ರಾಗಿಗುಡ್ಡ, ಕುವೆಂಪು ನಗರ ಸಮೀಪ ಕೆರೆ ಬಳಿ ಯುವಕನ ಅರೆಸ್ಟ್
SHIVAMOGGA LIVE NEWS | 4 ಮಾರ್ಚ್ 2022 ರಾಗಿಗುಡ್ಡ ಸಮೀಪ ಕೆರೆ ಬಳಿ ಗಾಂಜಾ ಸೇವನೆ ಮಾಡಿ ಕುಳಿತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ರಾಗಿಗುಡ್ಡ ನಿವಾಸಿ ಸಚಿನ್ ಅಲಿಯಾಸ್ ಸೈಕ್ (24) ಎಂಬಾತನನ್ನು ಬಂಧಿಸಲಾಗಿದೆ. ರಾಗಿಗುಡ್ಡ ಮತ್ತು ಕುವೆಂಪು ನಗರ ಮಧ್ಯದ ಕೆರೆ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಸಚಿನ್ ಕಂಡಿದ್ದಾನೆ. ಆತನನ್ನು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸಚಿನ್’ನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢವಾಗಿದೆ. ಶಿವಮೊಗ್ಗ … Read more