ಶಿರಾಳಕೊಪ್ಪದಲ್ಲಿ ದುರ್ಗಾದೇವಿ ಜಾತ್ರೆ ಜೋರು, ಉಡಿ ತುಂಬಲು ಜನವೋ ಜನ
ಶಿವಮೊಗ್ಗ ಲೈವ್.ಕಾಂ | SHIRALAKOPPA NEWS | 17 FEBRUARY 2021 ಶಿರಾಳಕೊಪ್ಪದ ದುರ್ಗಾದೇವಿ ಜಾತ್ರೆ ಹಿನ್ನೆಲೆ ತಾಯಿಗೆ ಉಡಿ ತುಂಬುವ ಪದ್ಧತಿ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು, ಉಡಿ ತುಂಬಿ ದೇವಿಯ ಆಶೀರ್ವಾದ ಪಡೆದರು. ಉಡಿ ತುಂಬಿದರೆ ದುರ್ಗಾದೇವಿಯ ಸಕಲ ಸಂಕಷ್ಟಗಳನ್ನು ನಿವಾರಿಸುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಶಿರಾಳಕೊಪ್ಪ ಪಟ್ಟಣ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಉಡಿ ತುಂಬಲು ದೊಡ್ಡ ಕ್ಯೂ ಇತ್ತು. ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ನೆರವೇರಿಸಲಾಯಿತು. … Read more