ಭದ್ರಾ ಜಲಾಶಯದ ನಾಲೆಗಳಿಗೆ ನೀರು, ಸಭೆಗೆ ರೈತ ಮುಖಂಡ ಒತ್ತಾಯ, ಇಲ್ಲಿದೆ ಸಚಿವರಿಗೆ ತಿಳಿಸಿದ 3 ಪ್ರಮುಖ ಪಾಯಿಂಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 AUGUST 2023

DAVANAGERE : ಭದ್ರಾ ಅಣೆಕಟ್ಟೆಯಿಂದ (Bhadra Dam) ನೀರು ಹರಿಸುವ ಕುರಿತು ಶೀಘ್ರ ನೀರಾವರಿ ಸಲಹಾ ಸಮಿತಿ ಸಭೆ ಕರೆದು ತೀಮಾನ ಕೈಗೊಳ್ಳಬೇಕು. 100 ದಿನ ನೀರು ಹರಿಸುವ ತೀರ್ಮಾನವನ್ನು ಪುನರ್‌ ಪರಿಶೀಲಿಸಬೇಕು ಎಂದು ರೈತ (Farmer) ಸಂಘದ ರಾಜ್ಯಾಧ್ಯಕ್ಷ ಹೆಚ್‌.ಆರ್‌.ಬಸವರಾಜಪ್ಪ ಆಗ್ರಹಿಸಿದ್ದಾರೆ.

ದಾವಣಗೆರೆಯಲ್ಲಿ (Davanagere) ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ (SS Mallikarjun) ಅವರನ್ನು ಭೇಟಿಯಾಗಿ ತೀರ್ಮಾನ ಪುನರ್‌ ಪರಿಶೀಲನೆಗೆ ಒತ್ತಯಿಸಿದರು. ಅಲ್ಲದೆ ಸಮಸ್ಯೆ ಕುರಿತು ಸಚಿವರು ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಇದನ್ನೂ ಓದಿ-ಶಿವಮೊಗ್ಗದಲ್ಲಿ ಸಾಮೂಹಿಕ ರಂಗ ಪ್ರವೇಶ, ಸೊರಬ, ತೀರ್ಥಹಳ್ಳಿಗೆ ಮಿನಿಸ್ಟರ್‌ ಭೇಟಿ, ಇಲ್ಲಿದೆ ಮತ್ತಷ್ಟು ಸುದ್ದಿ

ರೈತ ನಾಯಕ ಹೇಳಿದ 3 ಪ್ರಮುಖ ಪಾಯಿಂಟ್‌

ಪಾಯಿಂಟ್ 1 : ಅಣೆಕಟ್ಟೆಯಲ್ಲಿ ಈಗಿರುವ ನೀರಿನಲ್ಲಿ ಭದ್ರಾ ಬಲದಂಡೆಯಲ್ಲಿ 2650ಕ್ಯೂಸೆಕ್ಸ್, ಎಡದಂಡೆಯಲ್ಲಿ 380ಕ್ಯೂಸೆಕ್ಸ್ ಹರಿಸಿದರೆ 100 ದಿನಗಳಿಗೆ ಸಾಕಾಗುತ್ತದೆ. ಈ ಪ್ರಮಾಣದಲ್ಲಿ ನೀರು ಹರಿಸಿದರೆ ನಾಲಾ ಕೊನೆ ಅಂಚಿನ ರೈತರಿಗೆ ನೀರು ತಲುಪುವುದಿಲ್ಲ.

ಪಾಯಿಂಟ್ 2 :  ಹಿಂದಿನ ವರ್ಷಗಳಲ್ಲಿ ಅಣೆಕಟ್ಟೆ ತುಂಬಿದಾಗ ಬಲದಂಡೆಯಲ್ಲಿ 3200‌ ಕ್ಯೂಸೆಕ್ಸ್, ಎಡದಂಡೆಯಲ್ಲಿ 480 ಕ್ಯೂಸೆಕ್ಸ್ ನೀರು ಹರಿಸಿದರೆ ನಾಲಾ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿತ್ತು. ಆದರೆ ಈ ಪ್ರಮಾಣದಲ್ಲಿ ಈಗ ನೀರು ಹರಿಸಿದರೆ ಅಣೆಕಟ್ಟೆಯಲ್ಲಿ ಸಂಗ್ರಹವಿರುವ ನೀರು 80 ದಿನಗಳಿಗೆ ಮಾತ್ರ ಸಾಕಾಗುತ್ತದೆ.

ಪಾಯಿಂಟ್ 3 : ಹವಮಾನ ಇಲಾಖೆ (Metrological Department) ಮುನ್ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಮಳೆ ಬಂದು ಅಣೆಕಟ್ಟೆ ತುಂಬುವ ಸಾಧ್ಯತೆ ಕಡಿಮೆ ಇದೆ. ಆ ಕಾರಣದಿಂದ ತಕ್ಷಣ ನೀರಾವರಿ ಸಲಹಾ ಸಮಿತಿ, ಸಂಬಂಧಪಟ್ಟ ಕೃಷಿ, (Agriculture) ತೋಟಗಾರಿಕೆ, ಹವಮಾನ ಇಲಾಖೆ ತಜ್ಞರು, ಶಾಸಕರು, ಸಚಿವರನ್ನು ಒಳಗೊಂಡ ಸಭೆ ಕರೆದು ಚರ್ಚಿಸಿ ಈ ತೀರ್ಮಾನ ಪುನರ್ ಪರಿಶೀಲನೆ ಮಾಡಬೇಕು.

ಇದನ್ನೂ ಓದಿ- ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ಕೊಡಚಾದ್ರಿ ನಿರ್ಬಂಧ ತೆರವು, ಜೀಪ್‌ಗಳಿಗೆ ಕಂಡೀಷನ್‌, ಏನದು?

ಮನವಿಗೆ ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ತಕ್ಷಣ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯ ಉಪಾಧ್ಯಕ್ಷರಾದ ಹೊನ್ನೂರು ಮುನಿಯಪ್ಪ, ಮುಖಂಡರಾದ ಗಿರೀಶ್ ಹಾಜರಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment