ಹನುಮಂತ ದೇವರ ಕಾರಣಿಕ, ಈ ಬಾರಿ ಹೊರಬಿತ್ತು ಎಚ್ಚರಿಕೆಯ ಸಂದೇಶ, ಏನದು?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

HOLEHONNURU, 31 AUGUST 2024 : ಆಕಾಶ ಮೇಲೇರಿತು, ಸಿಡಿಲು ಸಿಡಿದೀತು ಎಚ್ಚರ.. ಇದು ಹೊಳೆಹೊನ್ನೂರು ಸಮೀಪದ ಮೈದೊಳಲು ಗ್ರಾಮದ ಹನುಮಂತ ದೇವರ ಕಾರ್ಣಿಕ (Karnika) ವಾಕ್ಯ.

ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಈ ದೇಗುಲದಲ್ಲಿ ಕಾರ್ಣಿಕೋತ್ಸವ ನಡೆಯಲಿದೆ. ಕಾರ್ಣಿಕ ವಾಕ್ಯ ಆಧರಿಸಿ ರೈತರು ವರ್ಷದ ಮಳೆ, ಬೆಳೆಯ ಅಂದಾಜು ಮಾಡುವುದು ವಾಡಿಕೆ. ಶುಕ್ರವಾರ ಈ ಬಾರಿಯ ಕಾರ್ಣಿಕೋತ್ಸವ ನಡೆಯಿತು. ಗೋದೂಳಿ ಲಗ್ನದಲ್ಲಿ ಗಂಗೆ ಪೂಜೆ ಬಳಿಕ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರದ ಕಂಬವೇರಿದ ಗಣಮಗ ಕಾರಣಿಕ ನುಡಿದರು.

ಕಾರ್ಣಿಕದ ಅರ್ಥವೇನು?

ಆಕಾಶ ಮೇಲೇರಿತು, ಸಿಡಿಲು ಸಿಡಿದೀತು, ಎಚ್ಚರ ಎಂದು ಈ ಬಾರಿ ಕಾರ್ಣಿಕ ನುಡಿಯಲಾಗಿದೆ. ಈ ಬಾರಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಲಿವೆ. ಸಿಡಿಲು ಬಡಿದು ಅನಾಹುತ ಸಂಭವಿಸಬಹುದು. ಆಕಾಶದ ಮೇಲುಗೈ ಸಾಧಿಸಬಹುದು. ಬಿಸಿಲು ಜೋರು ಇರಲಿದೆ ಎಂದು ಹಿರಿಯವು ವಿಶ್ಲೇಷಿಸುತ್ತಿದ್ದಾರೆ.

mydolalu-karnika-at-hanumantha-devara-temple

ಇದನ್ನೂ ಓದಿ ⇒ ದಿನ ಭವಿಷ್ಯ | 31 ಆಗಸ್ಟ್‌ 2024 | ಇವತ್ತು ಯಾವ್ಯಾವ ರಾಶಿಯವರಿಗೆ ಹೇಗಿದೆ?

Leave a Comment