ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ನೈಟ್ ಲ್ಯಾಂಡಿಂಗ್ (night landing) ಸೌಲಭ್ಯ ಜಾರಿಗೆ ತರಲು ಮಣ್ಣಿನ ಪರೀಕ್ಷೆ (Soil Testing) ಕಾರ್ಯಕ್ಕೆ ನಡೆಸಲಾಗುತ್ತಿದೆ ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ತಿಳಿಸಿದರು.
ನಗರದ ಮಲ್ನಾಡ್ ಶೈರ್ ಹೊಟೇಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜಯ್ಯಮಠ ಅವರು, ನೈಟ್ ಲ್ಯಾಂಡಿಂಗ್ ವ್ಯವಸ್ಥೆಗಾಗಿ ರನ್ವೇ ಬದಿಯಲ್ಲಿ ದೀಪಗಳನ್ನು ಅಳವಡಿಸುವ ಕಾರ್ಯ ಬಾಕಿಯಿದೆ. ಈ ಉಪಕರಣಗಳನ್ನು ಅಳವಡಿಸಲು ಭೂಮಿಯ ಮಣ್ಣಿನ ಸಾಮರ್ಥ್ಯ ಮತ್ತು ಸ್ಥಿತಿಯನ್ನು ವೈಜ್ಞಾನಿಕವಾಗಿ ಪರೀಕ್ಷಿಸುವುದು ಅತ್ಯಗತ್ಯ. ಈ ಪರೀಕ್ಷಾ ವರದಿಯು ಬಂದ ತಕ್ಷಣವೇ ಅಗತ್ಯ ತಾಂತ್ರಿಕ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು
ಲೈಸೆನ್ಸ್ ನವೀಕರಣ: 22 ಲಕ್ಷ ದಂಡ ಪಾವತಿಸದ ಹಿನ್ನೆಲೆ ಲೈಸೆನ್ಸ್ ನವೀಕರಣ ಆಗಿರಲಿಲ್ಲ. ಕಳೆದ ಭೇಟಿ ವೇಳೆ ದಂಡ ಪಾವತಿಸಿ, ಲೈಸೆನ್ಸ್ ನವೀಕರಣ ಆಗಿದೆ. ಇನ್ನು ಮೂರು ವರ್ಷ ಯಾವುದೇ ತೊಂದರೆ ಇಲ್ಲ.

ಉಡಾನ್ ಯೋಜನೆ: ಉಡಾನ್ ಯೋಜನೆ ನವೆಂಬರ್ಗೆ ಪೂರ್ಣಗೊಳ್ಳಲಿದೆ. ಈ ಸಂಬಂಧ ಸಂಸದ ರಾಘವೇಂದ್ರ ಅವರನ್ನು ಸಂಪರ್ಕಿಸಿ ಯೋಜನೆ ವಿಸ್ತರಣೆ ಕುರಿತು ಚರ್ಚೆ ನಡೆಸುತ್ತೇನೆ.
ಟರ್ಮಿನಲ್ ವಿಸ್ತರಣೆ: ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವುದರಿಂದ ಟರ್ಮಿನಲ್ ಸಾಮರ್ಥ್ಯ ಹೆಚ್ಚಿಸುವ ಕುರಿತು ಸಮಾಲೋಚನೆ ನಡೆಸಲಾಗಿದೆ.
ಸರಕು ಸಾಗಣೆ ವಿಮಾನ: ಕಾರ್ಗೊ ವಿಮಾನಗಳು ಸಾಮಾನ್ಯವಾಗಿ ರಾತ್ರಿ ವೇಳೆ ಬರುತ್ತವೆ. ಆದ್ದರಿಂದ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯಾದರೆ ಸರಕು ಸಾಗಣೆ ವಿಮಾನಗಳು ಬಂದು ಹೋಗಲು ಅನುಕೂಲ ಆಗಲಿದೆ.

ಪೈಲೆಟ್ ಟ್ರೈನಿಂಗ್ ಸೆಂಟರ್: ಇದರ ಸ್ಥಾಪನೆಗೆ ಟೆಂಡರ್ ಕರೆದಿದ್ದೆವು. ಅದರೆ ಯಾರು ಅರ್ಜಿ ಸಲ್ಲಿಸಿಲ್ಲ. ಆದ್ದರಿಂದ ಪುನಃ ಅರ್ಜಿ ಕರೆಯಲಾಗುತ್ತದೆ.
ಇದನ್ನೂ ಓದಿ – ಶಿವಮೊಗ್ಗದ ಸವಾರರೆ ಹುಷಾರ್, ಬೈಕ್ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?
ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ದೇಶಕ ಶಮಂತ್, ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ವಿದ್ಯಾಧರ ಸಾಲಿಮಠ, ಕೆಎಸ್ಐಎಸ್ಎಫ್ ಡಿವೈಎಸ್ಪಿ ಚಂದ್ರಶೇಖರ್ ಸೇರಿದಂತೆ ಇದ್ದರು.
LATEST NEWS
- ಶಿವಮೊಗ್ಗದಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? | 16 ಫೆಬ್ರವರಿ 2026 | ಅಡಿಕೆ ಧಾರಣೆ

- ರಾತ್ರೋರಾತ್ರಿ ಒಂದು ಡೇಂಜರ್ ಹಂಪ್ ಕಿತ್ತೊಗೆದ ಸ್ಥಳೀಯರು, ಎಲ್ಲಿ?

- ಶಿವಮೊಗ್ಗದ ಅವೈಜ್ಞಾನಿಕ ಹಂಪ್ಗೆ ಮೊದಲ ಬಲಿ, ಸಿಸಿಟಿವಿಯಲ್ಲಿ ಭೀಕರತೆ ಸೆರೆ, ಇಲ್ಲಿದೆ ವಿಡಿಯೋ

- ಶಿವಮೊಗ್ಗ ವಿಮಾನ ನಿಲ್ದಾಣದ ಮಣ್ಣು ಪರೀಕ್ಷೆ, ಇನ್ನೊಂದು ವಾರದಲ್ಲಿ ವರದಿ, ಪರೀಕ್ಷೆ ಯಾಕೆ?

- ಶಿವಮೊಗ್ಗದಲ್ಲಿ ಬಂಜಾರ ಮುಖಂಡರು ಪೊಲೀಸ್ ವಶಕ್ಕೆ, ಸಭೀಕರಿಲ್ಲದೆ ನಡೆಯಿತು ಸೇವಾಲಾಲ್ ಜಯಂತಿ

About The Editor
ನಿತಿನ್ ಆರ್.ಕೈದೊಟ್ಲು





