ಮುಳುಗಿದ ಲಾಂಚ್, ಜನರ ಪರದಾಟ, ಇನ್ನಾದರೂ ಬಗೆಹರಿಯುತ್ತಾ ಸಮಸ್ಯೆ?

shiggalu-karuru-launch-drowned

SAGARA | ಸೂಕ್ತ ನಿರ್ವಹಣೆ ಇಲ್ಲದೆ ಶಿಗ್ಗಲು – ಕರೂರು ಲಾಂಚ್ ನೀರಿನಲ್ಲಿ ಮುಳುಗಿದೆ (launch drowned). ಇದನ್ನು ಮೇಲೆತ್ತಿ, ಪುನಃ ಸೇವೆ ಆರಂಭಿಸುವ ಪ್ರಯತ್ನವಾಗಿಲ್ಲ. ಹಾಗಾಗಿ ಈ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಅನುಕೂಲಕ್ಕೆ ಎಂದು ಕಳೆದ ವರ್ಷ ಲಾಂಚ್ ಸೇವೆ ಆರಂಭಿಸಲಾಗಿತ್ತು. ಆದರೆ ಈ ಲಾಂಚ್ ನೀರಿನಲ್ಲಿ ಮುಳುಗಿ ನಾಲ್ಕು ತಿಂಗಳಾಗಿದೆ. ಹಾಗಾಗಿ ಚನ್ನಗೊಂಡ ಮತ್ತು ಸುತ್ತಮುತ್ತಲ ಜನರು ಪರದಾಡುವಂತಾಗಿದೆ. ಹಸಿರುಮಕ್ಕಿಯಿಂದ ತಂದ ಲಾಂಚ್ launch drowned ಶಿಗ್ಗಲು … Read more

ಸರಣಿ ಅಪಘಾತ, ಎರಡು ಕಾರುಗಳು ಜಖಂ, ಚಕ್ರದಡಿ ಸಿಲುಕಿದ ಬೈಕ್, ಬಸ್ಸಿನ ಗಾಜು ಪೀಸ್ ಪೀಸ್

Car-bike-bus-serial-accident-at-kugve-cross-in-Sagara.

SAGARA | ಕಾರುಗಳು, ಬೈಕ್ ಮತ್ತು ಬಸ್ಸಿನ ನಡುವೆ ಸರಣಿ ಅಪಘಾತ (SERIAL ACCIDENT) ಸಂಭವಿಸಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾಗರ ತಾಲೂಕು ಕುಗ್ವೆ ಕ್ರಾಸ್ ಬಳಿ ಸಂಜೆ ಘಟನೆ ಸಂಭವಿಸಿದೆ. ಎರಡು ಕಾರುಗಳು, ಬಸ್ಸು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ನಾಲ್ವರು ಗಾಯಗೊಂಡಿದ್ದಾರೆ. ಹೇಗಾಯ್ತು ಆಪಘಾತ? (SERIAL ACCIDENT) ಕುಗ್ವೆ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾಗನಾರ್ ಕಾರು, ಬೈಕ್, ಕಾರು ಮತ್ತು … Read more

ಸಾಗರ ಪಟ್ಟಣದಲ್ಲಿ ಹಿಟ್ ಅಂಡ್ ರನ್, ನಡೆದು ಹೋಗುತ್ತಿದ್ದ ವ್ಯಕ್ತಿಗೆ ನ್ಯಾನೋ ಕಾರು ಡಿಕ್ಕಿ

Sagara Police Station Building

SAGARA |ರಸ್ತೆ ಪಕ್ಕ ನಡೆದು ಹೋಗುತ್ತಿದ್ದ ವ್ಯಕ್ತಿಗೆ ನ್ಯಾನೋ ಕಾರು (NANO CAR) ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾನೆ. ಮನ್ಮನೆ ಗ್ರಾಮದ ರಮೇಶ (40) ಗಾಯಾಳು. ಸಾಗರದ ವೈಭವ್ ಲಾಡ್ಜ್’ನಲ್ಲಿ ರೂಂ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ತೆರಳಲು ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ವೇಗವಾಗಿ ಬಂದ ನ್ಯಾನೋ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ನಡೆದು ಹೋಗುತ್ತಿದ್ದ ರಮೇಶಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಮೇಶನ ತಲೆ, … Read more

ವಿಚಕ್ಷಣ ದಳ ಕಂಡು ಅಡ್ಡದಾರಿಯಲ್ಲಿ ಪರಾರಿಯಾದ ಪಿಕಪ್ ವಾಹನ, ಬೆನ್ನಟ್ಟಿದ ಸಿಬ್ಬಂದಿ

Anandapura Sagara Graphics

SAGARA| ವಾಹನ ತಪಾಸಣೆ (CHECKING) ವೇಳೆ ಅರಣ್ಯ ವಿಚಕ್ಷಣ ದಳದ ಅಧಿಕಾರಿಗಳನ್ನು ಕಂಡು ಅಡ್ಡದಾರಿಯಲ್ಲಿ ಸಾಗಿದ ಬೊಲೆರೋ ಪಿಕಪ್ ವಾಹನವನ್ನು ಬೆನ್ನಟ್ಟಿ, ಗೋವುಗಳ ರಕ್ಷಣೆ ಮಾಡಲಾಗಿದೆ. ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಆನಂದಪುರ ಸಮೀಪದ ಅಂದಾಸುರ ರೈಲ್ವೆ ಗೇಟ್ ಬಳಿ ಘಟನೆ ಸಂಭವಿಸಿದೆ. ಅರಣ್ಯ ವಿಚಕ್ಷಣ ದಳದ ಅಧಿಕಾರಿಗಳು ಶನಿವಾರ ಬೆಳಗಿನ ಜಾವ 3 ಗಂಟೆ ಹೊತ್ತಿಗೆ ವಾಹನಗಳ ತಪಾಸಣೆ (CHECKING) ನಡೆಸುತ್ತಿದ್ದರು. ಈ ವೇಳೆ ಬಂದ ಬೊಲೆರೋ ಪಿಕಪ್ ವಾಹನ, ದಿಢೀರನೆ ಪಕ್ಕದ ಮಣ್ಣು ರಸ್ತೆಗೆ … Read more

ಆನಂದಪುರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು

Anandapura Sagara Graphics

SAGARA| ಆನಂದಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅವಿರೋಧವಾಗಿ (unanimous) ಆಯ್ಕೆ ಮಾಡಲಾಗಿದೆ. ನೇತ್ರಾವತಿ ಮಂಜುನಾಥ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಜೇಂದ್ರ ಯಾದವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪೂರ್ವ ಒಪ್ಪಂದದಂತೆ ನವೀನ ರವೀಂದ್ರ ಅವರು ಅಧ್ಯಕ್ಷ ಸ್ಥಾನಕ್ಕೆ, ಮಹೋನ್ ಕುಮಾರ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ (unanimous) ಆಯ್ಕೆ ಮಾಡಲಾಗಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ … Read more

ಕಾರು, ಬಸ್ಸು ಮುಖಾಮುಖಿ ಡಿಕ್ಕಿ, ಧರ್ಮದರ್ಶಿ ಪಾರು, ಸಹೋದರ ಸಾವು

Omni-KSRTC-Bus-Vadanbail-Dharmadarshi

SAGARA | ಓಮ್ನಿ ಕಾರು ಮತ್ತು KSRTC ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ಒಬ್ಬರು ಸಾವನ್ನಪ್ಪಿದ್ದು, ಶ್ರೀಕ್ಷೇತ್ರ ವಡನ್ ಬೈಲು (Vadanbail) ಧರ್ಮದರ್ಶಿ ಅವರಿಗೆ ಗಂಭೀರ ಗಾಯವಾಗಿದೆ. ದೇವಯ್ಯ (70) ಮೃತ ದುರ್ದೈವಿ. ಶ್ರೀಕ್ಷೇತ್ರ ವಡನ್ ಬೈಲು (Vadanbail) ಧರ್ಮದರ್ಶಿ ಹೆಚ್.ಎಂ.ವೀರರಾಜ ಜೈನ್ ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಜೋಗದ ಶಿರೂರು ಕೆರೆ ಸೇತುವೆ ಮೇಲೆ ಘಟನೆ ಸಂಭವಿಸಿದೆ. ಶ್ರೀಕ್ಷೇತ್ರ ವಡನ್ ಬೈಲು ಧರ್ಮದರ್ಶಿ ಹೆಚ್.ಎಂ.ವೀರರಾಜ ಜೈನ್ ಅವರು ಸಹೋದರ ದೇವಯ್ಯ ಅವರೊಂದಿಗೆ ಕಾರ್ಗಲ್’ಗೆ ತರಳುತ್ತಿದ್ದರು. ಸಹಕಾರ … Read more

ಮಕ್ಕಳ ಕಳ್ಳಿ ಅಂತಾ ಮಹಿಳೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ, ವಿಚಾರಣೆ ವೇಳೆ ಗೊತ್ತಾಗಿದ್ದೇನು?

Sagara Police Station Building

SAGAR | ಮಕ್ಕಳ ಕಳ್ಳಿ (CHILD THEFT) ಎಂದು ಭಾವಿಸಿ ಮಹಿಳೆಯೊಬ್ಬರನ್ನು ಹಿಡಿದು ಸಾರ್ವಜನಿಕರೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವಿಚಾರ ತಿಳಿದು ಸಾಗರ ಪಟ್ಟಣ ಪೊಲೀಸ್ ಠಾಣೆ ಮುಂದೆ ದೊಡ್ಡ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಸಾಗರ ಪಟ್ಟಣದಲ್ಲಿ ಓಡಾಡುತ್ತಿದ್ದ ಮಹಿಳೆಯೊಬ್ಬರನ್ನು ಮಕ್ಕಳ ಕಳ್ಳಿ ಎಂದ ಭಾವಿಸಿ ಸಾರ್ವಜನಿಕರು ಆಕೆಯನ್ನು ವಿಚಾರಿಸಿದ್ದಾರೆ. ಅಲ್ಲದೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಠಾಣೆ ಮುಂದೆ ಸೇರಿದ ಜನ ಇನ್ನು, … Read more

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಜವರಾಯನಂತೆ ಬಂದ ವಾಹನ, ಬೈಕ್ ಸವಾರ ಸಾವು

Ranjith-Dies-in-an-accident-at-Sagara-Jog-Road

SAGARA | ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ವಾಹನವೊಂದು ಡಿಕ್ಕಿ (ACCIDENT) ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಾಗರದ ಜೋಗ ರಸ್ತೆಯ ಪ್ರಗತಿ ಶಾಲೆಯ ಮುಂಭಾಗ ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ಕುಗ್ವೆ ಗ್ರಾಮದ ರಂಜಿತ್ (26) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನ ಡಿಕ್ಕಿ (ACCIDENT) ಹೊಡೆದು ರಂಜಿತ್ ಚಲಿಸುತ್ತಿದ್ದ ಬೈಕನ್ನು ಸ್ವಲ್ಪ ದೂರದವರೆಗೂ ಎಳೆದೊಯ್ದಿದೆ. ತೀವ್ರ ಗಾಯಗೊಂಡಿದ್ದ ರಂಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಂಪ್ಯೂಟರ್ ಮತ್ತು ಸಿಸಿಟಿವಿ ಕ್ಯಾಮರಾ ರಿಪೇರಿ ವೃತ್ತಿ ಮಾಡುತ್ತಿದ್ದ ರಂಜಿತ್, ಸೋಮವಾರ … Read more

ಜೋಡಿ ಕೊಲೆ ಕೇಸ್, ಪೊಲೀಸ್ ಇಲಾಖೆ ವೈಫಲ್ಯ ಖಂಡಿಸಿ ಪ್ರತಿಭಟನೆಗೆ ನಿರ್ಧಾರ

meeting-to-protest-against-double-murder.

SAGARA | ಸಾಗರ ತಾಲೂಕು ಬ್ಯಾಕೋಡಿನ ಸುಂದರ ಶೇಟ್ ದಂಪತಿ ಬರ್ಬರ ಕೊಲೆಯಾಗಿ (DOUBLE MURDER) ಎರಡು ವರ್ಷವಾದರೂ ಆರೋಪಿಗಳು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ವಿಫಲವಾಗಿರುವುದನ್ನು ಖಂಡಿಸಿ  ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೆ.21ರಂದು ಬ್ಯಾಕೋಡಿನಲ್ಲಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ದೇವರಾಜ ಕಪ್ಪದೂರು, ಕೃಷ್ಣ ಭಂಡಾರಿ, ಜಿನೇಂದ್ರ ಜೈನ್‌, ತಿಮ್ಮಪ್ಪ ಹುರುಳಿ, ಲಕ್ಷ್ಮೀಪತಿ ಜೈನ್, ವಿಜಯ ಅಡಗಳಲೆ, ರಘುಪತಿ, ವಿಶ್ವನಾಥ, ಕೃಷ್ಣಮೂರ್ತಿ, ಮಂಜಪ್ಪ, ಸುರೇಶ್‌ ಕೆರೋಡಿ, ಶೇಖರ್ ಇತರರಿದ್ದರು. … Read more

ತಾಯಿಯ ಅಗಲಿಕೆಯಿಂದ ಮನನೊಂದಿದ್ದ ಮಗ ನೇಣಿಗೆ ಶರಣು

Youth-Commites-Suicide-over-mothers-death

SAGARA | ತಾಯಿಯ ಸಾವಿನಿಂದ ಮನನೊಂದು ಮಗ ನೇಣು ಬಿಗಿದು ಆತ್ಮಹತ್ಯೆ (SUICIDE) ಮಾಡಿಕೊಂಡಿದ್ದಾನೆ. ತಾಯಿ ಮೃತಪಟ್ಟು ಸರಿಯಾಗಿ ಒಂದು ವರ್ಷವಾಗಿತ್ತು. ನಾಗರಾಜ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಗ್ಯಾಸ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಎಸ್.ಎನ್.ನಗರದ ಹೊಸ ಬಡಾವಣೆಯ ಮನೆಯಲ್ಲಿ ಘಟನೆ ಸಂಭವಿಸಿದೆ. ನಾಗರಾಜನ ತಾಯಿ ತೀರಿಕೊಂಡು ಸೋಮವಾರಕ್ಕೆ ಒಂದು ವರ್ಷ ಆಗಲಿತ್ತು. ತಾಯಿಯ ಸಾವಿನಿಂದ ಆತ ಮನನೊಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೆ ಕಾರಣಕ್ಕೆ ಆತ್ಮಹತ್ಯೆ(SUICIDE)  ಮಾಡಿಕೊಂಡಿರುವ ಶಂಕೆ ಇದೆ. ಸಾಗರ ನಗರ ಠಾಣೆ … Read more