ಶಿವಮೊಗ್ಗದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್‌ನಲ್ಲಿ ತೀರ್ಥಹಳ್ಳಿಯ ಯುವಕನ ರವಾನೆ

ಶಿವಮೊಗ್ಗ: ತೀವ್ರ ಜ್ವರದ ಕಾರಣ ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನನ್ನು ಶಿವಮೊಗ್ಗದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್‌ನಲ್ಲಿ ರವಾನಿಸಲಾಯಿತು. ಸಂಚಾರ ಪೊಲೀಸರು ಜೀರೋ ಟ್ರಾಫಿಕ್‌ (Zero Traffic) ವ್ಯವಸ್ಥೆ ಮಾಡಿ, ಆಂಬುಲೆನ್ಸ್‌ಗೆ ಪೈಲೆಟ್‌ ಜೀಪ್‌ ಒದಗಿಸಿದ್ದರು.

ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಾಗಿದ್ದ ‍‍ತೀರ್ಥಹಳ್ಳಿಯ ಹುಂಚ ಹೋಬಳಿಯ ಶಂಕರಹಳ್ಳಿಯ ಶ್ರೇಯಾಂಕ್‌ (21) ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ದರು. ತುರ್ತಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಯಿತು. ಇದಕ್ಕಾಗಿ ಪೊಲೀಸರು ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿ ನೆರವಾದರು.

ಇಂದು ಮಧ್ಯಾಹ್ನ ‍ಶ್ರೇಯಾಂಕ್‌ ಅವರನ್ನು ಮೆಟ್ರೋ ಆಸ್ಪತ್ರೆಯಿಂದ ಮಣಿಪಾಲದ ಆಸ್ಪತ್ರೆ ರವಾನಿಸಲಾಯಿತು.

zero traffic for a youth from Shimoga to Manipal
‍ಮೆಟ್ರೋ ಆಸ್ಪತ್ರೆಯಿಂದ ಆಂಬುಲೆನ್ಸ್‌ಗೆ ಶ್ರೇಯಾಂಕ್‌ ಅವರನ್ನು ರವಾನಿಸುತ್ತಿರುವುದು.
zero traffic for a youth from Shimoga to Manipal
ಜೀರೋ ಟ್ರಾಫಿಕ್‌ನಲ್ಲಿ ಮಣಿಪಾಲಕ್ಕೆ ಶ್ರೇಯಾಂಕ್‌ ರವಾನೆ.
zero traffic for a youth from Shimoga to Manipal
ಶ್ರೇಯಾಂಕ್‌ ಇರುವ ಆಂಬುಲೆನ್ಸ್‌.

ಇದನ್ನೂ ಓದಿ » ಬಸ್‌ ಸ್ಟಾಂಡ್‌ ಮುಂದೆ ಪದವೀಧರರಿಂದ ಬೂಟ್‌ ಪಾಲಿಷ್‌, ಟೀ, ತರಕಾರಿ ಮಾರಿ ಮೋದಿ ಜನ್ಮದಿನ, ಯಾಕೆ ಹೀಗೆ?

JNNCE-Admission-Advt-scaled

zero traffic for a youth from Shimoga to Manipal

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : September 17, 2025 at 1:58 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 17, 2025

Leave a Comment