ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ, 25 ಬಾಕ್ಸ್ ಮದ್ಯ ವಶಕ್ಕೆ, ಸೀಜ್ ಆಗಿದ್ದೆಲ್ಲಿ ಗೊತ್ತಾ?

050420 Liquor Raid in Soraba 1

ಶಿವಮೊಗ್ಗ ಲೈವ್.ಕಾಂ | SHIMOGA | 5 ಏಪ್ರಿಲ್ 2020 ಲಾಕ್’ಡೌನ್ ಸಂದರ್ಭ ವೈನ್ ಶಾಪ್ ಒಂದರಿಂದ ಮದ್ಯವನ್ನು ಬೇರೆಡೆ ಕೊಂಡೊಯ್ಯುತ್ತಿದ್ದ ವ್ಯಕ್ತಿ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಕಾರು, ಬಾಕ್ಸ್’ಗಟ್ಟಲೆ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಘಟನೆಯ ಸಂಭವಿಸಿದೆ. ಇಲ್ಲಿನ ವೈನ್ ಶಾಪ್ ಒಂದರಿಂದ ವ್ಯಕ್ತಿಯೊಬ್ಬರು 25 ಬಾಕ್ಸ್ ಮದ್ಯವನ್ನು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು, ಕಾರು ಮತ್ತು ಮದ್ಯವನ್ನು ಸೀಜ್ ಮಾಡಿದ್ದಾರೆ. ‘ದೇವರಾಜ್ … Read more

SAGARA | ‘ಸಾಗರದಲ್ಲಿ ಸಂಶೋಧನಾ ಕೇಂದ್ರ ಸೂಕ್ತ, ಜಾತ್ರೆ ಬಳಿಕ ಸೊರಬ ರಸ್ತೆ ಅಗಲೀಕರಣ’

ಶಿವಮೊಗ್ಗ ಲೈವ್.ಕಾಂ | SAGARA | 08 ಡಿಸೆಂಬರ್ 2019 ಮಂಗನ ಕಾಯಿಲೆ ಸಂಶೋಧನೆಗೆ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಸಂಶೋಧನ ಕೇಂದ್ರವನ್ನು ಸಾಗರದಲ್ಲೇ ಸ್ಥಾಪಿಸುವುದು ಸೂಕ್ತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಸಾಗರ ಶಾಸಕ ಹಾಲಪ್ಪ ಅವರ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಸಾಗರ ತಾಲೂಕಿನಲ್ಲಿ ಕೆಎಫ್’ಡಿಯಿಂದ ಜನರು ತತ್ತರಿಸಿದ್ದಾರೆ. ಹಾಗಾಗಿ ಇಲ್ಲಿಯೇ ಸಂಶೋಧನ ಕೇಂದ್ರ ತೆರೆಯುವುದು ಸೂಕ್ತ ಎಂದರು. ಜಾತ್ರೆ ಬಳಿಕ ರಸ್ತೆ ಅಗಲೀಕರಣ ಸೊರಬ … Read more

ಹೊಸ ಬೈಕ್ ಖರೀದಿಗೆ ತಾಯಿ ಹಣ ಕೊಡಲಿಲ್ಲ ಅಂತಾ ನೇಣು ಬಿಗಿದುಕೊಂಡು ಆತ್ಮಹತ್ಯೆ

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಸೊರಬ | 20 ಸೆಪ್ಟೆಂಬರ್ 2019 ಹೊಸ ಬೈಕ್ ಖರೀದಿಗೆ ತಾಯಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಜೇಂದ್ರ (19) ಆತ್ಮಹತ್ಯೆ ಮಾಡಿಕೊಂಡಾತ. ಹೊಸ ಬೈಕ್ ಖರೀದಿಗೆ ಗಜೇಂದ್ರ ತನ್ನ ತಾಯಿ ಬಳಿ ಹಣ ಕೇಳಿದ್ದ. ಆದರೆ ತಾಯಿ ಹಣವಿಲ್ಲ ಎಂದಿದ್ದರು. ಅಲ್ಲದೆ ಸ್ವಲ್ಪ ದಿನದ ಬಳಿಕ ಹಣ ಹೊಂದಿಸಿ ಕೊಡುವುದಾಗಿ ತಿಳಿಸಿದ್ದರು. ಇದರಿಂದ ಮನನೊಂದು ಮನೆ ಹಿತ್ತಲಿನಲ್ಲಿ ಗಜೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನವಟ್ಟಿ ಸಮೀಪದ ಜಾವಳ್ಳಿ … Read more

ಸೊರಬದಲ್ಲಿ ಯುವತಿ ಕೊಲೆ ಪ್ರಕರಣ, ಎರಡೇ ದಿನದಲ್ಲಿ ಆರೋಪಿ ಅರೆಸ್ಟ್, ಹತ್ಯೆಗೆ ಕಾರಣವೇನು ಗೊತ್ತಾ?

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಸೊರಬ | 17 ಜುಲೈ 2019 ಕಾನಕೇರಿ ಬಡಾವಣೆಯಲ್ಲಿ ಯುವತಿ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸೊರಬ ಪೊಲೀಸರು ಎರಡೇ ದಿನದಲ್ಲಿ ಭೇದಿಸಿದ್ದಾರೆ. ಈ ಪ್ರಕರಣ ಸಂಬಂಧ, ಯುವಕನೊಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ರಮೇಶ್ (25) ಬಂಧಿತ ಯುವಕ. ಜು.15ರಂದು ಅಶ್ವಿನಿ ಕಲ್ಲಹಳ್ಳಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ತನಿಖೆ ಆರಂಭಿಸಿದ ಸೊರಬ ಪೊಲೀಸರಿಗೆ ಪ್ರಿಯಕರನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಮೊಬೈಲ್ ನೆಟ್’ವರ್ಕ್’ನಿಂದ ಸಿಕ್ತು ಸುಳಿವು ಅಶ್ವಿನಿ ಮತ್ತು ರಮೇಶ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು. ಅಶ್ವಿನಿ ಅನುಮಾನಾಸ್ಪದವಾಗಿ … Read more

ಹಾಸ್ಟೆಲ್’ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಯುವತಿ ಅನುಮಾನಾಸ್ಪದ ಸಾವು, ಕೊಲೆ ಶಂಕೆ

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಸೊರಬ | 15 ಜುಲೈ 2019 ಸೊರಬ ಪಟ್ಟಣದ ಕಾನಕೇರಿಯಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಈ ಯುವತಿ, ಹಾಸ್ಟೆಲ್ ಒಂದರಲ್ಲಿ ಸುಮಾರು ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು. ಅಶ್ವಿನಿ ಕಲ್ಲಹಳ್ಳಿ (21) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವತಿ. ಇವತ್ತು ಬೆಳಗ್ಗೆ ಕಾನಕೇರಿಯಲ್ಲಿ, ಅಶ್ವಿನಿ ಮೃತದೇಹ ಪತ್ತೆಯಾಗಿದೆ. ಈಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮಹಳ್ಳಿಯ ಅಶ್ವಿನಿ ಕಲ್ಲಹಳ್ಳಿ, ಒಂದೂವರೆ ವರ್ಷದಿಂದ ಶ್ರೀ ರಂಗನಾಥ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿರುವ ಹಿಂದುಳಿದ ವರ್ಗಗಳ … Read more

ಸೊರಬದಲ್ಲೂ ಶರಾವತಿ ಹೋರಾಟ ಜೋರು, ಬೆಳಗ್ಗೆಯಿಂದ ಅಂಗಡಿಗಳು ಬಂದ್, ವಾಹನ ಸಂಚಾರ ಸ್ಥಗಿತ

ಶಿವಮೊಗ್ಗ ಲೈವ್.ಕಾಂ | ಸೊರಬ | 10 ಜುಲೈ 2019 ಶರಾವತಿ ನದಿಗಾಗಿ ನಡೆದ ಹೋರಾಟಕ್ಕೆ ಸೊರಬ ತಾಲೂಕಿನಲ್ಲೂ ಭಾರೀ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಸೊರಬ ಪಟ್ಟಣ ಬಂದ್ ಆಗಿತ್ತು. ಮೆಡಿಕಲ್ ಶಾಪ್, ಅಸ್ಪತ್ರೆ ಹೊರತು ಮತ್ತಿನ್ಯಾವ ಅಂಗಡಿಗಳು ಸೊರಬದಲ್ಲಿ ಬಾಗಿಲು ತೆಗೆದಿರಲಿಲ್ಲ. ವ್ಯಾಪಾರ ವಹಿವಾಟು ಸ್ಥಬ್ಧವಾಗಿತ್ತು. ಖಾಸಗಿ ಬಸ್’ಗಳು ರಸ್ತೆಗಿಳಿದಿರಲಿಲ್ಲ. ವಾಹನ ಸಂಚಾರವೂ ಕಡಿಮೆಯಾಗಿತ್ತು. ಇನ್ನು, ಸೊರಬದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣದ ಸರ್ಕಲ್’ವರೆಗೆ ಬಂದು ಅಲ್ಲಿಂದ ಪುನಃ ಶ್ರೀ … Read more

BREAKING NEWS | ಸೊರಬ ಪುರಸಭೆ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ತೆರವು, ಎಲೆಕ್ಷನ್ ಡೇಟ್ ಫಿಕ್ಸ್

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | 13 ಮೇ 2019 ಸೊರಬ ಪಟ್ಟಣ ಪಂಚಾಯಿತಿ 14 ವಾರ್ಡ್’ಗಳ ಚುನಾವಣೆಗೆ ತಂದಿದ್ದ ತಡೆಯಾಜ್ಞೆ ವಜಾಗೊಂಡಿದ್ದು ಮೇ 14ರಿಂದ ಚುನಾವಣಾ ಪ್ರಕ್ರಿಯೆ ಶುರುವಾಗಲಿದೆ. ಮೇ 8ರಂದು ವಾರ್ಡ್ ವರ್ಗೀಕರಣ ಸಂಬಂಧ ಚುನಾವಣಾ ಪ್ರಕ್ರಿಯೆಗೆ ನಾಲ್ಕು ವಾರಗಳ ಕಾಲ ಹೈಕೋರ್ಟ್ ತಡೆ ನೀಡಿತ್ತು. ಮೇ 13ರಂದು ಹೈಕೋರ್ಟ್ ಈ ಅರ್ಜಿಗಳನ್ನು ಮರು ಪರಿಶೀಲಿಸಿ ನೆಲಮಂಗಲ ಪುರಸಭೆ ಹಾಗೂ ಸೊರಬ ಪಟ್ಟಣ ಪಂಚಾಯಿತಿ ಚುನಾವಣೆಗೆ ನೀಡಿದ್ದ ತಡೆಯಾಜ್ಞೆಯನ್ನು ವಜಾಗೊಳಿಸಿದೆ. ಮೇ14ರಿಂದ ಸೊರಬ ಪಟ್ಟಣ ಪಂಚಾಯಿತಿಗೆ ಅಧಿಸೂಚನೆ … Read more

BREAKING NEWS | ಸೊರಬ ಪಟ್ಟಣ ಪಂಚಾಯಿತಿ ಚುನಾವಣೆಗೆ ತಡೆ, ಪ್ರಕ್ರಿಯೆ ನಾಲ್ಕು ವಾರ ಮುಂದಕ್ಕೆ

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | 9 ಮೇ 2019 ಸೊರಬ ಪಟ್ಟಣ ಪಂಚಾಯಿತಿಗೆ, ಮೇ 29ಕ್ಕೆ ನಿಗದಿಯಾಗಿದ್ದ ಚುನಾವಣೆಗೆ, ಹೈಕೋರ್ಟ್ ತಡೆ ನೀಡಿದೆ. ನಾಲ್ಕು ವಾರ ಚುನಾವಣೆಯನ್ನು ಮುಂದೂಡುವಂತೆ, ನ್ಯಾಯಾಲಯ ಆದೇಶ ನೀಡಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಮೇ 8ರಂದು ನ್ಯಾಯಾಲಯ ಆದೇಶ ನೀಡಿದ್ದು, ಅದರಂತೆ ಇವತ್ತು ರಾಜ್ಯ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಸೂಚನೆ ನೀಡಿದೆ. ಪಟ್ಟಣ ಪಂಚಾಯಿತಿ ಚುನಾವಣೆ ಸಂಬಂಧ, ಹೈಕೋರ್ಟ್’ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ಇದರ … Read more

‘ನಾನು ಪ್ರತಿದಿನ ಕಣ್ಣೀರು ಹಾಕುತ್ತೇನೆ, ಆದರೆ ಸುಮ್ ಸುಮ್ನೆ ಕಣ್ಣೀರು ಹಾಕೋದಿಲ್ಲ’

ಶಿವಮೊಗ್ಗ ಲೈವ್.ಕಾಂ | 17 ಏಪ್ರಿಲ್ 2019 ನಾನು ಭಾವುಕ ಜೀವಿ. ಪ್ರತಿದಿನ ಕಣ್ಣೀರು ಹಾಕುತ್ತೇನೆ. ಆದರೆ ಸುಮ್ ಸುಮ್ನೆ ಕಣ್ಣೀರು ಹಾಕುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ ಅಂತಾ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾವು ಕಣ್ಣೀರು ಹಾಕಲು ಕಾರಣವೇನು ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಅವರ ಹೃದಯದಲ್ಲಿ ಭಾವುಕತೆಯಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತದೆ … Read more

ಸಚಿವ ರೇವಣ್ಣ ಅವರ ಹಣ ನಿಮ್ಮಲ್ಲಿದೆ, ಮನೆ ಮೇಲೆ ರೇಡ್ ಮಾಡ್ತೀವಿ ಅಂತಾ ಅಧಿಕಾರಿಗೆ ಬೆದರಿಕೆ, ಸೊರಬದಲ್ಲಿ ಕೇಸ್

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | 04 ಏಪ್ರಿಲ್ 2019 ಎಸಿಬಿ ಡಿವೈಎಸ್ಪಿ ಎಂದು ಹೇಳಿ ಸೊರಬ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗೆ ಬ್ಲ್ಯಾಕ್’ಮೇಲ್ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ. ಮಂಜುನಾಥ್ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿ ವಿರುದ್ಧ ಕೆ.ಸಿ.ದೇವರಾಜೇಗೌಡ, ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಆಪ್ತರಾದ ನಿಮ್ಮಲ್ಲಿ ಅವರ ಹಣ ಇಡಲಾಗಿದೆ. ಈ ಕುರಿತು ಚರ್ಚಿಸಬೇಕಿದೆ. ಕೂಡಲೇ ವೈಯಕ್ತಿಕವಾಗಿ ನನಗೆ ಭೇಟಿ ನೀಡಿ. ಇಲ್ಲವಾದರೆ, ಹಾಸನದಲ್ಲಿರುವ ನಿಮ್ಮ ಮನೆಯ ಮೇಲೆ … Read more