ಈಶ್ವರಪ್ಪ ಪರ ಪ್ರಚಾರಕ್ಕೆ ಜನ ಕರೆಯಲು ಹೋದ ಸಂಯೋಜಿಕಿ ಮೇಲೆ ಹಲ್ಲೆ

Crime-News-General-Image

SHIVAMOGGA LIVE NEWS | 24 APRIL 2024 SHIMOGA : ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪರ ಪ್ರಚಾರಕ್ಕೆ ಜನರ ಸಂಯೋಜನೆ ವೇಳೆ ಮಹಿಳೆ ಮೇಲೆ ಹಲ್ಲೆಯಾಗಿದೆ. ಸವರ್‌ಲೈನ್‌ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಮಾರಿಕಾಂಬ ಟ್ರಸ್ಟ್‌ ಸಂಯೋಜಕಿ ಪೂರ್ಣಿಮಾ ಎಂಬುವವರ ಮೇಲೆ ಹಲ್ಲೆಯಾಗಿದೆ. ಏ.20ರಂದು ಸವರ್‌ಲೈನ್‌ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಪೂರ್ಣಿಮಾ ಜನರನ್ನು ಸಂಯೋಜಿಸುತ್ತಿದ್ದರು. ಈ ಸಂದರ್ಭ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಪೂರ್ಣಿಮಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈಶ್ವರಪ್ಪ ಪರ … Read more

BREAKING NEWS – ಬಿಜೆಪಿಯಿಂದ ಈಶ್ವರಪ್ಪ ಉಚ್ಛಾಟನೆ, ಆದೇಶ ಪ್ರಕಟ, ಎಷ್ಟು ವರ್ಷ ಉಚ್ಛಾಟಿಸಲಾಗಿದೆ?

130324 Eshwarappa Enter his car in SHIMOGA

SHIVAMOGGA LIVE NEWS | 22 APRIL 2024 ELECTION NEWS : ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ. ಈ ಸಂಬಂಧ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್‌ ಪಾಟೀಲ್‌ ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಏನಿದೆ? ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದಾರೆ. ಇದರಿಂದ ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಿಗೊಳಿಸಲಾಗಿದೆ. ಅಲ್ಲದೆ … Read more

ಈಶ್ವರಪ್ಪಗೆ ಚಿಹ್ನೆ ನೀಡಿದ ಚುನಾವಣ ಆಯೋಗ, ಹೇಗಿದೆ?

-KS-Eshwarappa-Press-Meet

SHIVAMOGGA LIVE NEWS | 22 APRIL 2024 ELECTION NEWS : ಲೋಕಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಚುನಾವಣ ಆಯೋಗ ಚಿಹ್ನೆ ನೀಡಿದೆ. ಕೈ ಕಟ್ಟಿರುವ ರೈತ ಮತ್ತು ಎರಡು ಕಬ್ಬುಗಳಿರುವ ಚಿಹ್ನೆ ನೀಡಲಾಗಿದೆ. ಇನ್ಮುಂದೆ ಈಶ್ವರಪ್ಪ ಅವರ ಪ್ರಚಾರದ ವೇಳೆ ಈ ಚಿಹ್ನೆ ಬಳಕೆ ಮಾಡಲಿದ್ದಾರೆ. ಈವರೆಗೂ ತಮ್ಮ ಪ್ರಚಾರದಲ್ಲಿ ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಬಳಕೆ ಮಾಡುತ್ತಿದ್ದರು. ಇದೇ ವಿಚಾರವಾಗಿ ಬಿಜೆಪಿ ನ್ಯಾಯಾಲಯದ … Read more

ಪ್ರಚಾರಕ್ಕೆ ಮೋದಿ ಫೋಟೊ, ನ್ಯಾಯಾಲಯಕ್ಕೆ ಈ‍ಶ್ವರಪ್ಪ ಮಧ್ಯಂತರ ಅರ್ಜಿ, ಆಕ್ಷೇಪಣೆಗೆ ಬಿಜೆಪಿಗೆ ಗಡುವು

Eswharappa-moves-to-court-for-modi-photo.

SHIVAMOGGA LIVE NEWS | 19 APRIL 2024 ELECTION NEWS : ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಕೆ ಸಂಬಂಧ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನ್ಯಾಯಾಲಯಕ್ಕೆ ಗುರುವಾರ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯವು ಬಿಜೆಪಿಗೆ ಶುಕ್ರವಾರಕ್ಕೆ ಗಡುವು ನೀಡಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅವರು ಮೋದಿ ಭಾವಚಿತ್ರವನ್ನು ಚುನಾವಣೆ ಪ್ರಚಾರಕ್ಕೆ ಬಳಸದಂತೆ ಸೋಮವಾರ ಶಿವಮೊಗ್ಗದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಸಿಜೆಎಂನಲ್ಲಿ ದಾವೆ ಹೂಡಿದ್ದರು. ಅದಕ್ಕೆ ಆಕ್ಷೇಪಣೆ … Read more

ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಸಿದ ಮತ್ತೊಬ್ಬ ಈಶ್ವರಪ್ಪ, ಯಾವ ಊರಿನವರು?

DS-Eshwarappa-files-nomination.

SHIVAMOGGA LIVE NEWS | 16 APRIL 2024 ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣೆಗೆ ಈಶ್ವರಪ್ಪ ಎಂಬ ಹೆಸರಿನ ಮತ್ತೊಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಡಿ.ಎಸ್.ಈ‍ಶ್ವರಪ್ಪ ಎಂಬುವವರು ಇವತ್ತು ನಾಮಪತ್ರ ಸಲ್ಲಿಸಿದ್ದಾರೆ. ನಾಲ್ವರು ಸೂಚಕರೊಂದಿಗೆ ಆಗಮಿಸಿ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ನಾಮಪತ್ರ ಸಲ್ಲಿಸಿದರು. ಡಿ.ಎಸ್.ಈಶ್ವರಪ್ಪ ಶಿಕಾರಿಪುರ ಪಟ್ಟಣದ ಮಾಯಪ್ಪನ ಕೇರಿಯವರು. ಇದನ್ನೂ ಓದಿ – ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲುವು ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ, ಏ.18ರಂದೇ ಕಾಣಲಿದೆ ಗೆಲುವಿನ ಸಂಭ್ರಮ

ಶಿವಮೊಗ್ಗದಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ ಈಶ್ವರಪ್ಪ, ಇದು ಮೂರನೇ ನಾಮಪತ್ರ

Eshwarappa-files-another-nomination-in-Shimoga

SHIVAMOGGA LIVE NEWS | 15 APRIL 2024 LOKSABHA NEWS : ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಇಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಭೇಟಿಯಾಗಿ ಪುನಃ ನಾಮಪತ್ರ ಸಲ್ಲಿಸಿದರು. ಇದು ಈಶ್ವರಪ್ಪ ಅವರ ಹೆಸರಿನಲ್ಲಿ ಸಲ್ಲಿಕೆಯಾಗುತ್ತಿರುವ ಮೂರನೇ ನಾಮಪತ್ರ. ಏ.12ರಂದು ಈಶ್ವರಪ್ಪ ಅವರು ಒಂದು ನಾಮಪತ್ರ ಸಲ್ಲಿಸಿದ್ದರು. ಇದಕ್ಕೂ ಮೊದಲು ಅವರ ಬೆಂಬಲಿಗರಾದ ಈ.ವಿಶ್ವಾಸ್‌ ಮತ್ತಿತರರು ಒಂದು ನಾಮಪತ್ರ ಸಲ್ಲಿಕೆ ಮಾಡಿದ್ದರು. ಈಗ ಮೂರನೇ ನಾಮಪತ್ರ ಸಲ್ಲಿಸಿರುವುದು ಕುತೂಹಲ … Read more

‘ಎರಡೇ ವಾರದಲ್ಲಿ ಈಶ್ವರಪ್ಪ ಮಾತು ಬದಲಿಸಿದ್ದೇಕೆ, ನಮ್ಮ ಕುಟುಂಬವನ್ನು ಪ್ರಶ್ನಿಸುತ್ತಿರುವುದೇಕೆ?ʼ

BY-Raghavendra-in-Bangalore-sammilana-shimoga-voters

SHIVAMOGGA LIVE NEWS | 15 APRIL 2024 BENGALURU : ರಾಘವೇಂದ್ರ ಅವರು ಐದು ಲಕ್ಷ ಲೀಡ್‌ನಲ್ಲಿ ಗೆಲ್ಲಬೇಕು ಎಂದು ಈ‍ಶ್ವರಪ್ಪ ಅವರು ಹೇಳಿದ್ದರು. ಕೇಂದ್ರದಲ್ಲಿ ಸಚಿವರಾಗಬೇಕು ಎಂದು ಭಾಷಣ ಮಾಡಿದ್ದರು. ಆದರೆ ಎರಡೇ ವಾರದಲ್ಲಿ ನಮ್ಮ ಕುಟುಂಬ ಮತ್ತು ಹಿಂದುತ್ವದ ಕುರಿತು ಪ್ರಶ್ನೆ ಮಾಡಿದ್ದಾರೆ ಎಂದು ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.   ರಾಘವೇಂದ್ರ ಭಾಷಣದ 3 ಪ್ರಮುಖಾಂಶ ಬೆಂಗಳೂರಿನಲ್ಲಿ ಖಾಸಗಿ ಹೊಟೇಲ್‌ನಲ್ಲಿ ಶಿವಮೊಗ್ಗ ಕ್ಷೇತ್ರದ ಮತದಾರರ ಸಮ್ಮಿಲನ ಕಾರ್ಯಕ್ರಮದಲ್ಲಿ … Read more

ಸಾಗರದಲ್ಲಿ ಊಟ ಹಂಚಿಕೆ, ರಾಷ್ಟ್ರಭಕ್ತರ ಬಳಗದ ಆಯೋಜಕನ ವಿರುದ್ಧ ಕೇಸ್‌

Sagara Police Station Building

SHIVAMOGGA LIVE NEWS | 15 APRIL 2024 SAGARA : ರಾಷ್ಟ್ರಭಕ್ತರ ಬಳಗದ ಸಂಯೋಜನೆಯೊಂದಿಗೆ ಸಾಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇಗುಲದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಚುನಾವಣ ಅಧಿಕಾರಿಗಳ ಅನುಮತಿ ಪಡೆಯದೆ ಊಟ ಹಂಚಿದ್ದಕ್ಕೆ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ. ಏ.6ರಂದು ದೇಗುಲದ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಆಯೋಜಕ ಪ್ರಕಾಶ್‌ ಎಂಬುವವರ ವಿರುದ್ಧ ‍ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ … Read more

‘ನಂದೇ ಒರಿಜಿನಲ್‌ ಬಿಜೆಪಿ, ನಾನು ಎ ಟೀಮ್‌, ಈಗ ನಾನು ಕಾಯುತ್ತಿರುವುದು ಒಂದೇ ವಿಷಯಕ್ಕೆ’

-KS-Eshwarappa-Press-Meet

SHIVAMOGGA LIVE NEWS | 15 APRIL 2024 SHIMOGA : ಈಶ್ವರಪ್ಪ ಅವರದ್ದು ಬಿಜೆಪಿ ಬಿ ಟೀಮ್‌ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅವರು ತಮ್ಮ ಹೇಳಿಕೆ ತಿದ್ದಿಕೊಳ್ಳಬೇಕು. ಶೇ.60ರಷ್ಟು ಬಿಜೆಪಿ ಕಾರ್ಯಕರ್ತರು ತಮ್ಮೊಂದಿಗೆ ಇದ್ದಾರೆ. ಹಾಗಾಗಿ ತಮ್ಮದೇ ಒರಿಜಿನಲ್‌ ಬಿಜೆಪಿ ಎಂದು ಲೋಕಸಭೆ ಚುನಾವಣೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ.ರಾಘವೇಂದ್ರ ಅವರದ್ದು ಬಿ ಟೀಮ್.‌ ಹೊಂದಾಣಿಕೆ ಕಾರಣಕ್ಕೆ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿಸಲಾಗಿದೆ. ಕಳೆದ … Read more

ಶಿವಮೊಗ್ಗದಲ್ಲಿ ನರೇಂದ್ರ ಮೋದಿ, ತದ್ರೂಪಿ ಕಂಡು ಜನರಲ್ಲಿ ಅಚ್ಚರಿ, ಯಾರಿದು? ಎಲ್ಲಿಯವರು?

Narendra-Modi-model-Hiriyadka-Sadananda-Nayak-in-Shimoga

SHIVAMOGGA LIVE NEWS | 12 APRIL 2024 SHIMOGA : ಈಶ್ವರಪ್ಪ ತಮ್ಮ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಬಳಕೆ ಮಾಡಬಾರದು ಎಂದು ಬಿಜೆಪಿಯಿಂದ ಒತ್ತಡವಿತ್ತು. ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಮೋದಿ ಫೋಟೊಗಳಿದ್ದ ಧ್ವಜಗಳು ರಾರಾಜಿಸಿದವು. ಅಲ್ಲದೆ, ಮೋದಿಯ ತದ್ರೂಪಿಯೊಬ್ಬರು ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಅಚ್ಚರಿ ಮೂಡಿಸಿದರು. ರಾರಾಜಿಸಿದ ಮೋದಿ ಫೊಟೋಗಳು ನಾಮಪತ್ರ ಸಲ್ಲಿಕೆ ಹಿನ್ನೆಲೆ ಬೆಂಬಲಿಗರ ಮೆರವಣಿಗೆ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಭಾವಿಚಿತ್ರವಿರುವ ಧ್ವಜಗಳು ರಾರಾಜಿಸಿದವು. ಈಶ್ವರಪ್ಪ … Read more