SHIVAMOGGA LIVE NEWS | 2 APRIL 2024
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ELECTION SPECIAL : ಇಡೀ ದೇಶದ ಸಮಸ್ಯೆಗಳ ಪರಿಹಾರಕ್ಕೆ ಪ್ರಮುಖ ವೇದಿಕೆ ಲೋಕಸಭೆ. ಇಲ್ಲಿ ಮಾತನಾಡಲು, ತಮ್ಮ ಕ್ಷೇತ್ರ ವ್ಯಾಪ್ತಿಯ ಸಮಸ್ಯೆ ಕುರಿತು ಪ್ರಶ್ನಿಸಲು ಸಂಸದರಿಗೆ ಅವಕಾಶ ದೊರೆಯುವುದು ಅಷ್ಟು ಸುಲಭವಲ್ಲ. ಶಿವಮೊಗ್ಗ ಕ್ಷೇತ್ರದ ಮೊದಲ ಸಂಸದ ಕೆ.ಜಿ.ಒಡೆಯರ್ ಅವರು ಸಂಸತ್ತಿನಲ್ಲಿ ಮೊದಲ ಬಾರಿ ಪ್ರಶ್ನೆ ಕೇಳಿದ್ದು 1953ರ ಸೆಪ್ಟೆಂಬರ್ 9ರಂದು.
ಮೊದಲ ಪ್ರಶ್ನೆ ಅಡಿಕೆ ಬಗ್ಗೆ
1950 ರಿಂದ 1953ರವರೆಗೆ ಭಾರತದಲ್ಲಿ ಉತ್ಪಾದನೆಯಾದ ಅಡಿಕೆ ಪ್ರಮಾಣವೆಷ್ಟು? ಈ ಅವಧಿಯಲ್ಲಿ ಸರ್ಕಾರ ಆಮದು ಮಾಡಿಕೊಂಡ ಅಡಿಕೆ ಎಷ್ಟು? ದೊರೆತ ಆಮದು ಶುಲ್ಕವೆಷ್ಟು? ಎಂದು ಶಿವಮೊಗ್ಗ ಸಂಸದ ಕೆ.ಸಿ.ಒಡೆಯರ್ ಅವರು ವಾಣಿಜ್ಯ ಮತ್ತು ಕೈಗಾರಿಕ ಸಚಿವರನ್ನು ಪ್ರಶ್ನಿಸಿದ್ದರು.
1950ರಲ್ಲಿ 4.43 ಕೋಟಿ ರೂ., 1951ರಲ್ಲಿ 4.74 ಕೋಟಿ ರೂ. 1952ರಲ್ಲಿ 3.68 ಕೋಟಿ ರೂ. ಆಮದು ಶುಲ್ಕ ಲಭಿಸಿದೆ. ಈ ಅವಧಿಯಲ್ಲಿ ಅಂದಾಜು 10.70 ಸೆಂಟಲ್ ವೇಯ್ಟ್ನಷ್ಟು ಅಡಿಕೆ ಆಮದು ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಪ್ರತಿ ವರ್ಷ ಸರಾಸರಿ 22 ಲಕ್ಷ ಮೌಂಡ್ನಷ್ಟು ಅಡಿಕೆ ಉತ್ಪಾದನೆಯಾಗುತ್ತಿದೆ ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಕರ್ಮಾರ್ಕರ್ ಉತ್ತರಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದ ಮೊದಲ ಸಂಸದ ಯಾರು ಗೊತ್ತಾ? ಬ್ರಿಟೀಷರಿಗೆ ಅವರನ್ನು ಕಂಡರೆ ಮುಖ ಕೆಂಪಾಗುತ್ತಿದ್ದದ್ದು ಯಾಕೆ?
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






