Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಕ್ಷೇತ್ರ ಪರಿಚಯ | ತೀರ್ಥಹಳ್ಳಿ – ಅಡಕೆಯೆ ಪ್ರಧಾನ ವಿಚಾರ, ಈವರೆಗೂ ಹೇಗಿತ್ತು, ಈಗ ಹೇಗಿದೆ ಅಖಾಡ?

ಕ್ಷೇತ್ರ ಪರಿಚಯ | ತೀರ್ಥಹಳ್ಳಿ – ಅಡಕೆಯೆ ಪ್ರಧಾನ ವಿಚಾರ, ಈವರೆಗೂ ಹೇಗಿತ್ತು, ಈಗ ಹೇಗಿದೆ ಅಖಾಡ?

09/12/2022 6:19 PM
ನಿತಿನ್‌ ಕೈದೊಟ್ಲು

SHIVAMOGGA LIVE NEWS | 9 DECEMBER 2022

ತೀರ್ಥಹಳ್ಳಿ : ತುಂಗಾ ನದಿ ದಂಡೆ ಮೇಲಿರುವ ತೀರ್ಥಹಳ್ಳಿ ಪ್ರಜ್ಞಾವಂತರ ಕ್ಷೇತ್ರ. ರಾಜಕೀಯವಾಗಿ ಹಲವು ಪಕ್ಷಗಳಿಗೆ ಮತ್ತು ನಾಯಕರಿಗೆ ಕ್ಷೇತ್ರದ ಜನ ಅವಕಾಶ ಕಲ್ಪಿಸಿದ್ದಾರೆ. ಇಲ್ಲಿ ಗೆದ್ದವರು ಮುಖ್ಯಮಂತ್ರಿಯಾಗಿದ್ದಾರೆ. ಸಚಿವ ಸಂಪುಟದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದಾರೆ. ಈ ಹಿಂದೆ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಸಚಿವರಾಗಿದ್ದರು. (Tirthahalli Assembly constituency)

ಇವತ್ತಿನ ಎಲ್ಲ NEWS
» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

shivamogga live news whatsappa number

Shimoga Nanjappa Hospital

1957ರ ಬಳಿಕ ತೀರ್ಥಹಳ್ಳಿ ಕ್ಷೇತ್ರ 14 ವಿಧಾನಸಭೆ ಚುನಾವಣೆಗಳನ್ನು ಕಂಡಿದೆ. ಸಮಾಜವಾದಿ ಪಕ್ಷಗಳು, ಜನತಾ ಪಕ್ಷ, ಕಾಂಗ್ರೆಸ್ ಪಕ್ಷಗಳ ಅಖಾಡವಾಗಿದ್ದ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಅವರು ಬಿಜೆಪಿ ಶಕೆ ಆರಂಭಿಸಿದ್ದಾರೆ.

Tirthahalli Assembly constituency

ಸಿಎಂ ಸ್ಥಾನ ಕಂಡಿದ್ದ ಕ್ಷೇತ್ರ

ಮೈಸೂರು ಸಂಸ್ಥಾನದಲ್ಲಿ ತೀರ್ಥಹಳ್ಳಿ ಕ್ಷೇತ್ರ ಮುಖ್ಯಮಂತ್ರಿ ಹುದ್ದೆಯನ್ನು ಸಮೀಪದಿಂದ ಕಂಡಿತ್ತು. ತೀರ್ಥಹಳ್ಳಿ ಕ್ಷೇತ್ರವನ್ನ ಪ್ರತಿನಿಧಿಸಿದ್ದ ಕಡಿದಾಳು ಮಂಜಪ್ಪ ಅವರು 1956ರ ಆಗಸ್ಟ್ 19ರಂದು ಮುಖ್ಯಮಂತ್ರಿಯಾದರು. 73 ದಿನ ಸಿಎಂ ಆಗಿ ಅಧಿಕಾರ ನಡೆಸಿದ್ದರು.

Tirthahalli Assembly constituency

ಈವರೆಗು ಯಾರೆಲ್ಲ ಗೆದ್ದಿದ್ದಾರೆ?

1957ರ ಮೊದಲ ಚುನಾವಣೆಯಲ್ಲಿ ಎ.ಆರ್.ಭದ್ರಿ ನಾರಾಯಣ (ಕಾಂಗ್ರೆಸ್), 1962 ಮತ್ತು 1967 ಶಾಂತವೇರಿ ಗೋಪಾಲಗೌಡ (ಸೋಷಿಯಲಿಸ್ಟ್ ಪಕ್ಷ), 1972ರಲ್ಲಿ ಕೋಣಂದೂರು ಲಿಂಗಪ್ಪ (ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ), 1978ರಲ್ಲಿ ಕಡಿದಾಳು ದಿವಾಕರ (ಕಾಂಗ್ರೆಸ್), 1983ರಲ್ಲಿ ಡಿ.ಬಿ.ಚಂದ್ರೆಗೌಡ (ಜನತಾ ಪಕ್ಷ), 1985ರಲ್ಲಿ ಪಟ್ಮಕ್ಕಿ ರತ್ನಾಕರ (ಕಾಂಗ್ರೆಸ್), 1989ರಲ್ಲಿ ಡಿ.ಬಿ.ಚಂದ್ರೆಗೌಡ (ಜನತಾ ದಳ) ಆಯ್ಕೆಯಾಗಿದ್ದರು.

Araga Jnanendra Home Minister

1994, 1999 ಮತ್ತು 2004ರಲ್ಲಿ ಆರಗ ಜ್ಞಾನೇಂದ್ರ (ಬಿಜೆಪಿ), 2008 ಮತ್ತು 2013ರಲ್ಲಿ ಕಿಮ್ಮನೆ ರತ್ನಾಕರ್ (ಕಾಂಗ್ರೆಸ್), 2018ರಲ್ಲಿ ಆರಗ ಜ್ಞಾನೇಂದ್ರ (ಬಿಜೆಪಿ) ಆಯ್ಕೆಯಾಗಿದ್ದಾರೆ.

2018ರ ಚುನಾವಣೆ ಫಲಿತಾಂಶ

ಅಭ್ಯರ್ಥಿಪಡೆದ ಮತ
ಆರಗ ಜ್ಞಾನೇಂದ್ರ67,527
ಕಿಮ್ಮನೆ ರತ್ನಾಕರ್45,572
ಅಂತರ21,955

2018 ಮತದಾರರ ವಿವರ

ಒಟ್ಟು ಮತದಾರರು1,84,189
ಚಲಾವಣೆಯಾದ ಮತ1,55,725
ಶೇಕಡವಾರು ಮತದಾನ85.26

ಜಾತಿವಾರು ಬಲಾಬಲ

ತೀರ್ಥಹಳ್ಳಿ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚು. ಈಡಿಗ, ಬ್ರಾಹ್ಮಣ, ಲಿಂಗಾಯತ ಮತ್ತು ಮುಸ್ಲಿಂ ಮತದಾರರು ನಿರ್ಣಾಯಕರಾಗಲಿದ್ದಾರೆ. ಪರಿಶಿಷ್ಟ ಜಾತಿಯ ಮತಗಳು ಗಣನೀಯ ಸಂಖ್ಯೆಯಲ್ಲಿದೆ.

Tirthahalli Assembly constituency

ಈಗ ಹೇಗಿದೆ ಅಖಾಡ?

ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರು ಪುನಃ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಚೆಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರಗ ಜ್ಞಾನೇಂದ್ರ ಅವರೆ ಬಿಜೆಪಿ ಅಭ್ಯರ್ಥಿ ಎಂದು ಸೂಚ್ಯವಾಗಿ ಹೇಳಿದ್ದರು.

Kimmane Rathnakar Congress

ಇತ್ತ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥ ಗೌಡ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಯಾರಿಗೆ ಟಿಕೆಟ್ ಸಿಕ್ಕರು ಒಗ್ಗಟ್ಟಿನಿಂದ ಮುಂದಡಿ ಇಟ್ಟರೆ ಪಕ್ಷಕ್ಕೆ ಅನುಕೂಲ ಎಂಬ ಚರ್ಚೆ ಇದೆ. ಇನ್ನು, ಜೆಡಿಎಸ್ ಪಕ್ಷದಲ್ಲಿ ರಾಜಾರಾಮ್ ಯಡೂರು ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ.

ಇದನ್ನೂ ಓದಿ – ಕ್ಷೇತ್ರ ಪರಿಚಯ | ಭದ್ರಾವತಿ – ಯಾರೆ ಗೆದ್ದರು ಇಲ್ಲಿ ಜನರ ಬೇಡಿಕೆ ಒಂದೇ

ಎಲೆ ಚುಕ್ಕೆ ರೋಗ, ಅಡಕೆ ಬೆಳೆ, ಬೆಳೆಗಾರರಿಗೆ ಸಂಬಂಧಿಸಿದ ವಿಷಯಗಳು, ಶರಾವತಿ ಸಂತ್ರಸ್ತರ ಸಂಕಷ್ಟ, ಅಭಿವೃದ್ಧಿ ಕಾರ್ಯಗಳು ಈ ಬಾರಿ ಚುನಾವಣೆ ವಿಷಯವಾಗುವ ಸಾದ್ಯತೆ ಇದೆ.

CLICK & JOIN – SHIVAMOGGA LIVE COMMUNITY CLICK & JOIN – SHIVAMOGGA LIVE COMMUNITY

Shimoga Nanjappa Hospital

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article Shimoga-BJP-Celebration-on-Gujarat-Election-Results ಗುಜರಾತ್ ಜಯಭೇರಿ, ಶಿವಮೊಗ್ಗ ಬಿಜೆಪಿಯಲ್ಲಿ ಸಂಭ್ರಮ, ಕರ್ನಾಟಕ ಗೆಲ್ಲುವ ವಿಶ್ವಾಸ
Next Article Areca Price in Shimoga APMC ಅಡಕೆ ರೇಟ್ | 9 ಡಿಸೆಂಬರ್ 2022 | ಯಾವ್ಯಾವ ಅಡಕೆಗೆ ಎಲ್ಲೆಲ್ಲಿ ಎಷ್ಟಿದೆ ಧಾರಣೆ?

ಇದನ್ನೂ ಓದಿ

MLA-SN-Channabasappa-Press-Meet-at-Shimoga-BJP-Office
POLITICSSHIVAMOGGA CITY

‘ಬಡವರಿಗೆ ಹಂಚುವ ಮನೆಗಳಲ್ಲೂ ಮುಸ್ಲಿಮರಿಗೆ ಮೀಸಲಾತಿ’, ಕಾಂಗ್ರೆಸ್‌ ವಿರುದ್ಧ MLA ಸಿಡಿಮಿಡಿ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
tree-falls-to-agumbe-road-in-Thirthahalli.
THIRTHAHALLI

ಆಗುಂಬೆ ಘಾಟಿ ಸಮೀಪ ಧರೆಗುರುಳಿದ ಮರ, ಕೆಲಕಾಲ ಹೆದ್ದಾರಿ ಬಂದ್

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
17/06/2025
agumbe-ghat-road-during-rainy-season
HOSANAGARASAGARATHIRTHAHALLI

ಹೊಸನಗರ, ಸಾಗರದಲ್ಲಿ ಭಾರಿ ಮಳೆ, ಆಗುಂಬೆ ಭಾಗದಲ್ಲಿ ಬಿಡುವು ಕೊಡದ ವರ್ಷಧಾರೆ, ಎಲ್ಲೆಲ್ಲಿ ಜೋರು ಮಳೆಯಾಗ್ತಿದೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
16/06/2025
AGUMBE-GHAT-THIRTHAHALLI.
THIRTHAHALLI

ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧ, ಎಷ್ಟು ದಿನ? ಕಾರಣವೇನು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
14/06/2025
Truck-problem-at-Agumbe-Ghat
THIRTHAHALLI

ಆಗುಂಬೆ ಘಾಟಿ ತಿರುವಿನಲ್ಲೇ ಕೆಟ್ಟು ನಿಂತ ಕ್ಯಾಂಟರ್‌, ಟ್ರಾಫಿಕ್‌ ಜಾಮ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
12/06/2025
mimicry-artist-Viju-Vanadanappally-no-more
THIRTHAHALLI

ಆಗುಂಬೆ ಸಮೀಪ ಕಾಂತಾರಾ ಸಿನಿಮಾ ಕಲಾವಿದನಿಗೆ ಹೃದಯಾಘಾತ, ಸಾವು

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
12/06/2025
Previous Next

ಶಿವಮೊಗ್ಗ ಲೈವ್ ಗ್ರೂಪ್ ಸೇರಲು ಕ್ಲಿಕ್ ಮಾಡಿ

🟢 shivamoggalive.com

whatsapp-logo
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?