ಬೆಳಗಿನ ಜಾವ ಭೂಮಿ ಕಂಪನ, ಡಿಸಿ ಭೇಟಿ, ಈತನಕ ಏನೇನಾಯ್ತು? ಭೂ ವಿಜ್ಞಾನಿಗಳು ಹೇಳೋದೇನು?
SHIMOGA / SHIRALAKOPPA | ಶಿರಾಳಕೊಪ್ಪದಲ್ಲಿ ಇವತ್ತು ಬೆಳಗಿನ ಜಾವ ಭೂಮಿ ಕಂಪಿಸಿದ (earth quake) ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದರು. ಇದರಿಂದ ಜನರು ಆತಂಕಕ್ಕೀಡಾಗಿದ್ದರು. ಆದರೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಭೂಕಂಪನವಾಗಿಲ್ಲ ಎಂದು ವರದಿ ನೀಡಿದೆ. ಭೂ ವಿಜ್ಞಾನಿಗಳು ಕೂಡ ಇದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿರಾಳಕೊಪ್ಪ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬೆಳಗ್ಗೆ 3.55ರ ಹೊತ್ತಿಗೆ ಘಟನೆ ಸಂಭವಿಸಿದೆ ಎಂದು ಹೇಳಲಾಗಿತ್ತು. ಕೆಲವರು ಮನೆಯಿಂದ ಹೊರ ಬಂದು ತಮಗಾದ ಅನುಭವವನ್ನು ಪರಸ್ಪರ ಹಂಚಿಕೊಂಡಿದ್ದರು. … Read more