ದೇವಸ್ಥಾನದಲ್ಲಿ ಅಪ್ರಾಪ್ತೆಯ ಮದುವೆ, 8 ಮಂದಿ ವಿರುದ್ಧ ಕೇಸ್, ಆರೋಪಿಗಳು ನಾಪತ್ತೆ

HIVAMOGGA-NEWS- map

SHIVAMOGGA LIVE NEWS | SHIMOGA | 28 ಜೂನ್ 2022 ದೇವಸ್ಥಾನ ಒಂದರಲ್ಲಿ ಅಪ್ರಾಪ್ತೆಯೊಬ್ಬಳಿಗೆ ವಿವಾಹ ಮಾಡಿಸಲಾಗಿದೆ. ದೂರದ ಸಂಬಂಧಿಯೊಬ್ಬರ ಜೊತೆಗೆ ವಿವಾಹವಾಗಿದೆ (CHILD MARRIAGE). ಈಗ ಬಾಲಕಿಯನ್ನು ರಕ್ಷಣೆ ಮಾಡಿ ಬಾಲಕಿಯರ ಬಾಲ ಮಂದಿರದಲ್ಲಿ ಇರಿಸಲಾಗಿದೆ. ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ದೇವಸ್ಥಾನದಲ್ಲಿ ಬಾಲಕಿಗೆ ವಿವಾಹ (CHILD MARRIAGE) ಮಾಡಿಸಲಾಗಿತ್ತು. ಚಿಕ್ಕಮಗಳೂರಿನ ದೂರದ ಸಂಬಂಧಿಯೊಬ್ಬರ ಜೊತೆಗೆ ಬಾಲಕಿ ಮದುವೆಯಾಗಿದ್ದಳು. 17 ವರ್ಷದ ಬಾಲಕಿಗೆ ವಿವಾಹ ಮಾಡಿಸಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. … Read more

ಶಿವಮೊಗ್ಗ ಜಿಲ್ಲೆಯ ಗುಡಿ, ಚರ್ಚು, ಮಸೀದಿಗಳ ಮೈಕುಗಳ ಮೇಲೆ ಪೊಲೀಸ್ ನಿಗಾ, ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ?

230622 Mike at Masjid in Shimoga city

SHIVAMOGGA LIVE NEWS | SHIMOGA | 23 ಜೂನ್ 2022 ನ್ಯಾಯಾಲಯದ ಸೂಚನೆ ಬೆನ್ನಿಗೆ ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ (MIKE) ಬಳಕ ಬಗ್ಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಧಾರ್ಮಿಕ ಕೇಂದ್ರಗಳಲ್ಲಿ ಮೈಕ್’ಗಳಿಗೆ ಸೌಂಡ್ ಗವರ್ನರ್ ಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ರಾತ್ರಿ ವೇಳೆ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆ ಮಾಡದಂತೆ ನಿಷೇಧ ಮಾಡಲಾಗಿದೆ. ಈಚೆಗೆ ದೇಶಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆ ಸಂಬಂಧ ವಿವಾದ ಸೃಷ್ಟಿಯಾಗಿತ್ತು. ಅಲ್ಲದೆ ಮೈಕ್ ಬಳಕೆ … Read more

ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸುಪ್ರೀಂಕೋರ್ಟ್ ನ್ಯಾಯಾಧೀಶರು

Supreme-Court-Visit-Sigandur-Temple

SHIVAMOGGA LIVE NEWS | SAGARA | 21 ಜೂನ್ 2022 ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನಾಗರತ್ನ ಅವರು ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ (SIGANDURU TEMPLE) ಕುಟುಂಬ ಸಹಿತ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಸೋಮವಾರ ಸಿಗಂದೂರು ಶ್ರೀ ಚೌಡೇಶ್ವರಿ ದೇವ್ಥಾನಕ್ಕೆ ಭೇಟಿ ನೀಡಿದ್ದ ನ್ಯಾ. ನಾಗರತ್ನ ಅವರು ದೇವಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಇನ್ನು, ಶ್ರೀ ಚೌಡೇಶ್ವರಿ ದೇವಸ್ಥಾನದ ವತಿಯಿಂದ ನ್ಯಾ.ನಗರತ್ನ ಮತ್ತು ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು. ಕ್ಷೇತ್ರದ ಧರ್ಮದರ್ಶಿ ಡಾ. ಎಸ್.ರಾಮಪ್ಪ, ಉಪ ವಿಭಾಗಾಧಿಕಾರಿ … Read more

ಮಾರಿಕಾಂಬ ದೇವಸ್ಥಾನ ವ್ಯವಸ್ಥಾಪನ ಸಮಿತಿ ವಿರುದ್ಧ ಅಹೋರಾತ್ರಿ ಧರಣಿಗೆ ನಿರ್ಧಾರ, ಕಾರಣವೇನು?

sagara graphics

SHIVAMOGGA LIVE NEWS | SAGARA| 15 ಜೂನ್ 2022 ಸಾಗರದ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಸ್ಥಾನ ವ್ಯವಸ್ಥಾಪಕ ಸಮಿತಿ ವಿರುದ್ಧ ಆಹೋರಾತ್ರಿ ಧರಣಿ ನಡೆಸಲು ಮಾರಿಕಾಂಬಾ ಹಿತರಕ್ಷಣಾ ಸಮಿತಿ ನಿರ್ಧರಿಸಲಾಗಿದೆ. TEMPLE ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಡಿ.ಆನಂದ್ ಅವರು, ಜೂ 20ರಂದು ಮಾರಿಕಾಂಬ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಅವರ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ. ಜೂ.21ರಂದು ದೇವಸ್ಥಾನದ ಮುಂಭಾಗ ಧರಣಿ ನಡೆಯಲಿದೆ ಎಂದು ತಿಳಿಸಿದರು. ಸಮಿತಿಯ ಆಗ್ರಹ ಏನು? ಹಾಲಿ … Read more

ಹೊಸನಗರ ಕಾರಣಗಿರಿ ಗಣಪತಿ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ, ಯಾರೆಲ್ಲ ಇದ್ದಾರೆ?

Karanagiri-Ganapathi-Temple-Hosanagara

SHIVAMOGGA LIVE NEWS | HOSANAGARA | 14 ಜೂನ್ 2022 ಹೊಸನಗರ ಸಮೀಪದ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಎನ್.ಡಿ.ನಾಗೇಂದ್ರ ರಾವ್ ಆಯ್ಕೆಯಾಗಿದ್ದಾರೆ. ಜಿಲ್ಲಾಧಿಕಾರಿ ಅವರ ಆದೇಶದಂತೆ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಕೆ.ಎನ್.ಶಂಕರನಾರಾಯಣ ಕಣಿವೆಬಾಗಿಲು, ಎಸ್.ಎನ್.ಗುರುರಾಜ್ ಸಂಪೆಮನೆ, ಕೆ.ಪಿ.ಕುಮಾರ ಕೆರೆಹೊಂಡ, ಸಾಂಬಶಿವ ಹೆದ್ಲಿ, ಬಿ.ರಾಘವೇಂದ್ರ ಹೆದ್ಲಿ, ಮಮತಾ ವೀರಪ್ಪ ಕಾರಗಡಿ, ಶೈಲಜಾ ಗಂಗಾಧರ ಕುಕ್ಕೋಡು ಅಗಸರಮನೆ, ಹೆಚ್.ಜಿ.ರವಿ ಹನಿಯ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ – ಮೈದೂಳಲು ಗ್ರಾಮದಲ್ಲಿ ಹಲವರಿಗೆ ವಾಂತಿ, ಭೇದಿ, … Read more

24 ವರ್ಷದ ಬಳಿಕ ಜಾತ್ರೆ, ಸಿಡಿ ಉತ್ಸವ ಕಣ್ತುಂಬಿಕೊಳ್ಳಲು ಸಾವಿರ ಸಾವಿರ ಭಕ್ತರು

Hirimavuradamma-Temple-Jathre-in-Anaveri

SHIVAMOGGA LIVE NEWS | HOLEHONNUR | 9 ಜೂನ್ 2022 ಆನವೇರಿ ಗ್ರಾಮದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ಜಾತ್ರೆ ಅಂಗವಾಗಿ ಸಿಡಿ ಉತ್ಸವ ನಡೆಸಲಾಯಿತು. ದೊಡ್ಡ ಸಂಖ್ಯೆಯ ಭಕ್ತರು ಸಿಡಿ ಉತ್ಸವನ್ನು ಕಣ್ತುಂಬಿಕೊಂಡರು. 24 ವರ್ಷಗಳ ಬಳಿಕ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ನಡೆಯುತ್ತಿದೆ. ಹಾಗಾಗಿ ವೈಭವದಿಂದ ಜಾತ್ರೆ ನೆರವೇರಿಸಲಾಗುತ್ತಿದೆ. ಸುತ್ತಮುತ್ತಲ ಗ್ರಾಮದ ಜನರು, ನೆರ ಜಿಲ್ಲೆಯ ಭಕ್ತರು ಕೂಡ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ. ಕಟ್ಟುನಿಟ್ಟು ಮಡಿ, ಸಿಡಿ … Read more

ಆನವೇರಿಯಲ್ಲಿ ಜಾತ್ರೆ ಹಿನ್ನೆಲೆ, ಮೆಸ್ಕಾಂ ವತಿಯಿಂದ ಜನರಿಗೆ ಎಚ್ಚರಿಕೆ, ಕಾರಣವೇನು?

Bhadravathi News Graphics

SHIVAMOGGA LIVE NEWS | ELECTRICITY | 4 ಜೂನ್ 2022 ಆನವೇರಿ ಗ್ರಾಮದಲ್ಲಿ ಜೂನ್ 5 ರಿಂದ ಜೂನ್ 9ರವರೆಗೆ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ವತಿಯಿಂದ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ. ಮೆಸ್ಕಾಂ ಎಚ್ಚರಿಕೆ ಏನು? ಈ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ಔತಣ ಕೂಟ ಏರ್ಪಡಿಸುವವರು, ವಿದ್ಯುತ್ ಲೈನ್, ಕಂಬಗಳಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸುವವರು, ಜಾತ್ರೆಗೆ ಮಳಿಗೆ ಹಾಕುವ ವರ್ತಕರು, ಮನೋರಂಜನಾ ಆಟಿಕೆಯವರು, ಸರ್ಕಸ್, ನಾಟಕ ಕಂಪನಿಯವರು ಇತ್ಯಾದಿಯವರು ಮೆಸ್ಕಾಂನ … Read more

ಹೊಸನಗರ ಶ್ರೀ ಚಂದ್ರಮೌಳೇಶ್ವರ ದೇಗುಲದ ಧ್ವಜಸ್ತಂಭ ಪ್ರತಿಷ್ಠಾಪನೆ, ಧರ್ಮ ಸಭೆ

Ramachandrapura-Mutt-Swamiji-in-Hosanagara-temple

SHIVAMOGGA LIVE NEWS | SWAMIJI | 4 ಜೂನ್ 2022 ದೈವ ಸಾನ್ನಿಧ್ಯಕ್ಕೆ ತೊಂದರೆ ಆಗಿದ್ದ ಹಲವು ಕಡೆ ಪುನರ್ ಪ್ರತಿಷ್ಠಾಪನಾ ಕಾರ್ಯಕಗಳು ನಡೆಯುತ್ತಿವೆ. ಸರ್ಕಾರಗಳು ಕೂಡ ಇದಕ್ಕೆ ಬೆಂಬಲವಾಗಿ ನಿಂತಿರುವುದು ಸಂತೋಷದ ವಿಚಾರ ಎಂದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಹೇಳಿದರು. ಹೊಸನಗರದ ಶ್ರೀ ಚಂದ್ರಮೌಳೇಶ್ವರ  ದೇವಾಲಯದಲ್ಲಿ ದೇವರ ಧ್ವಜಸ್ತಂಭ ಪ್ರತಿಷ್ಠಾ ಅಂಗವಾಗಿ ಧರ್ಮ ಸಭೆ ನಡೆಸಲಾಯಿತು. ಇದರ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ರಾಘವೇಶ್ವರ ಭಾರತೀ … Read more

24 ವರ್ಷದ ಬಳಿಕ ಜಾತ್ರೆ, ಸಿದ್ಧತೆ ಕುರಿತು ಮಹತ್ವದ ಸಭೆ

Hiri-Mavuradamma-Temple-Jathre-Meeting-at-Anaveri

SHIVAMOGGA LIVE NEWS | TEMPLE | 27 ಮೇ 2022 24 ವರ್ಷದ ಬಳಿಕ ನಡೆಯುತ್ತಿರುವ ಹಿರಿ ಮಾವುರದಮ್ಮ ದೇವಿ ಸಿಡಿ ಉತ್ಸವ ಮತ್ತು ಜಾತ್ರೆ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು. ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಅವರು ನೇತೃತ್ವದಲ್ಲಿ ಸಭೆ ನಡೆಯಿತು. ಆನವೇರಿಯಲ್ಲಿ ಹಿರಿ ಮಾವುರದಮ್ಮ ದೇವಿ ಸಿಡಿ ಉತ್ಸವ ಮತ್ತು ಜಾತ್ರೆ ನಡೆಯಲಿದೆ. ಲಕ್ಷಾಂತರ ಸಂಖ್ಯೆಯ ಭಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾತ್ರೆಯನ್ನು ಯಶಸ್ವಿಯಾಗಿ ನಡೆಸಬೇಕು ಎಂಬ ಕುರಿತು ಸಭೆಯಲ್ಲಿ … Read more

ಚಂದ್ರಗುತ್ತಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ, ಎರಡೆ ತಿಂಗಳಲ್ಲಿ ಗರಿಷ್ಠ ಮೊತ್ತದ ಕಾಣಿಕೆ ಸಂಗ್ರಹ

Chandragutti-Renukamba-Temple

SHIVAMOGGA LIVE NEWS | TEMPLE | 26 ಮೇ 2022 ಸೊರಬ ತಾಲೂಕು ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. 22.71 ಲಕ್ಷ ರೂ. ಕಾಣಿಕೆ ಹಣ ಸಂಗ್ರಹವಾಗಿದೆ. ತಾಲೂಕು ದಂಡಾಧಿಕಾರಿ ಮಂಜುಳಾ ಹೆಗಡಾಳ್ ಅವರ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಯಿತು. 22,71,900 ರೂ. ಕಾಣಿಕೆ ಹಣ ಸಂಗ್ರಹವಾಗಿದೆ. ಎಣಿಕೆ ಕಾರ್ಯ ನಡೆಯುತ್ತಿದ್ದ ಕೊಠಡಿ ಸುತ್ತಲು ಸಿಸಿಟಿವಿ ಅಳವಡಿಸಲಾಗಿತ್ತು. ಮಾರ್ಚ್ ತಿಂಗಳಲ್ಲಿ ಚಂದ್ರಗುತ್ತಿ ದೇಗುಲದ ಹುಂಡಿ … Read more