ಉಪ ಲೋಕಾಯುಕ್ತರ ದಿಢೀರ್ ಭೇಟಿ, ಅಧಿಕಾರಿಗಳು ಕಕ್ಕಾಬಿಕ್ಕಿ, ಎಲ್ಲಿಗೆಲ್ಲ ಭೇಟಿ ಕೊಟ್ಟರು? ಏನೇನೆಲ್ಲ ಪರಿಶೀಲಿಸಿದರು ಗೊತ್ತಾ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA | 10 ಜನವರಿ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಸತತವಾಗಿ ಶಾಲೆಗೆ ಗೈರಾಗುತ್ತಿರುವ ವಿದ್ಯಾರ್ಥಿಗಳು, ಹಾಜರಾತಿಗೆ ಸಹಿ ಹಾಕಿ ಶಾಲೆಯಿಂದ ಹೊರ ಹೋದ ಶಿಕ್ಷಕ. ಶಾಲಾ ಕಟ್ಟಡ ನಿರ್ವಹಣೆಯಿಲ್ಲದೆ ಶಿಥಿಲಗೊಂಡಿರುವುದು. ಇದೆಲ್ಲ ಉಪಲೋಕಾಯುಕ್ತರ ಅನಿರೀಕ್ಷಿತ ಶಾಲಾ ಭೇಟಿ ಸಂದರ್ಭದಲ್ಲಿ ಈ ಕಂಡುಬಂದ ಸಂಗತಿಗಳು.

2019 readers copy new

ಉಪಲೋಕಾಯುಕ್ತ ಬಿ.ಎಸ್.ಪಾಟೀಲ್ ಅನಿರೀಕ್ಷಿತವಾಗಿ ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆ, ಆಸ್ಪತ್ರೆ, ಹಾಸ್ಟೆಲ್’ಗಳಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಕೆಲ ವಿಷಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅದೇ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

ಜಿಪಂ ಸಭಾಂಗಣದಲ್ಲಿ ಅರ್ಧ ಗಂಟೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉಪಲೋಕಾಯುಕ್ತರು, ಸಾರ್ವಜನಿಕರಿಗೆ ಸರ್ಕಾರದ ಸವಲತ್ತು ನ್ಯಾಯಬದ್ಧವಾಗಿ ಕಾರ್ಯ ತಲುಪಿಸಿ, ಆಗ ಲೋಕಾಯುಕ್ತಕ್ಕೆ ಸಲ್ಲಿಕೆಯಾಗುವ ದೂರುಗಳ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಸೂಚನೆ ನೀಡಿದರು.

ಬಳಿಕ ವಿವಿಧೆಡೆ ಭೇಟಿಗೆ ತೆರಳಿದರು, ಜಿಲ್ಲಾಧಿಕಾರಿ, ಜಿಪಂ ಸಿಇಒಗೂ ತಾವು ಎಲ್ಲಿಗೆ ತೆರಳುತ್ತಿದ್ದೇವೆ ಎಂಬುದರ ಗುಟ್ಟು ಬಿಟ್ಟು ಕೊಡಲಿಲ್ಲ.

ಶಾಲೆಯಿಂದ ಹೊರಗುಳಿದ ಮಕ್ಕಳು

ಗಾಡಿಕೊಪ್ಪ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೊದಲು ಶಿಕ್ಷಕರ ಹಾಜರಾತಿ ಪುಸ್ತಕ ತರಿಸಿಕೊಂಡು ಎಲ್ಲ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ್ ಪರಿಶೀಲಿಸಿದರು. ಈ ವೇಳೆ ಶಿಕ್ಷಕರೊಬ್ಬರು ಸಹಿ ಹಾಕಿ ಹೊರ ಹೋಗಿರುವುದು ಬೆಳಕಿಗೆ ಬಂತು. ಶಾಲೆಯಲ್ಲಿ ವಿದ್ಯುತ್ ಸಂಪರ್ಕದ ಸಮಸ್ಯೆಯಿತ್ತು. ಹೀಗಾಗಿ ಮೆಸ್ಕಾಂ ಅಧಿಕಾರಿಗಳನ್ನು ಭೇಟಿಯಾಗಲು ಶಿಕ್ಷಕ ತೆರಳಿದ್ದಾರೆ ಎಂದು ಶಾಲೆ ಸಿಬ್ಬಂದಿ ಹೇಳಿದರೂ ಉಪ ಲೋಕಾಯುಕ್ತರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

81828529 1025021034525983 4861937819846705152 n.jpg? nc cat=107& nc ohc=CLEeWwbrxfUAQn5Z9G2tC4d6qkzCqKWKAD2h30ZyNvVQOST HOaNOfmeQ& nc ht=scontent.fblr1 3

ಬಳಿಕ ಮಕ್ಕಳ ಹಾಜರಾತಿ ಪರಿಶೀಲನೆ ವೇಳೆ 8ನೇ ತರಗತಿಯ ಮೂವರು ಮಕ್ಕಳು ಸತತವಾಗಿ ಗೈರಾಗುತ್ತಿರುವುದು ಗಮನಕ್ಕೆ ಬಂತು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಕರೆ ತರಲು ಕೈಗೊಂಡ ಕ್ರಮಗಳು, ಪಾಲಕರಿಗೆ ನೋಟಿಸ್ ನೀಡಿರುವುದರ ಪ್ರತಿಯನ್ನು ಉಪಲೋಕಾಯುಕ್ತರು ಪಡೆದುಕೊಂಡರು. ಬಿಸಿಯೂಟ, ದಿನಸಿ ಹಾಗೂ ಪಡಿತರ ಸಂಗ್ರಹದ ರಿಜಿಸ್ಟರ್‌ ಪರಿಶೀಲಿಸಿದರು. ಶಾಲೆ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಡಿಡಿಪಿಐ ಎಚ್.ಮಂಜುನಾಥ್ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

82603678 1025021204525966 4107620161123516416 n.jpg? nc cat=103& nc ohc=i3I r9KJL4MAQkrMgL8 W9AMwFR25UwI9Ep N9k4AoG03H6CVAbG0U1kg& nc ht=scontent.fblr1 3
81532547 1025021177859302 1910416464171499520 n.jpg? nc cat=101& nc ohc=sN2ObRXTf2gAQnKT8VKUiJl6GmJAPvsoBFa5X3TOl5M4XntMN9YLjPCfw& nc ht=scontent.fblr1 4
81699073 1025021134525973 1798753022487035904 n.jpg? nc cat=109& nc ohc=OGy6eg7vVVYAQnsepjatY8OwmpESsR2ePeEVXL hFtv7hkeGl 6BGBIpw& nc ht=scontent.fblr1 3
82250667 1025021081192645 8109983129227231232 n.jpg? nc cat=105& nc ohc=uWtCEX5KqDEAQlmawaxAtW81 55eNXKrRTbO BPvmw2MJZEKwJyJQcj2w& nc ht=scontent.fblr1 4

ವಿದ್ಯಾರ್ಥಿನಿಯರ ಹಾಸ್ಟೆಲ್ ಬಗ್ಗೆ ಮೆಚ್ಚುಗೆ

ಬಾಪೂಜಿ ನಗರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿದ ಬಿ.ಎಸ್.ಪಾಟೀಲ್, ಮಕ್ಕಳ ಕೋಣೆ, ಶೌಚಗೃಹ, ಅಡುಗೆ ಮನೆ, ವಿದ್ಯುತ್ ಸಂಪರ್ಕ, ನೀರಿನ ಪೂರೈಕೆ ಎಲ್ಲವನ್ನೂ ಪರಿಶೀಲಿಸಿದರು. ಅಲ್ಲಿನ ವಾರ್ಡನ್ ಸಯೀದಾಬಾನು, ವಾರಕ್ಕೊಮ್ಮೆ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆ ಆಯೋಜಿಸುವುದಾಗಿ ಮಾಹಿತಿ ನೀಡಿದರು. ಇಡೀ ಹಾಸ್ಟೆಲ್ ವ್ಯವಸ್ಥೆ ಹಾಗೂ ವಾರ್ಡನ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

81768397 1025020981192655 5175615761263099904 n.jpg? nc cat=103& nc ohc=jSX7z4 YBVMAQlzKT Kh0KJR7InqpeKzcBk3iU fRKmRj1xaGEEl0RtpQ& nc ht=scontent.fblr1 3
81921228 1025020941192659 7753603587866886144 n.jpg? nc cat=101& nc ohc=3l3nBMvB0roAQkNIZS6s8vsXKxcay1A MJlwvboUgOrPkJz4xjd 1bVuw& nc ht=scontent.fblr1 4
81774553 1025020904525996 3784646132362117120 n.jpg? nc cat=104& nc ohc=8Q0iqyOXvRoAQm fCsbF8myobcb2uzoblxruMJlc9Df5lNiYSD9qwV87w& nc ht=scontent.fblr1 4
81793538 1025020847859335 7211757033563881472 n.jpg? nc cat=105& nc ohc=lX9X6VunVDMAQlSH m9EjrIc8r6 4 1CQ 0ydXM4MxYuK UE2pPTfS Ug& nc ht=scontent.fblr1 4
81945292 1025020701192683 2037647152259268608 n.jpg? nc cat=106& nc ohc=dXhsKkfexDkAQnHwODzpXrg78aDRSOcR UgLJaGAVg5x9GOlJxdJP3TyA& nc ht=scontent.fblr1 3

ಆಸ್ಪತ್ರೆಯಲ್ಲಿ ಪರಿಶೀಲನೆ

ಬಾಪೂಜಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು, ಔಷಧಗಳ ದಾಸ್ತಾನು, ಸಿಬ್ಬಂದಿಯ ಹಾಜರಾತಿ, ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು. ಹಾಜರಾತಿಗೆ ಆಳವ ಅಡಿಸಿರುವ ಬಯೋಮೆಟ್ರಿಕ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಪರೀಕ್ಷಿಸಿದರು. ಯಾವ ಔಷಧಗಳ ಅಗತ್ಯತೆ ಹೆಚ್ಚಿದೆ, ಪೂರೈಕೆ ಹೇಗಿದೆ ಎಂಬ ಬಗ್ಗೆಯೂ ಮಾಹಿತಿ ಪಡೆದರು.

81546799 1025020637859356 7942509817346654208 n.jpg? nc cat=109& nc ohc=3iiymYT ErEAQl1aM3 rAo52SEmDOtUQwG3z8A7FQS0cxVx25RiGVULKQ& nc ht=scontent.fblr1 3
82035154 1025019981192755 4505693527006511104 n.jpg? nc cat=101& nc ohc=0rLSwYn j gAQl7XrIHQCV4JKMtDJHmQdxj9uLzEWwptvedl7AhsQYwKA& nc ht=scontent.fblr1 4
81598868 1025019944526092 5033970518684860416 n.jpg? nc cat=111& nc ohc=eUalCuxBn3sAQlGE3musM lIraFk0M8mi9JHfNBO1Vxt2hp53Ygy4WQJw& nc ht=scontent.fblr1 4
82770302 1025019277859492 6112917980486565888 n.jpg? nc cat=108& nc ohc=9UFX91qVfKYAQnmvseLQB8d7cnEHXwK43 QxgaV zbenTkG G3uhYP2Qw& nc ht=scontent.fblr1 4

ಓಡೋಡಿ ಬಂದ ಶಿಕ್ಷಕ, ರಂಗೋಲಿ ಹಾಕಿ ಕಾದ ಸಿಬ್ಬಂದಿ

ಉಪ ಲೋಕಾಯುಕ್ತರ ಭೇಟಿ ವೇಳೆ ಶಾಲೆಯಲ್ಲಿ ಇರದ ಶಿಕ್ಷಕರೊಬ್ಬರು, ಕೊನೆಗೆ ಓಡೋಡಿ ಬಂದಿದ್ದರು. ಆಸ್ಪತ್ರೆ ಪರಿಶೀಲನೆ ವೇಳೆ ಓಡೋಡಿ ಬಂದ ಶಿಕ್ಷಕರು ತಾವು ಶಾಲೆಯಲ್ಲಿ ಇರದಿದ್ದಕ್ಕೆ ಸಮಜಾಯಿಷಿ ನೀಡಿದರು. ಇನ್ನು, ಉಪ ಲೋಕಾಯುಕ್ತರು ಭೇಟಿ ನೀಡುತ್ತಿದ್ದಾರೆ ಎಂದು ತಿಳಿದ ಕೂಡಲೇ ಬಾಪೂಜಿನಗರದ ಹಾಸ್ಟೆಲ್ ಒಂದರ ಮುಂದೆ ರಂಗೋಲಿ ಹಾಕಿ, ಮುಂಬಾಗಿಲುಗಳನ್ನು ತೆರೆದು ಉಪ ಲೋಕಾಯುಕ್ತರ ಆಗಮನಕ್ಕಾಗಿ ಸಿಬ್ಬಂದಿಗಳು ಕಾದು ನಿಂತಿದ್ದರು. ಆದರೆ ಆ ಹಾಸ್ಟೆಲ್’ಗೆ ಉಪ ಲೋಕಾಯುಕ್ತರು ಭೇಟಿಯನ್ನೇ ಕೊಡಲಿಲ್ಲ.

81724567 1025019227859497 2387547683913990144 n.jpg? nc cat=111& nc ohc=zDAvGDVtFsgAQlptmAryMKrL6QvVITkHMTdSjRCvr5DUZg tORK7o rg& nc ht=scontent.fblr1 4

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment