ಪಾಲಿಕೆಯಲ್ಲಿ ನಡೆಯುತ್ತಿರುವ ಕೋಟಿ ಕೋಟಿಯ ಕಾಮಗಾರಿ ಬಗ್ಗೆ ಪಾಲಿಕಗೇ ಗೊತ್ತಿಲ್ಲವಂತೆ..!

Shimoga-Palike-Premises-Road-Work-controversy

SHIMOGA | ಶಿವಮೊಗ್ಗ ಮಹಾನಗರ ಪಾಲಿಕೆಗೆ ಗೊತ್ತಿಲ್ಲದೆ ಪಾಲಿಕೆ ಆವರಣದಲ್ಲಿ ಕೋಟಿ ಕೋಟಿಯ (CRORE RUPEES) ಕಾಮಗಾರಿ ನಡೆಯುತ್ತಿದೆ. ಈ ಕುರಿತು ಮಾಹಿತಿ ಹಕ್ಕು ಅಧಿನಿಯಮದ ಅಡಿ ಮಾಹಿತಿ ಕೇಳಿದಾಗ. ತನಗೇನು ಗೊತ್ತಿಲ್ಲ ಎಂದು ಪಾಲಿಕೆ ಆಡಳಿತ ನುಣುಚಿಕೊಂಡಿದೆ. ಈ ನಡುವೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಪಾಲಿಕೆ ಆವರಣದಲ್ಲಿ 4.60 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ … Read more

ಶಿವಮೊಗ್ಗ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಹೊಸ ಮಿಸಲಾತಿ ಪ್ರಕಟ

Mahanagara-Palike-Shimoga

SHIMOGA | ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನದ ಮೀಸಲಾತಿಯನ್ನು (new reservation) ಸರ್ಕಾರ ಬದಲಾವಣೆ ಮಾಡಿದೆ. ಹೈಕೋರ್ಟ್ ಆದೇಶದ ಮೇರೆಗೆ ಹೊಸತಾಗಿ ಮೀಸಲಾತಿಯನ್ನು ಪ್ರಕಟಿಸಿದೆ. ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಆ.24ರಂದು ಮೀಸಲು ಪ್ರಕಟಿಸಲಾಗಿತ್ತು. ಆಗ ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ (ಎ), ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗ ಮಹಿಳೆಗೆ ಮೀಸಲು ಎಂದು ಪ್ರಕಟಿಸಲಾಗಿತ್ತು. ಹೈಕೋರ್ಟ್ ಆದೇಶದ ಮೇರೆಗೆ ಸರ್ಕಾರ ಮೀಸಲಾತಿಯನ್ನು (new reservation) ಬದಲಾಯಿಸಿದೆ. ಶಿವಮೊಗ್ಗ ಪಾಲಿಕೆ ಮೇಯರ್ ಸ್ಥಾನವನ್ನು … Read more

ಶಿವಮೊಗ್ಗ ನಗರದಲ್ಲಿ ರಂಗ ದಸರಾ, ಏನೇನೆಲ್ಲ ಸ್ಪರ್ಧೆಗಳಿವೆ? ಎಲ್ಲೆಲ್ಲಿ ನಾಟಕ ಪ್ರದರ್ಶನವಿದೆ?

Mahanagara-Palike-Shimoga

SHIMOGA | ಮಹಾನಗರ ಪಾಲಿಕೆಯ ದಸರಾ 2022  ಅಂಗವಾಗಿ ಸೆ.27ರಿಂದ ಶಿವಮೊಗ್ಗದಲ್ಲಿ ರಂಗ ದಸರಾ (RANGA DASARA) ಆಯೋಜಿಸಲಾಗಿದೆ ಎಂದು ರಂಗ ದಸರಾ ಸಮಿತಿ ಅಧ್ಯಕ್ಷ ಎಸ್.ಎನ್.ಚನ್ನಬಸಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರಂಗದಸರಾದಲ್ಲಿ (RANGA DASARA) ರಂಗಕಲೆಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ರಂಗ ಸಮಾಗಮ, ಮೂಕಾಭಿನಯ ಸ್ಪರ್ಧೆ, ರಂಗ ತುಣಕು, ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ … Read more

20 ವರ್ಷದಿಂದ ಮನೆ ಕಟ್ಟದೆ ಖಾಲಿ ಉಳಿದಿದ್ದ 543 ನಿವೇಶನ ರದ್ದುಗೊಳಿಸಿದ ಶಿವಮೊಗ್ಗ ಪಾಲಿಕೆ

Palike-with-Commissioner-photo8578/6

SHIMOGA |  20 ವರ್ಷವಾದರೂ ಮನೆ ನಿರ್ಮಾಣ ಮಾಡದ ಹಿನ್ನೆಲೆ ಬೊಮ್ಮನಕಟ್ಟೆ ಆಶ್ರಯ (ASHRAYA) ಬಡಾವಣೆಯ 543 ನಿವೇಶನಗಳನ್ನು ರದ್ದು ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಾನಗರ ಪಾಲಿಕೆಯ ಆಶ್ರಯ (ASHRAYA) ಯೋಜನೆಯಡಿ, 1997ರಲ್ಲಿ  ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ‘ಎ’ ಇಂದ ‘ಜಿ’ ಬ್ಲಾಕ್‍ವರೆಗೆ ನಿವೇಶನ ಹಂಚಲಾಗಿತ್ತು. ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಿ 20 ವರ್ಷವಾದರೂ ಮನೆ ನಿರ್ಮಿಸಿಕೊಂಡು ವಾಸವಿರಲಿಲ್ಲ. ಈ ಹಿನ್ನೆಲೆ, ಆಶ್ರಯ ಸಮಿತಿ ಸಭೆ ನಡೆಸಿ, ಖಾಲಿ ಇರುವ … Read more

ನಿಗದಿಯಾಗಿದ್ದ ಶಿವಮೊಗ್ಗ ಮೇಯರ್, ಉಪ ಮೇಯರ್ ಚುನಾವಣೆ ಮುಂದೂಡಿಕೆ, ಕಾರಣವೇನು?

Mahanagara-Palike-Shimoga

SHIMOGA | ಮಹಾನಗರ ಪಾಲಿಕೆ (PALIKE) ಮೇಯರ್ (MAYOR), ಉಪ ಮೇಯರ್ ಚುನಾವಣೆಗೆ (ELECTION) ನಿಗದಿಯಾಗಿದ್ದ ದಿನಾಂಕವನ್ನು ಹೈಕೋರ್ಟ್ (HIGH COURT) ಮಧ್ಯಂತರ ಅದೇಶದ ಮೇರೆಗೆ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಮುಂದೂಡಿದ್ದಾರೆ. ಪೂರ್ವ ನಿಗದಿಯಂತೆ ಸೆ.13ರಂದು ಚುನಾವಣೆ ನಡೆಯಬೇಕಿತ್ತು. ಆದರೆ ಮೇಯರ್ ಸ್ಥಾನ ಎಸ್.ಟಿಗೆ ಮೀಸಲಾಗದೆ ಹಲವು ವರ್ಷಗಳಾಗಿವೆ ಎಂದು ವ್ಯಕ್ತಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರಿಂದ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್ ಚುನಾವಣೆ ದಿನಾಂಕವನ್ನು ಮುಂದೂಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಸೆ.6ರಂದು ಪ್ರಕರಣದ ವಿಚಾರಣೆ ಮುಂದುವರಿಸುವುದಾಗಿ … Read more

ಶಿವಮೊಗ್ಗದ ನೂತನ ಮೇಯರ್, ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿ

Mahanagara-Palike-Shimoga

ಶಿವಮೊಗ್ಗ | ಮಹಾನಗರ ಪಾಲಿಕೆ ಮೇಯರ್ (MAYOR), ಉಪ ಮೇಯರ್ (DEPUTY MAYOR) ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಸೆ.13ರಂದು ಚುನಾವಣೆ ನಡೆಸುವಂತೆ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧಿಸೂಚನೆ ಪ್ರಕಟಿಸಿದ್ದಾರೆ. ಆ ದಿನ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆವರೆಗೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬಳಿಕ ನಾಮಪತ್ರ ಪರಿಶೀಲನೆ, ಹಿಂಪಡೆಯಲು ಸಮಯ ನಿಗದಿ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸಲಾಗುವುದು. ಇದನ್ನೂ ಓದಿ – ಶಿವಮೊಗ್ಗ ಸಿಟಿ ಸೆಂಟರ್ … Read more

ಶಿವಮೊಗ್ಗ ನಗರದಲ್ಲಿ ಒಂದು ದಿನ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

Mahanagara-Palike-Shimoga

ಶಿವಮೊಗ್ಗ | ಗಣೇಶ ಚತುರ್ಥಿ (GANESH CHATURTHI) ಅಂಗವಾಗಿ ಶಿವಮೊಗ್ಗ ನಗರದಲ್ಲಿ ಒಂದು ದಿನ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ (MEAT SALE BAN) ನಿಷೇಧಿಸಲಾಗಿದೆ. ಆಗಸ್ಟ್ 31 ರಂದು ಗಣೇಶ ಚತುರ್ಥಿ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. ಮಾಂಸ ಮಾರಾಟ ಉದ್ದಿಮೆದಾರರು ಅಂದು ಮಾರಾಟ ಬಂದ್ ಮಾಡಿ ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ಮನವಿ ಮಾಡಿದೆ‌. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ … Read more

ಶಿವಮೊಗ್ಗ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಪೈಪೋಟಿ, ಯಾರಾಗ್ತಾರೆ ನಗರದ ಪ್ರಥಮ ಪ್ರಜೆ?

Mahanagara-Palike-Shivamogga

ಶಿವಮೊಗ್ಗ | ಮೇಯರ್ (MAYOR), ಉಪ ಮೇಯರ್ (DEPUTY MAYOR) ಸ್ಥಾನದ ಚುನಾವಣೆಗೆ (ELECTION) ಕೊನೆಗೂ ಮೀಸಲಾತಿ  (RESERVATION) ಪ್ರಕಟವಾಗಿದೆ. ನಾಲ್ಕನೆ ಅವಧಿಗೆ ನಗರದ ಪ್ರಥಮ ಪ್ರಜೆ ಯಾರಾಗುತ್ತಾರೆ ಎಂಬ ಕುತೂಹಲ ಮತ್ತು ರಾಜಕೀಯ ಚರ್ಚೆಗಳು ಆರಂಭವಾಗಿದೆ. ಶಿವಮೊಗ್ಗ ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದೆ. ಇದಕ್ಕೆ ಐವರು ಆಕಾಂಕ್ಷಿಗಳಿದ್ದಾರೆ. ಇನ್ನ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇಲ್ಲಿಯು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಐದು ತಿಂಗಳು ಹಿಂದೆಯೇ ಆಗಬೇಕಿತ್ತು ಮೇಯರ್, ಉಪ ಮೇಯರ್ … Read more

ಶಿವಮೊಗ್ಗದಲ್ಲಿ ವಿವಾದದ ಬಳಿಕ ಎಚ್ಚೆತ್ತ ಪಾಲಿಕೆ, ಅಶಾಂತಿ ಬೆನ್ನಿಗೆ ನೀತಿ ರೂಪಿಸಲು ಪ್ಲಾನ್

Shimoga-Flex-Controversy-Gopi-Circle

ಶಿವಮೊಗ್ಗ | ಫ್ಲೆಕ್ಸ್ (flex) ವಿವಾದದಿಂದಾಗಿ ನಗರದಲ್ಲಿ ಶಾಂತಿ ಭಂಗ ಉಂಟಾಗಿದೆ. ಕಳೆದ ಒಂದು ವಾರದಿಂದ ಶಿವಮೊಗ್ಗ ನಗರದಲ್ಲಿ (shimoga city) ನಿಷೇಧಾಜ್ಞೆ (prohibitory order) ಜಾರಿಯಲ್ಲಿದೆ. ಇದಕ್ಕೆಲ್ಲ ಕಾರಣ ಮಹಾನಗರ ಪಾಲಿಕೆಯ (mahanagara palike) ನೀತಿ. ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಸುವ ಸಂಬಂಧ ಸರಿಯಾದ ನಿಯಮ ರೂಪಿಸದೆ ಇರುವುದೆ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಯಾವುದೇ ಹುಟ್ಟುಹಬ್ಬ, ಹಬ್ಬಹರಿದಿನ, ಜಾತ್ರೆ, ಪುಣ್ಯಸ್ಮರಣೆ ಇದ್ದರೂ ಶಿವಮೊಗ್ಗದ ಗಲ್ಲಿಗಲ್ಲಿಗಳೂ, ಪ್ರಮುಖ ಸರ್ಕಲ್‌ಗಳು ಫ್ಲೆಕ್ಸ್ ಮಯವಾಗುತ್ತವೆ. ಇದರಲ್ಲೂ ರಾಜಕಾರಣಿಗಳ ಅಬ್ಬರ ಜೋರು. … Read more

ಸ್ಮಾರ್ಟ್ ಸಿಟಿ ಅವಾಂತರ, ಪಿಎಂಸಿಗೆ ಕೋಟಿ ಕೋಟಿ ಹಣ ಕೊಡುವುದು ವ್ಯರ್ಥ

Rekha-Ranganath-Memorandum-to-DC

ಶಿವಮೊಗ್ಗ | ಸ್ಮಾಟ್ ಸಿಟಿ  (SMART CITY) ಕಾಮಗಾರಿ ಸಂಪೂರ್ಣ ಸರಿ ಆಗುವವರೆಗೆ ಪಿ.ಎಂ.ಸಿ.(ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಕನ್ಸಲ್ಟೆನ್ಸಿ) ಯವರಿಗೆ ಹಣ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ನೇತೃತ್ವದಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪಿಎಂಸಿಗೆ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ 26 ಕೋಟಿ 95 ಲಕ್ಷ ರೂ. ಮಂಜೂರಾಗಿದೆ. ಈಗಾಗಲೇ 17 ಕೋಟಿ 92 ಲಕ್ಷ ರೂ ಹಣವನ್ನು ನೀಡಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯು ಪೂರ್ಣಗೊಳ್ಳುವ ತನಕ ಮುಂದಿನ ಹಣ … Read more