ಭದ್ರಾವತಿಯಲ್ಲಿ ಬೀದಿಗಿಳಿದ ವಕೀಲರು, ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಆಕ್ರೋಶ, ಸಮಸ್ಯೆ ಏನು? ಏನೆಲ್ಲ ತಾರತಮ್ಯ ಆಗಿದೆ ಗೊತ್ತಾ?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ ಲೈವ್.ಕಾಂ | SHIMOGA | 9 ಮಾರ್ಚ್ 2020

ನಿಗದಿತ ಅಳತೆಗಿಂತಲೂ ಕಡಿಮೆ ಅಳತೆಯಲ್ಲಿ ರಸ್ತೆ ಅಗಲೀಕರಣ ಮಾಡುತ್ತಿರುವುದನ್ನು ಖಂಡಿಸಿ ಭದ್ರಾವತಿಯಲ್ಲಿ ವಕೀಲರು, ವಿವಿಧ ಸಂಘಟನೆಗಳು ಮತ್ತು ನಾಗರೀಕರು ಇವತ್ತು ಬೃಹತ್ ಪ್ರತಿಭಟನೆ ನಡೆಸಿದರು. ರಾಜಕೀಯ ಒತ್ತಡಕ್ಕೆ ಮಣಿದು ಸಮರ್ಪಕವಾಗಿ ರಸ್ತೆ ಅಗಲೀಕರಣ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

090320 Bhadravathi Advocates Protest for Road 1

ಭದ್ರಾವತಿ ನ್ಯಾಯಾಲಯದಿಂದ ಅಂಬೇಡ್ಕರ್ ಸರ್ಕಲ್’ವರೆಗೆ ವಕೀಲರು ಮೆರವಣಿಗೆ ನಡೆಸಿದರು. ಇವರ ಜೊತೆಗೆ ನಾಗರೀಕರು ಮತ್ತು ವಿವಿಧ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ರಸ್ತೆ ಅಗಲೀಕರಣದಲ್ಲಿ ಆಗಿರುವ ತಾರತಮ್ಯವೇನು?

ಬಿ.ಹೆಚ್.ರಸ್ತೆಯ KSRTC ಬಸ್ ನಿಲ್ದಾಣದಿಂದ ಹೊಸ ಸೇತುವೆ ಮಾರ್ಗವಾಗಿ ತಾಲೂಕು ಕಚೇರಿ ಮುಂಭಾಗದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕೆಲವು ಕಡೆ ರಸ್ತೆ ವಿಸ್ತೀರ್ಣ ಕಿರಿದಾಗಿದೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕಾಮಗಾರಿಯಲ್ಲಿ ತಾರತಮ್ಯ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

BHADRAVATHI MAP GRAPHICS 1 1

ವಕೀಲರು ಬೀದಿಗಿಳಿದಿದ್ದು ಏಕೆ?

ರಸ್ತೆಯ ಮಧ್ಯದಿಂದ ಎರಡು ಬದಿಯಲ್ಲಿ 12 ಮೀಟರ್’ನಷ್ಟು ಅಗಲೀಕರಣ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಆದರೆ ಭದ್ರಾವತಿ ನ್ಯಾಯಾಲಯದ ಮುಂದೆಯೇ ರಸ್ತೆಯನ್ನು ಕಿರುದುಗೊಳಿಸಲಾಗಿದೆ. ಇದು ವಕೀಲರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ವಕೀಲರು ಬೀದಿಗಿಳಿದು ಪ್ರತಿಭಟಿಸಿದರು. ಇನ್ನು, ಅಗಲೀಕರಣಕ್ಕಾಗಿ ಹಲವರು ಮರಗಳನ್ನು ಕಡಿಯಲಾಗಿದ್ದು, ಆ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ವಕೀಲರ ಸಂಘದ ಅಧ್ಯಕ್ಷ ವಿ.ವೆಂಕಟೇಶ್, ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ರಾಜು, ಸಹಕಾರ್ಯದರ್ಶಿ ಮೋಹನ್, ಖಜಾಂಚಿ ರಂಗಪ್ಪ, ವಕೀಲರಾದ ಶ್ರೀಹರ್ಷ, ಚಂದ್ರೇಗೌಡ, ಹೆಚ್.ವಿಶ್ವನಾಥ್, ಆಮ್ ಆದ್ಮಿ ಪಕ್ಷದ ಮುಖಂಡ ರವಿಕುಮಾರ್, ರಾಜಾರಾಮ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ಹೆಚ್ಚಿನ Shimoga News, Shivamogga News ಮತ್ತು BHADRAVATHI ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಮಾರ್ಚ್ 9, 2020

Leave a Comment