ಮಾರಿಹಬ್ಬಕ್ಕೆ ತಂದಿದ್ದ ನಾಲ್ಕು ಕುರಿತು ಕಳ್ಳತನ, ಎಲ್ಲಿ ಹೇಗಾಯ್ತು ಘಟನೆ?
ಶಿವಮೊಗ್ಗ: ಗೋವಿಂದಪುರ ಗ್ರಾಮದಲ್ಲಿ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು (sheep) ಕಳ್ಳರು ಹೊತ್ತೊಯ್ದಿದ್ದಾರೆ. ಹಬ್ಬದ ಪ್ರಯುಕ್ತ ಮಾರಾಟ ಮಾಡಲು ಚಿತ್ರದುರ್ಗದ ಸಂತೆಯಿಂದ ತಂದಿದ್ದ ಕುರಿಗಳು ಕಳುವಾಗಿವೆ. ಈಶ್ವರಪ್ಪ ಎಂಬುವವರು ಮಾರಿಹಬ್ಬದ ಪ್ರಯುಕ್ತ ಮಾರಾಟ ಮಾಡಲು ಚಿತ್ರದುರ್ಗದ ಸಂತೆಯಲ್ಲಿ ₹1,30,000 ಮೌಲ್ಯದ ನಾಲ್ಕು ಕುರಿಗಳನ್ನು ಖರೀದಿಸಿ ತಂದಿದ್ದರು. ಈ ಕುರಿಗಳನ್ನು ಮನೆಯ ಪಕ್ಕದ ತೆರೆದ ಕೊಟ್ಟಿಗೆಯಲ್ಲಿ ಇತರ ಕುರಿಗಳೊಂದಿಗೆ ಕಟ್ಟಿದ್ದರು. ರಾತ್ರಿ ಕೊಟ್ಟಿಗೆಯಲ್ಲಿ ಎಲ್ಲಾ ಕುರಿಗಳು ಇದ್ದವು. ಮರುದಿನ ಎದ್ದು ನೋಡಿದಾಗ ಚಿತ್ರದುರ್ಗದಿಂದ … Read more