ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
RAILWAY NEWS : ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಅಮೃತ ಭಾರತ ನಿಲ್ದಾಣದ ಸ್ಕೀಮ್ ಅಡಿಯಲ್ಲಿ ಪ್ಲಾಟ್ಫಾರಂ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಕೆಲವು ರೈಲುಗಳ ಮಾರ್ಗ ಬದಲಾವಣೆಯನ್ನು ಮತ್ತಷ್ಟು ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ಸಂಖ್ಯೆ 16545 ಯಶವಂತಪುರ ಕಾರಟಗಿ ಎಕ್ಸ್ಪ್ರೆಸ್ ರೈಲು 2024ರ ಜುಲೈ 31ರವರೆಗೆ ಓಬಳಪುರಂ, ಬಳ್ಳಾರಿ ಬೈಪಾಸ್, ಬಳ್ಳಾರಿ ಕಂಟೋನ್ಮೆಟ್, ಕುಡತಿನಿ ಮೂಲಕ ಸಂಚರಿಸಲಿದೆ. ಬಳ್ಳಾರಿ ನಿಲ್ದಾಣದಲ್ಲಿ ನಿಲುಗಡೆ ನೀಡುವುದಿಲ್ಲ. ಬಳ್ಳಾರಿ ಕಂಟೋನ್ಮೆಂಟ್ನಲ್ಲಿ 5 ನಿಮಿಷ ನಿಲುಗಡೆ ನೀಡಲಾಗುತ್ತದೆ.
ರೈಲು ಸಂಖ್ಯೆ 16546 ಕಾರಟಗಿ ಯಶವಂತಪುರ ಎಕ್ಸ್ಪ್ರೆಸ್ ರೈಲು. ಕುಡತಿನಿ, ಬಳ್ಳಾರಿ ಕಂಟೋನ್ಮೆಟ್, ಬಳ್ಳಾರಿ ಬೈಪಾಸ್, ಓಬಳಪುರಂ ಮಾರ್ಗದಲ್ಲಿ ಸಂಚರಿಸಲಿದೆ. ಬಳ್ಳಾರಿ ನಿಲ್ದಾಣದಲ್ಲಿ ನಿಲುಗಡೆ ನೀಡುವುದಿಲ್ಲ. ಬಳ್ಳಾರಿ ಕಂಟೋನ್ಮೆಂಟ್ನಲ್ಲಿ 5 ನಿಮಿಷ ನಿಲುಗಡೆ ನೀಡಲಾಗುತ್ತದೆ.
ರೈಲು ಸಂಖ್ಯೆ 16217 ಮೈಸೂರು – ಸಾಯಿ ನಗರ ಶಿರಡಿ ಎಕ್ಸ್ಪ್ರೆಸ್, ರೈಲು ಸಂಖ್ಯೆ 16218 ಸಾಯಿ ನಗರ – ಮೈಸೂರು ಶಿರಡಿ ಎಕ್ಸ್ಪ್ರೆಸ್ ರೈಲು ಮೇಲಿನ ಮಾರ್ಗದಲ್ಲಿಯೇ ಸಂಚರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ – ಶಿವಮೊಗ್ಗ TO ಮೈಸೂರು 4 ರೈಲುಗಳಿವೆ, ಯಾವ್ಯಾವ ಟೈಮ್ಗೆ ಎಲ್ಲಿಂದ ಹೊರಡುತ್ತವೆ? ಎಷ್ಟೊತ್ತಿಗೆ ತಲುಪುತ್ತವೆ?
LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್ಡೇಟ್

About The Editor
ನಿತಿನ್ ಆರ್.ಕೈದೊಟ್ಲು
















