ಕುವೆಂಪು ವಿವಿಯಲ್ಲಿ ನೌಕರರ ಪ್ರತಿಭಟನೆ, ಬೇಡಿಕೆ ಈಡೇರಿಕೆಗೆ ಪಟ್ಟು

EDUCATION NEWS, 20 NOVEMBER 2024 : ಅಧ್ಯಾಪಕೇತರ ನೌಕರರ ಬಡ್ತಿ ಮತ್ತು ಸೇವಾ ಸೌಲಭ್ಯಕ್ಕೆ ಆಗ್ರಹಿಸಿ ಕುವೆಂಪು ವಿಶ್ವವಿದ್ಯಾಲಯ (University) ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಶಂಕರಘಟ್ಟದಲ್ಲಿ ವಿವಿ ಅಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಬಡ್ತಿ ಮತ್ತು ಸೇವಾ ಸೌಲಭ್ಯ ಒದಗಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧ್ಯಾಪಕೇತರ ನೌಕರರು ಭರವಸೆಗಳನ್ನು ಮಾತ್ರ ನೀಡಲಾಗುತ್ತಿದೆ. ಈಚೆಗೆ ಕುವೆಂಪು ವಿವಿ ಕುಲಪತಿ ಅವರನ್ನು ಭೇಟಿಯಾಗಿ ಸರ್ಕಾರದ ನಿಯಮ ಮತ್ತು ಆದೇಶಗಳನ್ನು ತೋರಿಸಲಾಗಿತ್ತು. ಆದರೆ ಇದಕ್ಕೆ ಕುಲಪತಿ ಅವರು ಬೇಡಿಕೆ ಈಡೇರಿಸುವ ಕುರಿತು ಸ್ಪಷ್ಟ ಭರವಸೆ ನೀಡಿಲ್ಲ. ಹಾಗಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Kuvempu-university-employees-protest-at-Shankaraghatta

ಇದನ್ನೂ ಓದಿ » ಮೂರು ರೈಲುಗಳ ಸಂಚಾರ ರದ್ದು, ಕೆಲವು ರೈಲುಗಳ ಸಮಯದಲ್ಲಿ ಬದಲಾವಣೆ

ಕರ್ತವ್ಯಕ್ಕೆ ರಜೆ ಹಾಕಿದ ಅಧ್ಯಾಪಕೇತರ ಸಿಬ್ಬಂದಿ ಕುವೆಂಪು ವಿವಿ ಆಡಳಿತ ಕಚೇರಿ ಮುಂಭಾಗ ಪ್ರತಿಭಟಿಸಿದರು. ಸಂಘದ ಅಧ್ಯಕ್ಷ ಶ್ರೀನಿವಾಸ್‌, ಉಪಾಧ್ಯಕ್ಷ ಮಹೇಶ್‌, ಕಾರ್ಯದರ್ಶಿ ಅಬ್ದುಲ್‌ ಆಲಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Kuvempu-university-employees-protest-at-Shankaraghatta

Leave a Comment