ಕಾಂಗ್ರೆಸ್‌ ಕಾರ್ಯಕರ್ತರು ಹೆದರಬೇಕಿಲ್ಲ, ಕಾರಣ ತಿಳಿಸಿದ ಮಿನಿಸ್ಟರ್‌, ಕೈ ಅಭ್ಯರ್ಥಿ ಎಲ್ಲಿಲ್ಲಿ ಪ್ರಚಾರ ನಡೆಸಿದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 MARCH 2024

ELECTION NEWS : ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ನಿರಂತರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪತಿ, ನಟ ಶಿವರಾಜ್‌ ಕುಮಾರ್‌ ಅವರು ಸಾಥ್‌ ನೀಡಿದ್ದಾರೆ. ಬುಧವಾರ ವಿವಿಧೆಡೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

Geetha Shivarajkumar in Election campaign in Shimoga

ಎಲ್ಲೆಲ್ಲಿ ಪ್ರಚಾರ ನಡೆಸಿದರು?

‘ಮತ ಕೇಳಲು ಕಾರ್ಯಕರ್ತರು ಹೆದರಬೇಡಿ’

ಸೊರಬ : ಕುಬಟೂರಿನಲ್ಲಿ ಸೊರಬ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಕೇಳಲು ಕಾರ್ಯಕರ್ತರು ಹೇದರಬೇಕಿಲ್ಲ. ಏಕೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮನೆ-ಮನೆಗೂ ಹೋಗಿ ಭರವಸೆ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.

ಮಧು ಸೋಲು ನಮ್ಮ ತಂದೆ ಬಂಗಾರಪ್ಪ ಅವರಿಗೆ ನೆಮ್ಮದಿ ನೀಡಿರಲಿಲ್ಲ. ನಾನು ಅನೇಕರನ್ನು ಶಾಸಕರನ್ನಾಗಿ ಮಾಡಿದ್ದೇನೆ. ಮಗನನ್ನು ಶಾಸಕನನ್ನಾಗಿ ಮಾಡಲು ಆಗಲಿಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದರು. ಆರಂಭದಲ್ಲಿ ಸೋಲು ನೀಡಿದ್ದರೂ, ಸೊರಬದ ಜನರು ಕೊನೆಗೆ ದೊಡ್ಡ ಗೆಲುವನ್ನು ನೀಡುವ ಮೂಲಕ ಮಧು ಬಂಗಾರಪ್ಪ ಅವರನ್ನು ಮಂತ್ರಿ ಮಾಡಿದರು. ತಂದೆ ಹಾಗೂ ತಮ್ಮ, ಬಡವರ ಪರವಾಗಿ ಸೇವೆ ಮಾಡಿದ್ದಾರೆ. ನನಗೂ ಜನರ ಸೇವೆ ಮಾಡುವ ಅವಕಾಶ ಕೊಡಿ.ಗೀತಾ ಶಿವರಾಜ್‌ ಕುಮಾರ್‌, ಕಾಂಗ್ರೆಸ್‌ ಅಭ್ಯರ್ಥಿ

ಹಾರನಹಳ್ಳಿಯಲ್ಲಿ ಪ್ರಚಾರ ಸಭೆ

ಶಿವಮೊಗ್ಗ : ತಾಲೂಕಿನ ಸಮೀಪದ ಹಾರನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ನಟ ಶಿವರಾಜ್‌ ಕುಮಾರ್‌, ಅಭ್ಯರ್ಥಿ ಗೀತ ಶಿವರಾಜ್‌ ಕುಮಾರ್‌, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮುಖಂಡರಾದ ಹೆಚ್.ಸಿ.ಯೋಗೀಶ್, ಶ್ರೀನಿವಾಸ ಕರಿಯಣ್ಣ, ಆರ್.ಪ್ರಸನ್ನಕುಮಾರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಎಸ್.ರವಿಕುಮಾರ್, ಜಿ.ಡಿ.ಮಂಜುನಾಥ್, ಎನ್.ರಮೇಶ್, ಜಿ.ಪಲ್ಲವಿ, ಕಲಗೋಡು ರತ್ನಾಕರ್, ಎಂ.ಶ್ರೀಕಾಂತ್, ವೈ.ಎಚ್.ನಾಗರಾಜ್, ಚಂದ್ರಭೂಪಾಲ್, ರವಿಕುಮಾರ್, ಸಿ.ಹನುಮಂತ್, ಅನಿತಾಕುಮಾರಿ, ರಮೇಶ ಇದ್ದರು.

Geetha Shivarajkumar in Election campaign in Shimoga

ಸಮಾಧಿಗೆ ನಮನದ ವಿಡಿಯೋ ವೈರಲ್

ಸೊರಬ : ನಟ ಶಿವರಾಜ್‌ ಕುಮಾರ್‌, ಗೀತಾ ಶಿವರಾಜ್‌ ಕುಮಾರ್‌ ಅವರು ಸೊರಬದ ಬಂಗಾರಧಾಮದಲ್ಲಿ ಬಂಗಾರಪ್ಪ ಸಮಾಧಿಗೆ ರಾತ್ರಿ ತೆರಳಿ ನಮನ ಸಲ್ಲಿಸಿದ್ದರು. ಇದರ ವಿಡಿಯೋ ಕಾಂಗ್ರೆಸ್‌ ವಲಯದಲ್ಲಿ ವೈರಲ್‌ ಆಗಿದೆ.

Geetha Shivarajkumar in Election campaign in Shimoga

ಇದನ್ನೂ ಓದಿ – ಶಿವಮೊಗ್ಗದಲ್ಲಿ ಪ್ರಚಾರ ಬಿರುಸುಗೊಳಿಸಿದ ರಾಘವೇಂದ್ರ, ಇಡೀ ದಿನ ಎಲ್ಲೆಲ್ಲಿ ಸಭೆಗಳಾದವು? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment