ಭದ್ರಾ ಜಲಾಶಯದ ಒಳ ಹರಿವು ಕುಸಿತ, ಗೇಟ್‌ ಮೂಲಕ ಎಷ್ಟು ನೀರು ಹೊರ ಬಿಡಲಾಗುತ್ತಿದೆ?

Bhadra-Dam-Water-Out-Flow

ಭದ್ರಾವತಿ: ಭದ್ರಾ ಜಲಾಶಯ (Dam Level) ಒಳ ಹರಿವು ತುಸು ತಗ್ಗಿದೆ. ಇವತ್ತು 9735 ಕ್ಯೂಸೆಕ್‌ ನೀರು ಒಳ ಹರಿವು ದಾಖಲಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಇದನ್ನೂ ಓದಿ » ಮಡಬೂರು ರಾಜೇಂದ್ರ ಶಿವಮೊಗ್ಗದಲ್ಲಿ ನಿಧನ, ಮಾಜಿ ಪ್ರಧಾನಿ, ಕೇಂದ್ರ ಸಚಿವರಿಂದ ಸಂತಾಪ ಜಲಾಶಯದ ಒಟ್ಟು ಹೊರ ಹರಿವು 3161 ಕ್ಯೂಸೆಕ್‌ ಇದೆ. ಈ ಪೈಕಿ ಕ್ರಸ್ಟ್‌ ಗೇಟ್‌ಗಳ ಮೂಲಕ 855 ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 176 … Read more

ಕುಬಟೂರು ಬಳಿ ಬೈಕುಗಳ ಡಿಕ್ಕಿ, ಶಿಕ್ಷಕಿಯ ಕಾಲಿಗೆ ಗಂಭೀರ ಗಾಯ, ಶಿವಮೊಗ್ಗದ ಆಸ್ಪತ್ರೆಗೆ ದಾಖಲು

ACCIDENT-NEWS-GENERAL-IMAGE.

ಸೊರಬ: ಶಾಲೆ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ಶಿಕ್ಷಕಿಗೆ (Teacher) ಎದುರಿನಿಂದ ಬೈಕ್‌ ಡಿಕ್ಕಿ ಹೊಡೆದಿದೆ. ಶಿಕ್ಷಕಿಯ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಿಕ್ಷಕಿ ರತ್ನಾ ಅವರು ಶಾಲೆ ಕರ್ತವ್ಯ ಮುಗಿಸಿಕೊಂಡು ಮಧ್ಯಾಹ್ನ ಸೊರಬ ತಾಲೂಕು ತಿಮ್ಮಾಪುರದ ಮನೆಗೆ ಹಿಂತಿರುಗುತ್ತಿದ್ದರು. ಕುಬಟೂರು ಸಮೀಪ ರತ್ನಾ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಎದುರಿನಿಂದ ಆಟೋ ಬರುತಿತ್ತು. ರಸ್ತೆಯ ಎಡ ಬದಿಯಲ್ಲಿ ಗುಂಡಿ ಇದ್ದಿದ್ದರಿಂದ ರತ್ನಾ ತಮ್ಮ ದ್ವಿಚಕ್ರ ವಾಹನವನ್ನು ರಸ್ತೆ ಎಡಬದಿಯಲ್ಲಿ ನಿಲ್ಲಿಸಿಕೊಂಡು, ಆಟೋ … Read more

ಗಾಜನೂರು ತುಂಗಾ ಜಲಾಶಯದ ಒಳ ಹರಿವು ಇಳಿಕೆ, ಇವತ್ತು ಎಷ್ಟಿದೆ?

tunga-dam-river.

ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ತುಂಗಾ ಜಲಾಶಯದ (Dam Level) ಒಳ ಹರಿವು ಪ್ರಮಾಣ ತಗ್ಗಿದೆ. ಇವತ್ತು ಡ್ಯಾಂಗೆ 20,198 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಇದನ್ನೂ ಓದಿ » ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿ ಬದಲು ಮತ್ತೊಬ್ಬ ಯುವಕ ಹಾಜರು, ಕೇಸ್‌ ದಾಖಲು, ಸಿಕ್ಕಿಬಿದ್ದಿದ್ದು ಹೇಗೆ? ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಪ್ರಸ್ತುತ ಗಾಜನೂರಿನ ತುಂಗಾ ಜಲಾಶಯದಿಂದ 17,953 ಕ್ಯೂಸೆಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಗರಿಷ್ಠ 3.24 ಟಿಎಂಸಿ … Read more

ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿ ಬದಲು ಮತ್ತೊಬ್ಬ ಯುವಕ ಹಾಜರು, ಕೇಸ್‌ ದಾಖಲು, ಸಿಕ್ಕಿಬಿದ್ದಿದ್ದು ಹೇಗೆ?

Shikaripura-Town-Police-Station

ಶಿಕಾರಿಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ 3ರಲ್ಲಿ (Exam) ಅಭ್ಯರ್ಥಿಯ ಬದಲು ಮತ್ತೊಬ್ಬ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. (ಅಪ್ರಾಪ್ತರ ಪ್ರಕರಣವಾದ್ದರಿಂದ ಹೆಸರು, ವಿಳಾಸ ಬಹಿರಂಗಪಡಿಸುವಂತಿಲ್ಲ). ಶಿಕಾರಿಪುರದ ಪರೀಕ್ಷಾ ಕೇಂದ್ರವೊಂದರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ 3ರ ವಿಜ್ಞಾನ ಪರೀಕ್ಷೆಗೆ ಒಬ್ಬ ವಿದ್ಯಾರ್ಥಿಯ ಬದಲು ಮತ್ತೊಬ್ಬ ಯುವಕ ಪರೀಕ್ಷೆಗೆ ಹಾಜರಾಗಿದ್ದ. ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪರೀಕ್ಷೆ ಪರಿಶೀಲನೆ ವೇಳೆ ಹಾಲ್‌ ಟಿಕೆಟ್‌ನಲ್ಲಿ ವಿದ್ಯಾರ್ಥಿಯ ಫೋಟೊದ ಮೇಲೆ ಇಂಕ್‌ ಹಾಕಲಾಗಿತ್ತು … Read more

ಮಡಬೂರು ರಾಜೇಂದ್ರ ಶಿವಮೊಗ್ಗದಲ್ಲಿ ನಿಧನ, ಮಾಜಿ ಪ್ರಧಾನಿ, ಕೇಂದ್ರ ಸಚಿವರಿಂದ ಸಂತಾಪ

HT-Rajendra-Madaburu

ಶಿವಮೊಗ್ಗ: ಚಿಕ್ಕಮಗಳೂರು JDS ಮುಖಂಡ ಹೆಚ್‌.ಟಿ.ರಾಜೇಂದ್ರ (72) ಹೃದಯಾಘಾತದಿಂದ ಶಿವಮೊಗ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜೇಂದ್ರ ಅವರು ಎನ್‌.ಆರ್‌.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಬೂರು ಗ್ರಾಮದವರು. ಭಾನುವಾರ ಸಂಜೆ ಅಸ್ವಸ್ಥರಾಗಿದ್ದ ಅವರನ್ನು ಎನ್.‌ಆರ್‌.ಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೃದಯಾಘಾತದಿಂದ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ರಾಜೇಂದ್ರ ಅವರಿಗೆ ಪತ್ನಿ ಪಲ್ಲವಿ, ಪುತ್ರ ಅನಿರುದ್ಧ ಇದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಜೈಲಿನ ಖೈದಿಯ … Read more

ತೂದೂರಿನ ಬಟ್ಟೆ ಅಂಗಡಿಗೆ ಕೆಂಪು ಕಾರಿನಲ್ಲಿ ಬಂದ ಗ್ರಾಹಕ, ಆತ ಹೋದ ಮೇಲೆ ಮಾಲೀಕನಿಗೆ ಕಾದಿತ್ತು ಆಘಾತ

Tooduru-name-board-at-Thirthahalli

ತೀರ್ಥಹಳ್ಳಿ: ತುರ್ತಾಗಿ ನಗದು ಬೇಕಿದ್ದು ಗೂಗಲ್‌ ಪೇ (Google Pay) ಮಾಡುವುದಾಗಿ ಅಂಗಡಿ ಮಾಲೀಕನಿಗೆ ನಂಬಿಸಿ ವಂಚಿಸಲಾಗಿದೆ. ತೀರ್ಥಹಳ್ಳಿ ತಾಲೂಕು ತೂದುರಿನ ಬಟ್ಟೆ ಅಂಗಡಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗದ ವ್ಯಕ್ತಿಗೆ ಬೆಂಗಳೂರಿನ ಫೈನಾನ್ಸ್‌ ಸಂಸ್ಥೆಯಿಂದ ಬಂತು ಫೋನ್‌, ಆಮೇಲೆ ಕಾದಿತ್ತು ಬಿಗ್‌ ಶಾಕ್‌ ಜೂನ್‌ 27ರಂದು ಮಧ್ಯಾಹ್ನ ಕೆಂಪು ಕಾರಿನಲ್ಲಿ ಬಂದ ಗ್ರಾಹಕನೊಬ್ಬ ಬಟ್ಟೆ ಅಂಗಡಿಯಲ್ಲಿ ₹1100 ಬೆಲೆಯ ಒಳ ಉಡುಪು ಖರೀದಿಸಿದ್ದ. ತನಗೆ ₹20 ಸಾವಿರ ನಗದು ಅವಶ್ಯಕತೆ ಇದೆ. ಒಳ ಉಡುಪಿನ … Read more

ದಿನ ಭವಿಷ್ಯ | 14 ಜುಲೈ 2025| ಇವತ್ತು ಈ ರಾಶಿಯವರಿಗೆ ಹಣಕಾಸು ಲಾಭ, ಕೆಲಸದಲ್ಲಿ ಪ್ರಗತಿ

DINA-BHAVISHYA

DINA BHAVISHYA ಮೇಷ ರಾಶಿ: ಇವತ್ತು ಕೆಲಸದಲ್ಲಿ ಪ್ರಗತಿ. ನೂತನ ಯೋಜನೆಗಳು ಪ್ರಾರಂಭಿಸಲು ಉತ್ತಮ ದಿನ. ಆರ್ಥಿಕವಾಗಿ ಉತ್ತಮ. ಕುಟುಂಬದೊಂದಿಗೆ ಸಂತೋಷದ ಸಮಯ. ಆರೋಗ್ಯದ ಬಗ್ಗೆ ಗಮನವಿರಲಿ. ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 1 ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಎಚ್ಚರ. ಅನಗತ್ಯ ಖರ್ಚು ತಪ್ಪಿಸಿ. ಕೆಲಸದಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಆರೋಗ್ಯದ ಬಗ್ಗೆ ಗಮನ ನೀಡಿ. ಶುಭ ಬಣ್ಣ: ಹಸಿರು, ಶುಭ ಸಂಖ್ಯೆ: 6 ಮಿಥುನ ರಾಶಿ: ನಿಮ್ಮ ಮಾತಿನ ಮೇಲೆ ಎಚ್ಚರ ಇರಲಿ. … Read more

ದಿನ ಪಂಚಾಂಗ | 14 ಜುಲೈ 205 | ಇವತ್ತು ಸಂಕಷ್ಟ ಚತುರ್ಥಿ, ಯಮಗಂಡ, ರಾಹುಕಾಲ ಯಾವಾಗಿದೆ?

Indina-Panchanga-today Panchanga

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ದಿನ ಪಂಚಾಂಗ (Panchanga) ವಾರ : ಸೋಮವಾರ, 14 ಜುಲೈ 2025 – ಸಂಕಷ್ಟ ಚತುರ್ಥಿ ಸೂರ್ಯೋದಯ : 5.33 am ಸೂರ್ಯಾಸ್ತ : 7.21 pm ನಕ್ಷತ್ರ : ಧನಿಷ್ಠ ಇದನ್ನೂ ಓದಿ » ಶಿವಮೊಗ್ಗದ ವ್ಯಕ್ತಿಗೆ ಬೆಂಗಳೂರಿನ ಫೈನಾನ್ಸ್‌ ಸಂಸ್ಥೆಯಿಂದ ಬಂತು ಫೋನ್‌, ಆಮೇಲೆ ಕಾದಿತ್ತು ಬಿಗ್‌ ಶಾಕ್‌ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.11 ರಿಂದ 4.52ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 4.32 ರಿಂದ … Read more

ಶುಭೋದಯ ಶಿವಮೊಗ್ಗ | 14 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇಂದಿನ ಸುಭಾಷಿತ: ದೊಡ್ಡ ಕನಸುಗಳು ದೊಡ್ಡ ಸಾಧನೆಗಳಿಗೆ ನಾಂದಿ. ಡಾ. ಎ.ಪಿ.ಜೆ.ಅಬ್ದುಲ್‌ ಕಲಾಂ ಅವರು ಭಾರತ ಮಿಸೈಲ್‌ ಮ್ಯಾನ್‌ ಎಂದೇ ಖ್ಯಾತರಾಗಿದ್ದಾರೆ. ಭಾರತವನ್ನು 2020ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಕನಸು ಹೊಂದಿದ್ದರು. ಅವರ ಈ ದೂರದೃಷ್ಟಿ ಮತ್ತು ಅದನ್ನು ನನಸಾಗಿಸಲು ಮಾಡಿದ ಪ್ರಯತ್ನಗಳು ಈಗ ಇತಿಹಾಸ. ಇದರ ಫಲವಾಗಿ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ನಕ್ಷೆಯಲ್ಲಿ ಹೆಗ್ಗುರುತು ಮೂಡಿಸಿದೆ. ಅವರ … Read more

ಶಿವಮೊಗ್ಗದ ವ್ಯಕ್ತಿಗೆ ಬೆಂಗಳೂರಿನ ಫೈನಾನ್ಸ್‌ ಸಂಸ್ಥೆಯಿಂದ ಬಂತು ಫೋನ್‌, ಆಮೇಲೆ ಕಾದಿತ್ತು ಬಿಗ್‌ ಶಾಕ್‌

Police-Van-Jeep-at-Shimoga-Nehru-Road

ಶಿವಮೊಗ್ಗ: ಕಾರ್ಖಾನೆಯೊಂದರ ನೌಕರರೊಬ್ಬರಿಗೆ ಫೈನಾನ್ಸ್‌ (Finance) ಸಂಸ್ಥೆಯ ಹೆಸರಿನಲ್ಲಿ ಕರೆ ಮಾಡಿ, ಸಾಲ ನೀಡುವುದಾಗಿ ನಂಬಿಸಿ, ಬಳಿಕ ನಾನಾ ಕಾರಣಕ್ಕೆ ಹಣ ಪಾವತಿಸಿಕೊಂಡು ವಂಚಿಸಲಾಗಿದೆ. ಸಾಲ ಸಿಗುವ ಭರವಸೆಯಲ್ಲಿ ಕಾರ್ಖಾನೆ ನೌಕರ ₹4.13 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಕಾರ್ಖಾನೆ ನೌಕರರೊಬ್ಬರಿಗೆ (ಹೆಸರು ಗೌಪ್ಯ) ಫೈನಾನ್ಸ್‌ ಸಂಸ್ಥೆಯೊಂದರ ಬೆಂಗಳೂರು ಶಾಖೆಯ ಪ್ರತಿನಿಧಿ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ಸಾಲದ ಅಗತ್ಯವಿದ್ದರೆ ಒದಗಿಸುವುದಾಗಿ ನಂಬಿಸಿದ್ದರು. ತುರ್ತು ಹಣದ ಅವಶ್ಯಕತೆ ಇದ್ದಿದ್ದರಿಂದ ನೌಕರ ಸಾಲ ಬೇಕು ಎಂದು ಒಪ್ಪಿಕೊಂಡಿದ್ದರು. ಇದನ್ನೂ … Read more