟರ್‌ ಸಿಟಿ ರೈಲು

point-2ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ರೈಲು ತಡವಾಗಿ ಸಂಚರಿಸುತ್ತಿದೆ. ಭದ್ರಾವತಿಗೆ ತಡವಾಗಿ ಬರುತ್ತಿದೆ. ಈ ರೈಲಿನಲ್ಲಿ ಮೂರು ಹಳೆಯ ಬೋಗಿಗಳನ್ನು ಹಾಕಲಾಗಿದೆ. ಇದರಲ್ಲಿ ಸೀಟಿಂಗ್‌ ವ್ಯವಸ್ಥೆ ಕೂಡ ಸರಿ ಇಲ್ಲ.

ಸಲಹೆ 3 : ಹೆಚ್ಚುವರಿ ರೈಲು ಬೇಕು

point-3ಶಿವಮೊಗ್ಗ – ಬೆಂಗಳೂರು ಮಧ್ಯೆ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಆದ್ದರಿಂದ ಹೆಚ್ಚುವರಿ ರೈಲಿನ ಅಗತ್ಯವಿದೆ. ಯಶವಂತಪುರ – ಶಿವಮೊಗ್ಗ ರಾತ್ರಿ ರೈಲು ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುತ್ತಿದೆ. ಇದನ್ನು ವಾರ ಪೂರ್ತಿ ಓಡಿಸಬೇಕು.

ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ರಿಜರ್ವೆಷನ್‌ಗೆ ಸೀಟು ಸಿಗುತ್ತಿಲ್ಲ. ತತ್ಕಾಲ್‌ನಲ್ಲಿಯು ಸೀಟು ದೊರೆಯುತ್ತಿಲ್ಲ. ಆದ್ದರಿಂದ ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿ ರೈಲು ಓಡಿಸುವುದು ತುಂಬಾ ಅಗತ್ಯವಿದೆ.ವಿಜಯ ಕುಮಾರ್‌ ದಿನಕರ್‌, ಗಾಂಧಿ ಬಜಾರ್‌ ವರ್ತಕರ ಸಂಘದ ಅಧ್ಯಕ್ಷ

r1 1

ಸಲಹೆ 4 : ಶಿವಮೊಗ್ಗ ರೈಲ್ವೆ ನಿಲ್ದಾಣ

point-4ಶಿವಮೊಗ್ಗ ರೈಲ್ವೆ ನಿಲ್ದಾಣದ ಶೌಚಾಲಯ ಸ್ವಚ್ಛವಾಗಿಲ್ಲ. ಕಳೆದ ಕೆಲ ದಿನದಿಂದ ಕ್ಯಾಂಟೀನ್‌ ಬಂದ್‌ ಆಗಿದೆ.

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಎಂಟ್ರಿ ಮತ್ತು ಎಗ್ಸಿಟ್‌ ಒಂದೇ ಕಡೆ ಇದೆ. ಇದರಿಂದ ಪ್ರಯಾಣಿಕರಿಗೆ ಅನಾನೂಕೂಲವಾಗುತ್ತಿದೆ. ಎಂಟ್ರಿ ಮತ್ತು ಎಗ್ಸಿಟ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಲಾಕ್‌ ಡೌನ್‌ ಮೊದಲು ನಿಲ್ದಾಣದಲ್ಲಿ ಎಲೆಕ್ಟ್ರಿಕ್‌ ವಾಹನದ ವ್ಯವಸ್ಥೆ ಇತ್ತು. ಈಗ ಅದು ಇಲ್ಲ. ಮೊದಲು ಮೂರು ಕಡೆ ಕುಡಿಯುವ ನೀರಿನ ವ್ಯವಸ್ಥೆ ಇತ್ತು. ಈಗ ಎರಡು ಕಡೆ ಮಾತ್ರ ಇದೆ.ಪ್ರಕಾಶ್‌, ಶಿವಮೊಗ್ಗ ನಿವಾಸಿ

r2 1

ಸಲಹೆ 5 : ಆಟೋ ನಿಲ್ದಾಣ ಮತ್ತು ಬಸ್‌ ವ್ಯವಸ್ಥೆ

point-5ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಆಟೋಗಳನ್ನು ನಿಲ್ಲಿಸಲಾಗುತ್ತದೆ. ಪ್ರತಿ ರೈಲು ಬಂದಾಗಲು ಪ್ರಯಾಣಿಕರು ಹೊರ ಬರಲು ಕಷ್ಟವಾಗುತ್ತದೆ. ಆಟೋಗಳ ನಿಲುಗಡೆಗೆ ವ್ಯವಸ್ಥೆ ಇದೆ. ಅಲ್ಲಿಯೇ ಅವು ನಿಲ್ಲುವಂತೆ ಮಾಡಬೇಕು. ಪ್ರೀಪೇಡ್‌ ಆಟೋ ವ್ಯವಸ್ಥೆ ಜಾರಿಗೊಳಿಸಬೇಕು. ಇನ್ನು, ರೈಲ್ವೆ ನಿಲ್ದಾಣಕ್ಕೆ ಬಸ್‌ ವ್ಯವಸ್ಥೆ ಬೇಕು.

ಸಲಹೆ 6 : ಭದ್ರಾವತಿ ರೈಲ್ವೆ ನಿಲ್ದಾಣ

point-6ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಕೆಲವು ರೈಲು ತಡವಾಗಿ ಬಂದಾಗ ಅವುಗಳ ಕುರಿತು ವಿಚಾರಿಸಿದಾಗ ಸೂಕ್ತ ವಿವರಣೆ ನೀಡುವುದಿಲ್ಲ. ರೈಲು ಟಿಕೆಟ್‌ ಬುಕ್‌ ಮಾಡಲು ತೆರಳಿದರೆ ಪ್ರಯಾಣಿಕರಿಂದಲೇ ರೈಲಿನ ನಂಬರ್‌ ಕೇಳಿ ಕಿರಿಕಿರಿ ಮಾಡುತ್ತಾರೆ. ಶೌಚಾಲಯದ ಸಮಸ್ಯೆ ಇದೆ. ಮಳೆ ಬಂದರೆ ನಿಲ್ದಾಣ ಸೋರುತ್ತದೆ.

ಇದನ್ನೂ ಓದಿ – ಬೆಂಗಳೂರು – ಶಿವಮೊಗ್ಗ ಎಷ್ಟು ಎಕ್ಸ್‌ಪ್ರೆಸ್‌ ರೈಲುಗಳಿವೆ? ಯಾವ್ಯಾವ ರೈಲಿನ ಟೈಮಿಂಗ್‌ ಏನು?

shimoga railway station

ಸಲಹೆ 7 : ಲೈನ್‌ ಡಬ್ಲಿಂಗ್‌, ಹೊಸ ಮಾರ್ಗ

point-7ಬೀರೂರು – ಶಿವಮೊಗ್ಗ ಮಧ್ಯೆ ರೈಲ್ವೆ ಲೇನ್‌ ಡಬ್ಲಿಂಗ್‌ ಆಗಬೇಕು. ತಾಳಗುಪ್ಪ – ಹೊನ್ನಾವರ ರೈಲ್ವೆ ಮಾರ್ಗ ನಿರ್ಮಿಸಿದರೆ ಗೋವಾ, ಮುಂಬೈ ಸಂಪರ್ಕಕ್ಕೆ ಅನುಕೂಲ. ಶಿವಮೊಗ್ಗ – ಚಿಕ್ಕಜಾಜೂರು ರೈಲ್ವೆ ಮಾರ್ಗ ನಿರ್ಮಿಸಿದರೆ ಬಳ್ಳಾರಿ, ಚಿತ್ರದುರ್ಗ ಪ್ರಯಾಣಕ್ಕೆ ಅನುಕೂಲ. ಶಿವಮೊಗ್ಗದಿಂದ – ಹಾಸನ ಸಕಲೇಶಪುರ ಮಾರ್ಗದಲ್ಲಿ ರೈಲು ವ್ಯವಸ್ಥೆ ಮಾಡಿದರೆ ಕೇರಳ ಸಂಪರ್ಕ ಅನುಕೂಲ. ಶಿವಮೊಗ್ಗ – ಚಿಕ್ಕಮಗಳೂರು ರೈಲು ಸರಿಯಾದ ಟೈಮ್‌ಗೆ ಸಂಚರಿಸುತ್ತಿಲ್ಲ.

ಯಶವಂತಪುರದಲ್ಲಿ ಬೆಂಗಳೂರು – ಶಿವಮೊಗ್ಗ ರೈಲು ಎಲ್ಲಿ ಬರುತ್ತೆ, ಯಾವ ಪ್ಲಾಟ್‌ಫಾರಂನಿಂದ ಹೊರಡಲಿದೆ ಅನ್ನುವುದೇ ಗೊತ್ತಾಗುವುದಿಲ್ಲ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಮೆಜೆಸ್ಟಿಕ್‌ನಲ್ಲಿ ಒಮ್ಮೆ ಎಂಟನೇ ಪ್ಲಾಟ್‌ಫಾರಂ ಒಮ್ಮೆ ಹತ್ತನೆ ಪ್ಲಾಟ್‌ಫಾರಂ ಎಂದು ಪ್ರಯಾಣಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.ವಿನೋದ್‌ ಪೈ
ಕೆ.ವಿ.ವಸಂತ ಕುಮಾರ್‌ ಅವರು ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿರುವುದು ಖುಷಿಯ ವಿಚಾರ. ಹೊಸ ರೈಲು ಬಿಡಿಸಲು ಈ ಸಮಿತಿಗೆ ಶಕ್ತಿ ಇದೆ. ನಮ್ಮೂರ ರೈಲ್ವೆ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಯತ್ನ ಮಾಡೋಣ.ಎನ್‌.ಗೋಪಿನಾಥ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಅಧ್ಯಕ್ಷ

ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಕೆ.ವಿ.ವಸಂತ ಕುಮಾರ್‌ ಮಾತನಾಡಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ರೈಲ್ವೆ ಸಮಸ್ಯೆಗಳ ಕುರಿತ ಹೋರಾಟಕ್ಕೆ ಹಿಂದಿನಿಂದ ಸ್ಪಂದಿಸಿದೆ. ರೈಲ್ವೆ ನಿಲ್ದಾಣದಲ್ಲಿ ಆಟೋಗಳ ನಿಲುಗಡೆ ಸಮಸ್ಯೆ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಭೇಟಿಯಾಗಿ ಚರ್ಚೆ ನಡೆಸುತ್ತೇವೆ. ಭದ್ರಾವತಿ ರೈಲ್ವೆ ನಿಲ್ದಾಣಕ್ಕೂ ಭೇಟಿ ನೀಡಲಿದ್ದೇವೆ. ಇನ್ನು, ಸಭೆಯಲ್ಲಿನ ಸಲಹೆಗಳ ಕುರಿತು ರೈಲ್ವೆ ಇಲಾಖೆಯ ವಿಭಾಗೀಯ ಮತ್ತು ವಲಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಬಜೆಟ್‌ನಲ್ಲಿ ತರಲು ಸೂಕ್ತವೆನಿಸುವ ಸಂಗತಿಗಳಿದ್ದರೆ ಸಂಸದರೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದರು.

ಇದನ್ನೂ ಓದಿ – ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲುಗಳು, ಯಾವ್ಯಾವ ರೈಲಿನ ಟೈಮಿಂಗ್‌ ಏನು? ಇಲ್ಲಿದೆ ಲಿಸ್ಟ್‌

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article Crime-News-General-Image ರಾತ್ರಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಮೂವರಿಗೆ ಹಿಂಬದಿಯಿಂದ ಬೈಕ್‌ ಡಿಕ್ಕಿ
Next Article DINA-BHAVISHYA ದಿನ ಭವಿಷ್ಯ | 11 ಡಿಸೆಂಬರ್‌ 2023 | ನಿಮ್ಮ ರಾಶಿಯ ಇವತ್ತಿನ ಭವಿಷ್ಯ ಹೇಗಿದೆ?

ಇದನ್ನೂ ಓದಿ

Police-Jeep-at-Shimoga-General-Image
CRIME DIARYSHIVAMOGGA CITY

ಸೋಮಿನಕೊಪ್ಪ ಸಮೀಪ ಕೆಲಸ ಮುಗಿಸಿ ಮನೆಗೆ ಬಂದ ದಂಪತಿಗೆ ಕಾದಿತ್ತು ಶಾಕ್

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
09/07/2025
Crime-News-General-Image
CRIME DIARYSHIVAMOGGA CITY

ನಿಲ್ದಾಣದಲ್ಲಿಯೇ ಸಿಟಿ ಬಸ್‌ ಕಂಡಕ್ಟರ್‌ಗಳ ಮಧ್ಯೆ ಕಿರಿಕ್‌, ಕೈ ಕೈ ಮಿಲಾಯಿಸಿದ ನಿರ್ವಾಹಕರು

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
08/07/2025
Police-Van-Jeep-at-Shimoga-Nehru-Road
CRIME DIARYSHIVAMOGGA CITY

ಬೈಕ್‌ನಲ್ಲಿ ಬಂದು ಆಟೋ ಅಡಗಟ್ಟಿದ ದುಷ್ಕರ್ಮಿಗಳು, ಹಿಂಬದಿ ಕುಳಿತಿದ್ದ ವ್ಯಕ್ತಿ ಬಳಿ ಇದ್ದ ಬ್ಯಾಗ್‌ ಕಸಿದು ಪರಾರಿ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
08/07/2025
KS-Eshwarappa-Press-meet-in-Shimoga
SHIVAMOGGA CITY

‘ಮಸೀದಿಗಳಲ್ಲಿ ಆಜಾನ್‌ ಕೂಗುವ ಬದಲು ಮೊಬೈಲ್‌ ಆ್ಯಪ್‌ಗಳನ್ನು ಬಳಸಿʼ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
08/07/2025
Shimoga-Mahanagara-Palike-ambedkar-statue
SHIVAMOGGA CITY

ಶಿವಮೊಗ್ಗ ಪಾಲಿಕೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ, ಕಾರಣವೇನು? ಬೇಡಿಕೆಗಳೇನು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
07/07/2025
Crime-News-General-Image
CRIME DIARYSHIVAMOGGA CITY

ವಿದ್ಯಾನಗರದಲ್ಲಿ ಹಾಡಹಗಲೆ ಮನೆ ಬಾಗಿಲು ತಟ್ಟಿದ ವ್ಯಕ್ತಿ, ಬಾಗಿಲು ತೆಗದಾಗ ಮಾಲೀಕನಿಗೆ ಕಾದಿತ್ತು ಶಾಕ್

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
07/07/2025
Previous Next

ಶಿವಮೊಗ್ಗ ಲೈವ್ ಗ್ರೂಪ್ ಸೇರಲು ಕ್ಲಿಕ್ ಮಾಡಿ

🟢 shivamoggalive.com

whatsapp-logo
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?