ಕಣ್ಣಿಗೆ ಟಾರ್ಚ್ ಲೈಟ್ ಬಿಟ್ಟು, ಖಾರದ ಪುಡಿ ಎರಚಿ, ವ್ಯಕ್ತಿ ಮೇಲೆ ಮನಸೋಯಿಚ್ಛೆ ಹಲ್ಲೆ
SHIMOGA | ಸಹೋದರನ ತೋಟದಲ್ಲಿ ಊಟಕ್ಕೆ ಹೋದಾಗ ವ್ಯಕ್ತಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ, ಮನಸೋಯಿಚ್ಛೆ ಹಲ್ಲೆ ಮಾಡಲಾಗಿದೆ. (ATTACK AT MATTUR ROAD) ಮಳಲಿಕೊಪ್ಪದ ಅರುಣ್ ಕುಮಾರ್ ಎಂಬುವವರ ಮೇಲೆ ಹಲ್ಲೆಯಾಗಿದೆ. ಮತ್ತೂರು ರಸ್ತೆಯಲ್ಲಿರುವ ತಮ್ಮ ಸಹೋದರನ ತೋಟದಲ್ಲಿ ಅರುಣ್ ಕುಮಾರ್ ಅವರು ರಾತ್ರಿ ಊಟಕ್ಕೆ ತೆರಳಿದ್ದರು. ಏಕಾಏಕಿ ಎದುರಿಗೆ ಬಂದ ಮೂರ್ನಾಲ್ಕು ಜನರು ಅರುಣ್ ಕುಮಾರ್ ಮುಖಕ್ಕೆ ಟಾರ್ಚ್ ಬಿಟ್ಟಿದ್ದಾರೆ. ಅಲ್ಲದೆ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಕಲ್ಲು ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. … Read more