ಶಿವಮೊಗ್ಗದಲ್ಲಿ ನಾಳೆ ನಟಿ ಉಮಾಶ್ರೀ ಅಭಿನಯದ ನಾಟಕ ಪ್ರದರ್ಶನ, ಎಲ್ಲಿ? ಎಷ್ಟು ಹೊತ್ತಿಗೆ?

ಶಿವಮೊಗ್ಗ: ಮುಖಾಮುಖಿ ರಂಗ ತಂಡದಿಂದ ಖ್ಯಾತ ರಂಗ ಕಲಾವಿದೆ ಉಮಾಶ್ರೀ (Umashree) ಅಭಿನಯಿಸಿರುವ ಏಕವ್ಯಕ್ತಿ ನಾಟಕ ಶರ್ಮಿಷ್ಠೆ ಜನವರಿ11ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ಹೇಳಿದರು.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ » ಬೆಜ್ಜವಳ್ಳಿ ಸಂಕ್ರಾಂತಿ ಉತ್ಸವಕ್ಕೆ ಮೂವರು ನಟರು, ಇಬ್ಬರು ಸಚಿವರು, ಏನೆಲ್ಲ ಕಾರ್ಯಕ್ರಮ ಇರಲಿದೆ?

Umashree-Sharmishte-Drama-in-Kuvempu-Rangamandira

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಚಂದ್ರಶೇಖರ್‌, ಶಿವಮೊಗ್ಗದಲ್ಲಿ ಶರ್ಮಿಷ್ಠೆ ನಾಟಕ ಎರಡನೇ ಬಾರಿ ಪ್ರದರ್ಶನಗೊಳ್ಳುತ್ತಿದೆ . ಚಿದಂಬರ ರಾವ್ ಜಂಬೆ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಡಾ.ಬೇಲೂರು ರಘನಂದನ್ ರಚಿಸಿದ್ದಾರೆ ಎಂದು ತಿಳಿಸಿದರು.

Umashree-Sharmishte-Drama-in-Kuvempu-Rangamandira

ನಾಟಕವು ಯಾಯತಿ, ಪುರು ಮತ್ತು ಶರ್ಮಿಷ್ಠೆಯರ ನಡುವೆ ಏರ್ಪಡುವ ತ್ರಿಕೋನ ಸಂಘರ್ಷವಾಗಿದೆ. ಹಲವು ಆಯಾಮಗಳನ್ನು ಅನಾವರಣಗೊಳಿಸುತ್ತಾ, ಸತ್ಯಗಳನ್ನು ಅರಗಿಸಿಕೊಳ್ಳಲಾರದೇ ಅತಂತ್ರ ಮಾನಸಿಕ ಸ್ವಾಸ್ಥ್ಯದ ಸ್ಥಿತ್ಯಂತರವನ್ನು ವರ್ತಮಾನ ಸಂದರ್ಭದಲ್ಲಿ ತೆರೆದಿಡಲಿದ್ದು, ಈ ನಾಟಕ ಏಕವ್ಯಕ್ತಿಯದ್ದಾಗಿದೆ ಎಂದರು. ಮಂಜು ರಂಗಾಯಣ, ಸಿ.ಎ.ಮಹೇಂದ್ರ, ಶಶಿಕುಮಾರ್, ಸಂದೀಪ್ ಸುದ್ದಿಗೋಷ್ಠಿಯಲ್ಲಿದ್ದರು.

Leave a Comment