ತೀರ್ಥಹಳ್ಳಿಯಲ್ಲಿ ಪ್ಲಾಸ್ಟಿಕ್ ನಿಷೇಧ, ಎಲ್ಲೆಂದರಲ್ಲಿ ಕಸ ಹಾಕುವಂತಿಲ್ಲ, ಸ್ವಚ್ಛ ಪಟ್ಟಣ ಗಲೀಜು ಮಾಡಿದ್ರೆ ಬೀಳುತ್ತೆ ದಂಡ

Thirthahalli V

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 11 ಜುಲೈ 2019 ಇನ್ಮುಂದೆ ತೀರ್ಥಹಳ್ಳಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವಂತಿಲ್ಲ. ಮೂತ್ರ ಮಾಡುವಂತಿಲ್ಲ. ಹಸಿ ಮತ್ತು ಒಣ ಕಸವನ್ನು ವಿಂಗಡಿಸದೆ ಕಸದ ವಾಹನಕ್ಕೆ ಕೊಡುವಂತಿಲ್ಲ. ಹೀಗೆಲ್ಲ ಮಾಡಿದರೆ ದಂಡ ಮತ್ತು ಕಠಿಣ ಕ್ರಮ ಗ್ಯಾರಂಟಿ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಆಡಳಿತಾಧಿಕಾರಿ, ತಹಶೀಲ್ದಾರ್ ಆನಂದಪ್ಪ ನಾಯ್ಕ್, ಕಸದ ಉತ್ಪಾದರೆ ಅದರ ನಿರ್ವಾಹಕರು. ಆದ್ದರಿಂದ ಕಸದ ವಿಂಗಡನೆ ವಿಚಾರದಲ್ಲಿ ಜಾಗೃತಿ ವಹಿಸಬೇಕು ಎಂದು ಎಚ್ಚರಿಸಿದರು. ಹಸಿ, ಒಣ … Read more

ತೀರ್ಥಹಳ್ಳಿಯ ಬೆಜ್ಜವಳ್ಳಿಯಲ್ಲಿ ಆಟೋ ಮೇಲೆ ಉರುಳಿಬಿದ್ದ ಮರ, ಚಾಲಕನಿಗೆ ಗಂಭೀರ ಗಾಯ, ಜನರಿಂದ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 11 ಜುಲೈ 2019 ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಇದ್ದ ಭಾರಿ ಗಾತ್ರದ ಅಕೇಶಿಯಾ ಮರ ಆಟೋರಿಕ್ಷಾ ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಆಟೋ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಸುಜಯ್ (45) ಗಾಯಗೊಂಡಿರುವ ಚಾಲಕ. ಮರ ಬಿದ್ದ ಪರಿಣಾಮ ಸುಜಯ್ ಅವರ ತಲೆಗೆ ಗಂಭೀರ ಗಾಯವಾಗಿದೆ. ಆಟೋ ರಿಕ್ಷ ನುಜ್ಜುಗುಜ್ಜಾಗಿದೆ. ಘಟನೆ ಬಳಿಕ ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ … Read more

ಸೊರಬದಲ್ಲೂ ಶರಾವತಿ ಹೋರಾಟ ಜೋರು, ಬೆಳಗ್ಗೆಯಿಂದ ಅಂಗಡಿಗಳು ಬಂದ್, ವಾಹನ ಸಂಚಾರ ಸ್ಥಗಿತ

ಶಿವಮೊಗ್ಗ ಲೈವ್.ಕಾಂ | ಸೊರಬ | 10 ಜುಲೈ 2019 ಶರಾವತಿ ನದಿಗಾಗಿ ನಡೆದ ಹೋರಾಟಕ್ಕೆ ಸೊರಬ ತಾಲೂಕಿನಲ್ಲೂ ಭಾರೀ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಸೊರಬ ಪಟ್ಟಣ ಬಂದ್ ಆಗಿತ್ತು. ಮೆಡಿಕಲ್ ಶಾಪ್, ಅಸ್ಪತ್ರೆ ಹೊರತು ಮತ್ತಿನ್ಯಾವ ಅಂಗಡಿಗಳು ಸೊರಬದಲ್ಲಿ ಬಾಗಿಲು ತೆಗೆದಿರಲಿಲ್ಲ. ವ್ಯಾಪಾರ ವಹಿವಾಟು ಸ್ಥಬ್ಧವಾಗಿತ್ತು. ಖಾಸಗಿ ಬಸ್’ಗಳು ರಸ್ತೆಗಿಳಿದಿರಲಿಲ್ಲ. ವಾಹನ ಸಂಚಾರವೂ ಕಡಿಮೆಯಾಗಿತ್ತು. ಇನ್ನು, ಸೊರಬದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣದ ಸರ್ಕಲ್’ವರೆಗೆ ಬಂದು ಅಲ್ಲಿಂದ ಪುನಃ ಶ್ರೀ … Read more

ಶರಾವತಿ ನದಿಗಾಗಿ ಹೊಸನಗರ ಸಂಪೂರ್ಣ ಬಂದ್, ಹಳ್ಳಿ ಹಳ್ಳಿಯಲ್ಲೂ ನಡೆಯುತ್ತಿದೆ ಪ್ರತಿಭಟನೆ

100719 Hosanagara Bandh For Sharavati River 1

ಶಿವಮೊಗ್ಗ ಲೈವ್.ಕಾಂ | ಹೊಸನಗರ | 10 ಜುಲೈ 2019 ಶರಾವತಿ ನದಿಗಾಗಿ ಕರೆ ನೀಡಿದ್ದ ಜಿಲ್ಲೆ ಬಂದ್’ಗೆ ಹೊಸನಗರದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರು. ಹಾಗಾಗಿ ಅಂಗಡಿ ಮುಂಗಟ್ಟು ಬಂದ್ ಆಗದ್ದವು. ಖಾಸಗಿ ಬಸ್ ಸೇವೆ ಸ್ಥಗಿತಗೊಂಡಿತ್ತು. ಹಾಗಾಗಿ ಜನ ಸಂಚಾರವೂ ಕಡಿಮೆಯಾಗಿತ್ತು. ಇನ್ನು, ರಸ್ತೆಯಲ್ಲಿ ವಾಹನಗಳು ವಿರಳವಾಗಿದ್ದವು. ಮತ್ತೊಂದೆಡೆ, ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮಳೆಯನ್ನೂ ಲೆಕ್ಕಿಸದೆ … Read more

ತೀರ್ಥಹಳ್ಳಿ ಸಂಪೂರ್ಣ ಸ್ಥಬ್ಧ, ಅಂಗಡಿಗಳು ಬಂದ್, ಖಾಸಗಿ ಬಸ್ ಸ್ಟಾಪ್

100719 Sharavathi Protest at thirthahalli 1

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 10 ಜುಲೈ 2019 ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಸರ್ಕಾರದ ಯೋಜನೆ ವಿರೋಧಿಸಿ ತೀರ್ಥಹಳ್ಳಿಯಲ್ಲಿ ಬಂದ್ ಮಾಡಲಾಯಿತು. ಜನರು ಸ್ವಯಂ ಪ್ರೇರಿತವಾಗಿ ಬಂದ್’ಗೆ ಬಂಬಲ ಘೋಷಿಸಿದ್ದರು. ಬಂದ್ ಹಿನ್ನೆಲೆ ತೀರ್ಥಹಳ್ಳಿಯಲ್ಲಿ ವರ್ತಕರು ಅಂಗಡಿ ಮುಂಗಟ್ಟು ಬಂದ್ ಮಾಡಿದ್ದರು. ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆಯಾಗಿತ್ತು. ಬ್ಯಾಂಕು, ಚಿತ್ರಮಂದಿರಗಳು ಕೂಡ ಬಂದ್ ಆಗಿದ್ದವು. ಆದರೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಇನ್ನು, ಶಿವಮೊಗ್ಗ – ಉಡುಪಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸುತ್ತಿದ್ದ … Read more

ಶರಾವತಿ ನದಿಗಾಗಿ ಹೊಸನಗರದಿಂದ ಶಿವಮೊಗ್ಗದವರೆಗೆ ಬೈಕ್ ಜಾಥಾ, ಸರ್ಕಾರ ನಡೆಗೆ ಸ್ವಾಮೀಜಿ ನೇತೃತ್ವದಲ್ಲಿ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 9 ಜುಲೈ 2019 ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಸರ್ಕಾರದ ನಡೆಯನ್ನು ವಿರೋಧಿಸಿ ಇವತ್ತು ಹೊಸನಗರದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ಜಾಥಾ ಆಯೋಜಿಸಲಾಗಿದೆ. ಮೂಲೆಗದ್ದೆ ಮಠದ ಸ್ವಾಮೀಜಿ ನೇತೃತ್ವದಲ್ಲಿ ಜಾಥಾ ನಡೆಯಿತು. ಹೊಸನಗರದಿಂದ ಬೆಳಗ್ಗೆ ಹೊರಟ ಬೈಕ್ ಜಾಥಾಗೆ ದಾರಿ ಉದ್ದಕ್ಕೂ ಸಾರ್ವಜನಿಕರು ಸ್ವಾಗತ ನೀಡಿದರು. ಮಧ್ಯಾಹ್ನದ ವೇಳೆಗೆ ಬೈಕ್ ಜಾಥಾ ಶಿವಮೊಗ್ಗ ನಗರಕ್ಕೆ ಆಗಮಿಸಿತು. ನಗರದ ವಿವಿಧೆಡೆ ರಾಲಿ ನಡೆಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ … Read more

ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಭದ್ರಾವತಿಯಲ್ಲಿ ಖಂಡನೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮೆರವಣಿಗೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 06 ಜುಲೈ 2019 ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ, ಭದ್ರಾವತಿಯಲ್ಲಿ ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿತು. ಇನ್ನು, ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಎಬಿವಿಪಿ ಸಂಘಟನೆ ಹೆಸರಿಗೆ ಕಳಂಕ ತರುವಂತೆ ಮೆಸೇಜ್ ಪ್ರಕಟಿಸುತ್ತಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತಹಶೀಲ್ದಾರ್ ಕಚೇರಿ ಮುಂದೆ ಇವತ್ತು ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ಅತ್ಯಾಚಾರ ನಡೆಸಿದ ಐವರು ಆರೋಪಿಗಳನ್ನು … Read more

ಹತ್ಯೆ ಮಾಡಿ ರಸ್ತೆ ಪಕ್ಕದ ತೋಟದಲ್ಲಿ ಮೃತದೇಹ ಹೂತಿಟ್ಟ ದುಷ್ಕರ್ಮಿಗಳು

shivamogga graphics map

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 05 ಜುಲೈ 2019 ವ್ಯಕ್ತಿಯೊಬ್ಬನ ಹತ್ಯೆ ಮಾಡಿ, ರಸ್ತೆ ಪಕ್ಕದ ಜಮೀನನಲ್ಲಿ ಅರೆಬರೆ ಕಾಣುವ ಹಾಗೆ ಹೂತು ಹಾಕಿದ್ದ ಘಟನೆ ಶಿವಮೊಗ್ಗದ ಲಕ್ಕಿನಕೊಪ್ಪದಲ್ಲಿ ನಡೆದಿದೆ. ಸೂಳೆಬೈಲು ನಿವಾಸಿ ಆರೀಫ್ ಖಾನ್ (51) ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಆರೀಫ್’ನ ಕೊಲೆ ಮಾಡಿ, ಲಕ್ಕಿನಕೊಪ್ಪದ ಜಮೀನು ಒಂದರಲ್ಲಿ ಹೂತು ಹಾಕಿದ್ದಾರೆ. ಲಕ್ಕಿನಕೊಪ್ಪದಿಂದ ಬಿ.ಆರ್.ಪಿಗೆ ತೆರಳುವ ಮಾರ್ಗದಲ್ಲಿ ರಸ್ತೆ ಜಮೀನಿನಲ್ಲಿ ಮೃತದೇಹವನ್ನು ಹೂಳಲಾಗಿತ್ತು. ಮೃತದೇಹದ ಕೆಲವು ಭಾಗ ಜನರಿಗೆ ಕಾಣಿಸುವಂತಿತ್ತು. ಹಾಗಾಗಿ ಸ್ಥಳೀಯರ ಇದನ್ನು … Read more

VISL ಖಾಸಗೀಕರಣ ವಿರೋಧಿಸಿ ಮಳೆಯನ್ನು ಲೆಕ್ಕಿಸದೆ ಕಾರ್ಮಿಕರ ಹೋರಾಟ, ಸಂಸದ ರಾಘವೇಂದ್ರ ರಾಜೀನಾಮೆಗೆ ಆಗ್ರಹ

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 05 ಜುಲೈ 2019 ವಿಐಎಸ್ಎಲ್ ಕಾರ್ಖಾನೆ ಮಾರಾಟಕ್ಕೆ ಉಕ್ಕು ಪ್ರಾಧಿಕಾರ ಟೆಂಡರ್ ಕರೆದಿರುವುದನ್ನು ವಿರೋಧಿಸಿ, ಕಾರ್ಮಿಕರು ಇವತ್ತು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ನಡೆ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿದ ಕಾರ್ಮಿಕರು, ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ವಿಐಎಸ್ಎಲ್ ಕಾರ್ಖಾನೆ ಮುಂದೆ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ವಿಐಎಸ್ಎಲ್ ಕಾರ್ಖಾನೆಯ ಅಭಿವೃದ್ಧಿಗೆ ಕೇಂದ್ರ … Read more

ಭದ್ರಾವತಿಯ VISL ಮಾರಾಟಕ್ಕಿದೆ, ಖರೀದಿಗೆ 25 ದಿನವಷ್ಟೇ ಅವಕಾಶ, ಕಾರ್ಖಾನೆಯನ್ನು ಯಾರು ಕೊಳ್ಳಬಹುದು ಗೊತ್ತಾ?

VISL Bhadravathi 1

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 05 ಜುಲೈ 2019 ತೀವ್ರ ವಿರೋಧದ ನಡುವೆಯೂ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು (VISL) ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಭಾರತೀಯ ಉಕ್ಕು ಪ್ರಾಧಿಕಾರ (SAIL) ಜಾಗತಿಕ ಟೆಂಡರ್ ಕರೆದಿದೆ. ಇದರ ಜಾಹೀರಾತನ್ನು ರಾಷ್ಟ್ರೀಯ ಪತ್ರಿಕೆಗಳು ಮತ್ತು SAIL ವೆಬ್’ಸೈಟ್’ನಲ್ಲಿ ಪ್ರಕಟಿಸಲಾಗಿದೆ. 25 ದಿನದ ಅವಕಾಶ VISL ಜೊತೆಗೆ ಇನ್ನೆರಡು ಕಾರ್ಖಾನೆಗಳನ್ನು ಮಾರಟ ಮಾಡುತ್ತಿರುವುದಾಗಿ SAIL ಪ್ರಕಟಿಸಿದೆ. ಸೇಲಂ ಮತ್ತು ದುರ್ಗಾಪುರದಲ್ಲಿರುವ ಕಾರ್ಖಾನೆಗಳನ್ನು … Read more