ಮನೆ ಕಳೆದುಕೊಂಡು ದೇವಸ್ಥಾನದ ಮೂಲೆಯಲ್ಲಿ ವಾಸವಿದ್ದ ವೃದ್ಧ ದಂಪತಿ ಬದುಕಲ್ಲಿ ಮಹಾ ಪವಾಡ, ಏನದು ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 18 ನವೆಂಬರ್ 2019

ಆ ವೃದ್ಧ ದಂಪತಿ ಬದುಕು ಬಹುತೇಕ ಬಿದ್ದಿಗೆ ಬಂದಿತ್ತು. ಇದ್ದ ಒಂದು ಮನೆಯನ್ನು ಮಳೆ ನುಂಗಿತ್ತು. ಜೀವನದ ಕೊನೆ ಘಟ್ಟ ದೇವಸ್ಥಾನದ ಮೂಲೆಯಲ್ಲೇ ನಡೆಯಬೇಕೇನೋ ಅಂತಾ ಯೋಚಿಸುವ ಹೊತ್ತಿಗೆ ಪವಾಡ ನಡೆಯಿತು.

75513509 734999633646616 7700410297646841856 n.jpg? nc cat=109& nc oc=AQmSz8pfGahO ZnqCbfgQ1smvEWMJ K4vu NlBlBaDTgJw9wdGjEAW8UkugTlN7Kj M& nc ht=scontent.fblr1 3

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಬಾಪೂಜಿನಗರದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿತ್ತು. ಇದರಿಂದ ಈ ಬಡಾವಣೆಯಲ್ಲಿದ್ದ ಹಲವರು ತುಂಬಾನೆ ನಷ್ಟ ಅನುಭವಿಸಿದರು. ಇಲ್ಲಿನ ಗಂಗಮ್ಮ ದೇವಸ್ಥಾನ ರಸ್ತೆಯಲ್ಲಿರುವ ಮುನಿಯಪ್ಪ, ನರಸಮ್ಮ ದಂಪತಿಯಂತು ಅಕ್ಷರಶಃ ಬೀದಿಗೆ ಬಿದ್ದರು. ಮನೆ ಕುಸಿದು ಹೋಯಿತು.

ಯಾರದ್ದೋ ಮನೆಯಲ್ಲಿ ಎಷ್ಟು ದಿನದ ಬದುಕು?

ಮನೆ ಕಳೆದುಕೊಂಡಿದ್ದ ಮುನಿಯಪ್ಪ, ನರಸಮ್ಮ ದಂಪತಿಗೆ ಅಕ್ಕಪಕ್ಕದವರು ಕೆಲವು ದಿನದ ನೆರವು ನೀಡಿದರು. ಆದರೆ ಯಾರದ್ದೋ ಮನೆಯಲ್ಲಿ ಎಷ್ಟು ದಿನ ಬದುಕು ನಡೆಸಲು ಸಾದ್ಯ. ಹಾಗಾಗಿ ದಂಪತಿ ಅವರಿವರ ಮನೆಗೆ ಹೋಗುವುದನ್ನು ಬಿಟ್ಟರು. ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು.

ದೇವರೆ ಆಶ್ರಯ ಕೊಟ್ಟ

ಇಳಿ ಹೊತ್ತಿನಲ್ಲಿ ಎದುರಾದ ಆಘಾತ ವೃದ್ಧ ದಂಪತಿಯನ್ನು ದಿಗ್ಭ್ರಮೆಗೊಳಿಸಿತು. ಆದರೆ ಬದುಕಬೇಕೆಂಬ ಛಲವಿತ್ತು. ಹಾಗಾಗಿ ಅಳಿದುಳಿದ ವಸ್ತುಗಳನ್ನು ತೆಗೆದುಕೊಂಡು, ಸಮೀಪದ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದರು. ದೇವಸ್ಥಾನದಲ್ಲೇ ಅಡುಗೆ, ಊಟ, ನಿದ್ರೆ ಎಲ್ಲವು.

ಗಾಂಧಿ ಜಯಂತಿಯಂದು ನಡೆಯಿತು ಪವಾಡ

ಮನೆ ಕಳೆದುಕೊಂಡವರಿಗೆ ಸರ್ಕಾರ ಪರಹಾರ ನೀಡಲಿದೆ. ಮನೆ ಕಟ್ಟಿಸಿಕೊಡಲಿದೆ ಎಂದು ಈ ವೃದ್ಧಿ ದಂಪತಿಗೆ ಹಲವರು ಹೇಳಿದ್ದರು. ಅದರೆ ಸರ್ಕಾರವು ಬರಲಿಲ್ಲ. ನೆರವು ಕಾಣಿಸಲಿಲ್ಲ. ಕೊನೆಗೆ ಗಾಂಧಿ ಜಯಂತಿಯಂದು ಈ ದಂಪತಿ ಬದುಕಲ್ಲಿ ಪವಾಡ ನಡೆಯಿತು. ಇವರ ವೇದನೆ ಶಿವಮೊಗ್ಗದ ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತ ಪ್ರತಿಷ್ಠಾನದ ಕಾರ್ಯಕರ್ತರಿಗೆ ತಿಳಿಯಿತು.

ಎರಡು ತಿಂಗಳಲ್ಲಿ ಸುಸಜ್ಜಿತ ಮನೆ ರೆಡಿ

ಯುವ ಬ್ರಿಗೇಡ್ ಕಾರ್ಯಕರ್ತರು ವೃದ್ಧ ದಂಪತಿಗೆ ಮನೆ ನಿರ್ಮಿಸಿಕೊಡಲು ನಿರ್ಧರಿಸಿದರು. ವೃದ್ಧ ದಂಪತಿ ಹೆಸರಿನಲ್ಲಿದ್ದ ಪುಟ್ಟ ಜಾಗದಲ್ಲಿ ಪ್ಲಾನ್ ಸಿದ್ಧವಾಯಿತು. ಮನೆ ಕುಸಿದಿದ್ದರಿಂದ ಜಾಗವನ್ನು ಸ್ವಚ್ಛ ಮಾಡಬೇಕಿತ್ತು. ಅದನ್ನು ಮುಗಿಸಿ ಹೊಸ ಮನೆ ನಿರ್ಮಾಣ ಕಾರ್ಯ ಶುರುವಾಯಿತು. ಇದು ಗೊತ್ತಾಗುತ್ತಿದ್ದಂತೆ ಹಲವರು ನೆರವಿನ ಹಸ್ತ ಚಾಚಿದರು. ಮನೆ ನಿರ್ಮಾಣ ಸಾಮಾಗ್ರಿಗಳು ಬಂದವು, ಕೆಲಸ ಮಾಡುವವರು ಕೂಡ ಯುವ ಬ್ರಿಗೇಡ್’ಗೆ ಬೆಂಬಲವಾಗಿ ನಿಂತರು. ಎರಡು ತಿಂಗಳಲ್ಲಿ ಸುಸಜ್ಜಿತ ಮನೆ ನಿರ್ಮಾಣವಾಯಿತು.

ಯುವ ಬ್ರಿಗೇಡ್ ಕಾರ್ಯಕರ್ತರ ಕೆಲಸ ಮೆಚ್ಚುಗೆ ಪಡೆದಿದೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಸ್ವಯಂ ಸೇವಾ ಸಂಘಟನೆ ಮಾಡಿದೆ. ಚಕ್ರವರ್ತಿ ಸೂಲಿಬೆಲೆ ಅವರು ಮನೆಯನ್ನು ಉದ್ಘಾಟನೆ ಮಾಡಿ, ವೃದ್ಧ ದಂಪತಿಗೆ ಹಸ್ತಾಂತರಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment