ಲಾಕ್‌ಡೌನ್‌ ಪರಿಣಾಮ, ಶಿವಮೊಗ್ಗ ಪೊಲೀಸ್ ಮೀಟಿಂಗ್ ಫುಲ್ ಹೈಟೆಕ್, ಹೇಗೆ ನಡೀತಿದೆ ಗೊತ್ತಾ ಈಗಿನ ಸಭೆ?

300420 Online Video Conference By Shimoga Police 1

ಶಿವಮೊಗ್ಗ ಲೈವ್.ಕಾಂ | SHIMOGA | 30 ಏಪ್ರಿಲ್ 2020 ಒಂದೆಡೆ ಕರೋನ ಲಾಕ್‍ಡೌನ್ ಭದ್ರತೆಯ ಹೊಣೆ. ಮತ್ತೊಂದು ಕಡೆ ಸಾಮಾಜಿಕ ಅಂತರವಿರಬೇಕು ಎಂಬ ನಿಯಮ. ಈ ನಡುವೆ ನಿರಂತರ ಸಭೆಗಳನ್ನು ನಡೆಸುವುದು ಅಷ್ಟು ಸುಲಭವಲ್ಲ. ಸರ್ಕಾರ, ಜಿಲ್ಲಾಡಳಿತದ ಸೂಚನೆಯನ್ನು ಚಾಚು ತಪ್ಪದೆ ಪಾಲಿಸುವಂತೆ ಇಲಾಖೆಯ ಪ್ರತಿ ಸಿಬ್ಬಂದಿಗೂ ಮನವರಿಕೆ ಮಾಡುವುದು ಅಂದುಕೊಂಡಷ್ಟು ಸರಾಗವಲ್ಲ. ಇದೇ ಕಾರಣಕ್ಕೆ ಶಿವಮೊಗ್ಗ ಪೊಲೀಸ್ ಇಲಾಖೆ ಆನ್‍ಲೈನ್ ಮಾರ್ಗ ಕಂಡುಕೊಂಡಿದೆ. ಕರೋನ ಲಾಕ್‍ಡೌನ್ ಆರಂಭವಾಗುತ್ತಿದ್ದಂತೆ ಫೀಲ್ಡಿಗಿಳಿದು ಕೆಲಸ ಆರಂಭಿಸಿದ್ದ ಪೊಲೀಸರು, ಈಗಲು … Read more

ಸಾಮೂಹಿಕ ಪ್ರಾರ್ಥನೆಗಳಿಲ್ಲ, ಇಫ್ತಾರ್ ಕೂಟ ನಡೆಸುವಂತಿಲ್ಲ, ರಂಜಾನ್‌ಗೂ ತಟ್ಟಿದ ಕರೋನ ಬಿಸಿ

290420 Masjid Bandh in Shimoga During Lockdown 1

ಶಿವಮೊಗ್ಗ ಲೈವ್.ಕಾಂ | SHIMOGA | 29 ಏಪ್ರಿಲ್ 2020 ರಂಜಾನ್‌ ಹಬ್ಬಕ್ಕೂ ಕರೋನ ಲಾಕ್‌ಡೌನ್‌ ಬಿಸಿ ತಟ್ಟಿದೆ. ಶಿವಮೊಗ್ಗದಲ್ಲಿ ಸಾಮೂಹಿಕ ಪ್ರಾರ್ಥನೆ ಇಲ್ಲ. ಇಫ್ತಾರ್‌ ಕೂಟಗಳನ್ನು ನಡೆಸುವಂತಿಲ್ಲ. ಈ ಬಾರಿ ಆಚರಣೆ ಮನೆಯ  ನಾಲ್ಕು ಗೋಡೆಗಷ್ಟೇ ಸೀಮಿತಗೊಂಡಿದೆ. ರಂಜಾನ್‌ ಹಿನ್ನೆಲೆ ಮುಸ್ಲಿಂ ಸಮುದಾಯದವರು ಒಂದು ತಿಂಗಳು ಉಪವಾಸ ನಡೆಸುತ್ತಾರೆ. ಈ ವೇಳೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಗುತ್ತಿತ್ತು. ಆದರೆ ಕರೋನ ಪರಿಣಾಮ ಈ ಬಾರಿ ಶಿವಮೊಗ್ಗದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂರ್ಧಿಸಲಾಗಿದೆ. ಇನ್ನು, ಈ ಹಬ್ಬದ ಸಂದರ್ಭ … Read more

ಶಿವಮೊಗ್ಗದಿಂದ KSRTC ಬಸ್ಸು ಹತ್ತಿದ ಕಾರ್ಮಿಕರು, ಎಲ್ಲಿಗೆಲ್ಲ ತೆರಳುತ್ತಿದ್ದಾರೆ? ಎಷ್ಟು ಮಂದಿಗೆ ಅವಕಾಶ?

290420 KSRTC bus for Workers during lockdown 1

ಶಿವಮೊಗ್ಗ ಲೈವ್.ಕಾಂ | SHIMOGA | 29 ಏಪ್ರಿಲ್ 2020 ಹೊರ ಜಿಲ್ಲೆ, ಹೊರ ರಾಜ್ಯದಿಂದ ಶಿವಮೊಗ್ಗಕ್ಕೆ ಬಂದು ಲಾಕ್‍ಡೌನ್ ಸಂದರ್ಭ ಸಿಕ್ಕಬಿದ್ದಿರುವ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 400 ಜನರನ್ನು ಗುರುತಿಸಲಾಗಿದೆ. ಕಾರ್ಮಿಕರನ್ನು ಕಳುಹಿಸಲು KSRTC ಬಸ್ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ದಿನದಲ್ಲಿ ಅವರನ್ನೆಲ್ಲ ಇಲ್ಲಿಂದ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ. ಬಸ್ಸಿನಲ್ಲೂ ಸಾಮಾಜಿಕ ಅಂತರಕಾರ್ಮಿಕರನ್ನು ತಮ್ಮೂರಿಗೆ ಕಳುಹಿಸುವಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ. ಹಾಗಾಗಿ ಪ್ರತಿ ಸೀಟಿನಲ್ಲಿ … Read more

ಗಾಂಧಿ ಬಜಾರ್, ಬಿ.ಹೆಚ್.ರಸ್ತೆಯಲ್ಲಿ ಅಂಗಡಿಗಳಿಗೆ ಶಿವಮೊಗ್ಗ ಡಿಸಿ, ಎಸ್‌ಪಿ ಭೇಟಿ

290420 DC SP visit Gandhi Bazaar 1

ಶಿವಮೊಗ್ಗ ಲೈವ್.ಕಾಂ | SHIMOGA | 29 ಏಪ್ರಿಲ್ 2020 ಶಿವಮೊಗ್ಗ ನಗರದ ಕೆಲವು ಕಡೆಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವ್ಯಾಪಾರಿಗಳ ಜೊತೆಗೆ ಚರ್ಚೆ ನಡೆಸಿದರು. ಗಾಂಧಿ ಬಜಾರ್ ಮತ್ತು ಬಿ.ಹೆಚ್.ರಸ್ತೆಯ ವಿವಿಧೆಡೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಭೇಟಿ ನೀಡಿದರು. ಇಲ್ಲಿ ವ್ಯಾಪಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು. ವ್ಯಾಪಾರಿಗಳು ಲಾಕ್‍ಡೌನ್ ನಿಯಮ, ವ್ಯಾಪಾರ ನಡೆಸುವಾಗ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಎಂದು … Read more

ಶಿವಮೊಗ್ಗದಲ್ಲಿ ಜನ ಇದನ್ನೇ ಲಾಕ್‌ಡೌನ್‌ ಸಡಿಲಿಕೆ ಅಂತಾ ಭಾವಿಸಿಬಾರದು, ಡಿಸಿ ಎಚ್ಚರಿಕೆ

100420 Sectorwise Lockdown in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 29 ಏಪ್ರಿಲ್ 2020 ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಿದೆ. ಆದರೆ ಇದು ಲಾಕ್‍ಡೌನ್ ಸಡಿಲಿಕೆಯಲ್ಲ. ಹಾಗಾಗಿ ಜನರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಕೆಲವು ಅಭಿವೃದ್ಧಿ ಕಾಮಗಾರಿ ಮತ್ತು ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಿದೆ. ಖರೀದಿ ಕ್ಷೇತ್ರವನ್ನು ವಿಸ್ತರಿಸಿದೆ. ಇದನ್ನೇ ಲಾಕ್‍ಡೌನ್ ಸಡಿಲಿಕೆ ಎಂದು ಭಾವಿಸಿ ಜನರು ರಸ್ತೆಗಿಳಿಯುತ್ತಿದ್ದಾರೆ. ಅನವಶ್ಯಕವಾಗಿ ರಸ್ತೆಗಿಳಿದರೆ ಕ್ರಮ ಕೈಗೊಳ್ಳಲಾಗುತ್ತದೆ … Read more

ಏಪ್ರಿಲ್ 28ರ ಕರೋನ ರಿಪೋರ್ಟ್ | ಶಿವಮೊಗ್ಗದಲ್ಲಿ 1200 ಗಡಿ ದಾಟಿದ ಟೆಸ್ಟಿಂಗ್, ಇನ್ನೆಷ್ಟು ರಿಪೋರ್ಟ್ ಬರಬೇಕಿದೆ?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 29 ಏಪ್ರಿಲ್ 2020 ಕರೋನ ಸೋಂಕ ಹರಡದಂತೆ ತಡೆಯಲು ಶಿವಮೊಗ್ಗದಲ್ಲಿ ಹೆಚ್ಚು ಜನರನ್ನು ಟೆಸ್ಟ್‍ಗೆ ಒಳಪಡಿಸಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಜನರಿಗೆ ಪರೀಕ್ಷೆಯಾಗಿದೆ. ಎಲ್ಲವು ನೆಗಟಿವರ್ ರಿಪೋರ್ಟ್ ಬರುತ್ತಿರುವುದು ಶಿವಮೊಗ್ಗದವರ ಪಾಲಿಗೆ ನೆಮ್ಮದಿ ಮೂಡಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ನಿಗಾದಲ್ಲಿರುವವರು = 584 14 ದಿನ ನಿಗಾ ಅವಧಿ ಪೂರೈಸಿದವರು = 00 28 ದಿನ ನಿಗಾ ಅವಧಿ ಪೂರೈಸಿದವರು = 584 ಆಸ್ಪತ್ರೆಯ ಕ್ವಾರಂಟೈನ್’ನಲ್ಲಿ ಇರುವವರು = 04 ಹಾಸ್ಟೆಲ್ ಕ್ವಾರಂಟೈನ್’ನಲ್ಲಿ … Read more

ಏಪ್ರಿಲ್ 27ರ ಕರೋನ ರಿಪೋರ್ಟ್ | ಶಿವಮೊಗ್ಗದಲ್ಲಿ ಸಾವಿರ ದಾಟಿದ ಟೆಸ್ಟಿಂಗ್, ನೆಗೆಟಿವ್ ಎಷ್ಟು? ಇನ್ನೆಷ್ಟು ರಿಪೋರ್ಟ್ ಬರಬೇಕಿದೆ?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 28 ಏಪ್ರಿಲ್ 2020 ಕರೋನ ಸೋಂಕ ಹರಡದಂತೆ ತಡೆಯಲು ಶಿವಮೊಗ್ಗದಲ್ಲಿ ಹೆಚ್ಚು ಜನರನ್ನು ಟೆಸ್ಟ್‍ಗೆ ಒಳಪಡಿಸಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಜನರಿಗೆ ಪರೀಕ್ಷೆಯಾಗಿದೆ. ಎಲ್ಲವು ನೆಗಟಿವರ್ ರಿಪೋರ್ಟ್ ಬರುತ್ತಿರುವುದು ಶಿವಮೊಗ್ಗದವರ ಪಾಲಿಗೆ ನೆಮ್ಮದಿ ಮೂಡಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ನಿಗಾದಲ್ಲಿರುವವರು = 584 14 ದಿನ ನಿಗಾ ಅವಧಿ ಪೂರೈಸಿದವರು = 00 28 ದಿನ ನಿಗಾ ಅವಧಿ ಪೂರೈಸಿದವರು = 584 ಆಸ್ಪತ್ರೆಯ ಕ್ವಾರಂಟೈನ್’ನಲ್ಲಿ ಇರುವವರು = 16 ಹಾಸ್ಟೆಲ್ ಕ್ವಾರಂಟೈನ್’ನಲ್ಲಿ … Read more

ವರನಟನ ಹುಟ್ಟುಹಬ್ಬ ಆಚರಣೆಗೆ ದುಡ್ಡು ಕೊಡದಿದ್ದರೆ ದೂರು ಕೊಡ್ತೀನಿ ಅಂದವನೇ ಶಿವಮೊಗ್ಗ ಪೊಲೀಸರ ವಶಕ್ಕೆ

vinobanagara polic station and police jeep

ಶಿವಮೊಗ್ಗ ಲೈವ್.ಕಾಂ | SHIMOGA | 27 ಏಪ್ರಿಲ್ 2020 ಕರೋನ ಫಂಡ್‌ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಜನರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗ ಎಪಿಎಂಸಿಯಲ್ಲಿ ಈತ ಹಣ ವಸೂಲಿ ಮಾಡುತ್ತಿದ್ದ. ಈತನನ್ನು ಸಂತೋಷ್‌ ಎಂದು ಗುರುತಿಸಲಾಗಿದೆ. ಕೈಯಲ್ಲಿ ಫೈಲ್‌ ಹಿಡಿದು ಇವತ್ತು ಬೆಳಗ್ಗೆ ಎಪಿಎಂಸಿಗೆ ಆಗಮಿಸಿದ್ದ. ಕೆಲವರ ಬಳಿ ತಾನು ಪೊಲೀಸ್‌ ಎಂದು ಪರಿಚಯಿಸಿಕೊಂಡಿದ್ದ. ಇನ್ನೂ ಕೆಲವರ ಬಳಿ ತಾನೂ ಪತ್ರಕರ್ತ ಎಂದು ಪರಿಚಯ ಮಾಡಿಕೊಂಡಿದ್ದ. ಎಲ್ಲರಿಂದಲೂ ಕರೋನ ಫಂಡ್‌ ಎಂದು … Read more

ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಹಂದಿ ಹಿಡಿಯುವ ಕಾರ್ಯಾಚರಣೆ, ಇವತ್ತು ಎಲ್ಲಾಗಿದೆ ಗೊತ್ತಾ ಆಪರೇಷನ್?

270420 Operation Pig By Palike in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 27 ಏಪ್ರಿಲ್ 2020 ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ನಗರದ ಲ್ಲಿ ಮತ್ತೆ ಹಂದಿ ಹಿಡಿಯುವ ಕಾರ್ಯಾಚರಣೆ ಆರಂಭವಾಗಿದೆ. ಗೋಪಾಳದಲ್ಲಿ ಇವತ್ತು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಲಾಯಿತು. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್‌ ಭದ್ರತೆಯಲ್ಲಿ ಪಾಲಿಕೆ ಸಿಬ್ಬಂದಿಗಳು ಹಂದಿ ಹಿಡಿಯುವ ಕಾರ್ಯಾರಣೆ ನಡೆಸಿದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ ಐಡಿ | shivamoggalive@gmail.com

ಶಿವಮೊಗ್ಗದಲ್ಲಿ ರೈಲ್ವೆ ಸೇತುವೆ ರಿಪೇರಿ ಶುರು, ಏನೆಲ್ಲ ದುರಸ್ಥಿ ಆಗ್ತಿದೆ? ಹೇಗೆ ನಡೆಯುತ್ತಿದೆ ಕಾಮಗಾರಿ?

274020 Railway Bridge Repair Work 1

ಶಿವಮೊಗ್ಗ ಲೈವ್.ಕಾಂ | SHIMOGA | 27 ಏಪ್ರಿಲ್ 2020 ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರೈಲ್ವೆ ಸೇತುವೆಯ ದುರಸ್ಥಿ ಕಾರ್ಯ ಆರಂಭವಾಗಿದೆ. ರೈಲು ಸಂಚಾರ ಇಲ್ಲದಿರುವುದರಿಂದ ಕೆಲಸ ವೇಗ ಮತ್ತು ನಿರಂತರವಾಗಿ ನಡೆಯುತ್ತಿದೆ. ಬೆಳಗಿನ ಹೊತ್ತು ಈ ದುರಸ್ಥಿ ಕಾರ್ಯನ್ನು ನೋಡಲು, ತುಂಗಾ ನದಿ ಸೇತುವೆ ಮೇಲೆ ಜನರ ಗುಂಪು ಸೇರುತ್ತಿದೆ. ನದಿಯ ನಡುವೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಬಾಕ್ಸ್‌ ಬ್ರಿಡ್ಜ್‌ಗಳನ್ನು ತಾತ್ಕಾಲಿಕ ರಸ್ತೆಗೆ ಇಳಿಸಲಾಗಿದೆ. ಅಲ್ಲಿಂದ ಕ್ರೇನ್‌ ಮೂಲಕ ಬಾಕ್ಸ್‌ ಬ್ರಿಡ್ಜ್‌ ಗಳನ್ನು ಪಿಲ್ಲರ್‌ಗಳ … Read more