BREAKING NEWS | ಭದ್ರಾವತಿಯ ಬದ್ಧ ವೈರಿಗಳನ್ನು ಒಗ್ಗೂಡಿಸಿದ ಡಿಕೆಶಿ, ಕೈ ಜೋಡಿಸಿದರು ಸಂಗಮೇಶ್, ಅಪ್ಪಾಜಿಗೌಡ

ಶಿವಮೊಗ್ಗ ಲೈವ್.ಕಾಂ | 19 ಏಪ್ರಿಲ್ 2019 ಮೈತ್ರಿ ಪಕ್ಷದ ಪಾಲಿನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿಯಾದ ಮೊದಲ ದಿನವೇ ಬಿಗ್ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಭದ್ರಾವತಿ ಶಾಸಕ ಸಂಗಮೇಶ್ ಮತ್ತು ಮಾಜಿ ಶಾಸಕ ಅಪ್ಪಾಜಿಗೌಡ ಒಟ್ಟಿಗೆ ಕೈ ಜೋಡಿಸುವಂತೆ ಮಾಡಿದ್ದಾರೆ. ತುರ್ತು ಸಭೆ ನಡಸಿ, ಸಂಗಮೇಶ್ ಮತ್ತು ಅಪ್ಪಾಜಿಗೌಡ ನಡುವೆ ಒಮ್ಮತ ಮೂಡಿಸಿದ್ದಾರೆ. ಬೆಳಗ್ಗೆಯಿಂದಲೇ ಇಬ್ಬರೂ, ಭದ್ರಾವತಿ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟಿಗೆ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, ಅಪ್ಪಾಜಿಗೌಡ … Read more

ಚುನಾವಣೆ, ಪ್ರಚಾರದ ಒತ್ತಡದ ನಡುವೆ ಕುಟುಂಬ ಸಹಿತ ಜಾತ್ರೆಯಲ್ಲಿ ಭಾಗವಹಿಸಿದ ಯಡಿಯೂರಪ್ಪ, ಸೆಲ್ಫಿ ಮುಗಿಬಿದ್ದರು ಜನ

ಶಿವಮೊಗ್ಗ ಲೈವ್.ಕಾಂ | 19 ಏಪ್ರಿಲ್ 2019 ಚುನಾವಣಾ ಪ್ರಚಾರದ ಒತ್ತಡದ ನಡುವೆಯೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿದ್ದರು. ಬೆಳಗ್ಗೆ ಕುಟುಂಬ ಸಹಿತ ದೇವಸ್ಥಾನಕ್ಕೆ ಆಗಮಿಸಿದ ಯಡಿಯೂರಪ್ಪ, ದೇವರ ದರ್ಶನ ಪಡೆದರು. ಕೆಲ ಹೊತ್ತು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಡಿಯೂರಪ್ಪ ಜೊತೆ ಸೆಲ್ಫಿಗೆ ರಶ್ ಇನ್ನು, ಯಡಿಯೂರಪ್ಪ ಅವರು ದೇವರ ದರ್ಶನ ಪಡೆದು ದೇವಸ್ಥಾನದಿಂದ ಹಿಂತಿರುಗುತ್ತಿದ್ದಂತೆ, ಜನರು ಮುಗಿಬಿದ್ದರು. ಸೆಲ್ಫಿ ತೆಗೆಸಿಕೊಳ್ಳಲು ನಾ ಮುಂದು, ತಾ ಮುಂದು ಎಂದು ನೂಕುನುಗ್ಗಲು ಉಂಟಾಯಿತು. ಪೊಲೀಸರ … Read more

‘ರಾಘವೇಂದ್ರಗೆ ಶಿವಮೊಗ್ಗ ನಗರ ಒಂದರಲ್ಲೇ 50 ಸಾವಿರ ಲೀಡ್ ಕೊಡಿಸುತ್ತೇವೆ’

Eshwarappa General Image 1

ಶಿವಮೊಗ್ಗ ಲೈವ್.ಕಾಂ | 19 ಏಪ್ರಿಲ್ 2019 ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ, ಶಿವಮೊಗ್ಗ ನಗರದಲ್ಲಿ 50 ಸಾವಿರಕ್ಕೂ ಹೆಚ್ಚಿನ ಮತಗಳು ಸಿಗಲಿವೆ ಅಂತಾ ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಉಪ ಚುನಾವಣೆ ಸಂದರ್ಭ, ಬಿ.ವೈ.ರಾಘವೇಂದ್ರ ಅವರಿಗೆ 50 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಶಿವಮೊಗ್ಗ ನಗರದಲ್ಲೇ ಅಷ್ಟು ಮತಗಳ ಅಂತರ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಗುಲಾಮರಲ್ಲ, ರಾಷ್ಟ್ರಭಕ್ತರನ್ನು ಸೃಷ್ಟಿಸುತ್ತಿದೆ ಇನ್ನು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆ.ಎಸ್.ಈಶ್ವರಪ್ಪ … Read more

‘ಅವರು ಲೀಡರ್ ಅಲ್ಲ, ಮೆಂಟಲ್ ಕೇಸು’ ಬಿಜೆಪಿ ಎಂಎಲ್ಎಗೆ ಶಿವಮೊಗ್ಗದಲ್ಲಿ ಡಿಕೆಶಿ ಮಾತಿನ ಪಂಚ್

ಶಿವಮೊಗ್ಗ ಲೈವ್.ಕಾಂ | 19 ಏಪ್ರಿಲ್ 2019 ಐದು ವರ್ಷದ ಸಾಧನೆ ಮೇಲೆ ಮತ ಕೇಳಬೇಕಾದವರು ಉಗ್ರಗಾಮಿ, ಪಾಕಿಸ್ತಾನದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜೀವ್ ಗಾಂಧಿ, ಇಂದಿರಾಗಾಂಧಿಯವರು ದೇಶಕ್ಕಾಗಿ ತಮ್ಮ ದೇಹವನ್ನೇ ತ್ಯಾಗ ಮಾಡಲಿಲ್ಲವಾ..? ಹೀಗಂತ ಬಿಜೆಪಿ ನಾಯಕರಿಗೆ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜಕೀಯಕ್ಕೋಸ್ಕರ ಸೈನಿಕರನ್ನು ಬಳಸಿಕೊಳ್ತೀರಾ. ಸೈನಿಕರ ಸಾವಿನಿಂದ 22 ಸೀಟು ಗೆಲ್ತೀವಿ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಸೇರಿ ಎಲ್ಲ ಬಿಜೆಪಿ ನಾಯಕರು ಕ್ಷಮಾಪಣೆ ಕೇಳಬೇಕು ಎಂದು … Read more

ನಾಳೆ ಭದ್ರಾವತಿಗೆ ಅಮಿತ್ ಷಾ, ಉಂಬ್ಳೆಬೈಲಿಗೆ ದೇವೇಗೌಡ, ಮೂರು ದಿನ ಶಿವಮೊಗ್ಗದಲ್ಲೇ ಇರ್ತಾರೆ ಡಿಕೆಶಿ ಬ್ರದರ್ಸ್

ಶಿವಮೊಗ್ಗ ಲೈವ್.ಕಾಂ | 19 ಏಪ್ರಿಲ್ 2019 ಶಿವಮೊಗ್ಗದಲ್ಲಿ ಲೋಕಸಭೆ ಚುನಾವಣೆಗೆ ಇನ್ನು ನಾಲ್ಕು ದಿನ ಬಾಕಿ ಇದೆ. ಹಾಗಾಗಿ ರಾಜಕೀಯ ಪಕ್ಷಗಳಲ್ಲಿ ಪ್ರಚಾರ ಬಿರುಸುಗೊಂಡಿದೆ. ಗಣ್ಯಾತಿಗಣ್ಯರು ಕ್ಯಾಂಪೇನ್ ಮಾಡಲು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ದೇವೇಗೌಡ, ಅಮಿತ್ ಷಾ ಕ್ಯಾಂಪೇನ್ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಪ್ರಚಾರ ನಡೆಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಭದ್ರಕೋಟೆ ಭದ್ರಾವತಿಯಲ್ಲಿ ಅಮಿತ್ ಷಾ ರೋಡ್ ಶೋ ಮಾಡಲಿದ್ದಾರೆ. ಏಪ್ರಿಲ್ 20ರಂದು ಬೆಳಗ್ಗೆ 10.30ಕ್ಕೆ … Read more

ರಾಘವೇಂದ್ರ ಗೆಲ್ಲದಿದ್ದರೆ ರಾಜಕೀಯ ನಿವೃತ್ತಿಯ ಸವಾಲು ಹಾಕಿದ ಬಿಜೆಪಿ ಎಂಎಲ್ಎ

Haratalu-Halappa

ಶಿವಮೊಗ್ಗ ಲೈವ್.ಕಾಂ | 19 ಏಪ್ರಿಲ್ 2019 ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಗೆಲ್ಲದೆ ಇದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತಾ ಸಾಗರ ಶಾಸಕ ಹರತಾಳು ಹಾಲಪ್ಪ ಸವಾಲು ಹಾಕಿದ್ದಾರೆ. ಸಾಗರದ ಮಡಸೂರು ಲಿಂಗದಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಹಾಲಪ್ಪ, ಈ ಸವಾಲು ಹಾಕಿದ್ದಾರೆ. ಈಡಿಗ ಸಮುದಾಯಕ್ಕೆ ಬಿಜೆಪಿಯಿಂದ ಎಂದಿಗೂ ಅನ್ಯಾಯವಾಗಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾರ್ಕಳದ ಕೋಟಿ ಚನ್ನಯ್ಯ ಪೀಠ ಸ್ಥಾಪನೆಗೆ 99 ಕೋಟಿ ರೂ. ನೀಡಿದ್ದರು. ಮಂಗಳೂರಿನಲ್ಲಿ ಜಮೀನು ನೀಡಿದ್ದಾರೆ. ಶಿವಮೊಗ್ಗದಲ್ಲಿ … Read more

ಸಾಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸ್ಲೀಪರ್ ಬಸ್ ಪಲ್ಟಿ, ಸಾವಿನ ಸಂಖ್ಯೆ ಮೂರಕ್ಕೆ

ಶಿವಮೊಗ್ಗ ಲೈವ್.ಕಾಂ | 18 ಏಪ್ರಿಲ್ 2019 ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸಾಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್, ಉಳ್ಳೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪಲ್ಟಿಯಾಗಿದ್ದ ಬಸ್ಸಿನಡಿ ಹಲವು ಸಿಲುಕಿರುವ ಆತಂಕವಿತ್ತು. ಸ್ಥಳೀಯರು, ಪೊಲೀಸರ ನೆರವಿನಿಂದ ಪ್ರಯಾಣಿಕರ ರಕ್ಷಣಾ ಕಾರ್ಯ ನಡೆಯಿತು. ಹೊನ್ನಾವರದ ಕೀರ್ತನಾ (12), … Read more

ಹೊಳೆಹೊನ್ನೂರಿನಿಂದ ಭದ್ರಾವತಿಗೆ ತೆರಳುತ್ತಿದ್ದ ಬೈಕ್’ನಲ್ಲಿ ಕಂತೆ ಕಂತೆ ಹಣ ಪತ್ತೆ, ದುಡ್ಡು ಯಾರಿಗೆ ಸೇರಿದ್ದು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 17 ಏಪ್ರಿಲ್ 2019 ಬೈಕ್’ನಲ್ಲಿ ಸಾಗಿಸುತ್ತಿದ್ದ ನಾಲ್ಕು ಲಕ್ಷ ರೂ. ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಾಗತಿ ಬೆಳಗಲು ಚೆಕ್’ಪೋಸ್ಟ್’ನಲ್ಲಿ ವಾಹನ ತಪಾಸಣೆ ನಡೆಸುವಾಗ ಹಣ ಪತ್ತೆಯಾಗಿದೆ. ಮಂಗಳವಾರ ಹೊಳೆಹೊನ್ನೂರು ಕಡೆಯಿಂದ ಭದ್ರಾವತಿ ಕಡೆಗೆ ಬರುತ್ತಿದ್ದ ಪಲ್ಸರ್ ಬೈಕನ್ನು ಚೆಕ್’ಪೋಸ್ಟ್’ನಲ್ಲಿ ತಪಾಸಣೆ ನಡೆಸಲಾಯಿತು. ಈ ವೇಳೆ ನಾಲ್ಕು ಲಕ್ಷ ರೂ. ಹಣ ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲದೆ, ಸಾಗಿಸುತ್ತಿದ್ದರಿಂದ, ಹಣವನ್ನು ವಶಕ್ಕೆ ಪಡೆಯಲಾಯಿತು. ಚುನಾವಣಾಧಿಕಾರಿ ರಾಮಚಂದ್ರ, ನಾಗರಾಜ್ ಮತ್ತು ಪೊಲೀಸ್ ಸಿಬ್ಬಂದಿ ಸಿ.ಕೆ.ರವಿಕುಮಾರ್ … Read more

ಇವತ್ತು ಸಿಎಂ, ಮಾಜಿ ಸಿಎಂ ಬಿರುಸಿನ ಪ್ರಚಾರ, ಬರ್ತಿದ್ದಾರೆ ಡಿಕೆಶಿ, ನಟಿ ಶೃತಿ, ಯಾರೆಲ್ಲ ಎಲ್ಲೆಲ್ಲಿ ಕ್ಯಾಂಪೇನ್ ಮಾಡ್ತಾರೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 17 ಏಪ್ರಿಲ್ 2019 ರಾಜ್ಯದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ, ಪ್ರಚಾರಕ್ಕೆ ತೆರೆ ಬಿದ್ದ ಬೆನ್ನಿಗೆ, ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಪ್ರಚಾರ ಬಿರುಸುಗೊಂಡಿದೆ. ಎರಡನೇ ಹಂತದಲ್ಲಿ ತೀವ್ರ ಜಿದ್ದಾಜಿದ್ದಿಯ ಕ್ಷೇತ್ರಗಳಲ್ಲಿ ಒಂದಾಗಿರುವ ಶಿವಮೊಗ್ಗದಲ್ಲಿ ಇವತ್ತು ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಯಾರು ಎಲ್ಲೆಲ್ಲಿ ಕ್ಯಾಂಪೇನ್ ಮಾಡ್ತಾರೆ? ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಮಧು ಬಂಗಾರಪ್ಪ ಪರವಾಗಿ ಜಿಲ್ಲೆಯ … Read more

ಶಿವಮೊಗ್ಗದಲ್ಲಿ ಯಡಿಯೂರಪ್ಪಗೆ ನೀತಿ ಸಂಹಿತೆ ಬಿಸಿ, ಬ್ಯಾಗು, ಹೆಲಿಕಾಪ್ಟರ್ ಫುಲ್ ತಪಾಸಣೆ

ಶಿವಮೊಗ್ಗ ಲೈವ್.ಕಾಂ | 16 ಏಪ್ರಿಲ್ 2019 ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿದೆ. ಶಿವಮೊಗ್ಗ ಹೆಲಿಪ್ಯಾಡ್’ನಲ್ಲಿ ಯಡಿಯೂರಪ್ಪ ಅವರ ಬ್ಯಾಗ್’ಗಳು ಮತ್ತು ಹೆಲಿಕಾಪ್ಟರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಯಡಿಯೂರಪ್ಪ ಅವರು ನಿನ್ನೆ ಶಿವಮೊಗ್ಗಕ್ಕೆ ಬಂದಿದ್ದರು. ಇವತ್ತು ಗುರುಮಿಟ್ಕಲ್’ನಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ತೆರಳಿದ್ದಾರೆ. ಈ ವೇಳೆ ಶಿವಮೊಗ್ಗೆ ಹೆಲಿಪ್ಯಾಡ್’ಗೆ ಆಗಮಿಸುತ್ತಿದ್ದಂತೆ, ಚುನಾವಣಾ ಅಧಿಕಾರಿಗಳು ಯಡಿಯೂರಪ್ಪ ಅವರನ್ನು ತಡೆದು, ಹೆಲಿಕಾಪ್ಟರ್ ಮತ್ತು ಬ್ಯಾಗುಗಳನ್ನು ತಪಾಸಣೆ ನಡೆಸಿದರು. ಆ ಬಳಿಕ ಯಡಿಯೂರಪ್ಪ ಅವರ … Read more