NEWS HIGHLIGHTS
SHIVAMOGGA LIVE NEWS, 27 JANUARY 2025
➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.ಭದ್ರಾವತಿ : ಬಾರಂದೂರು ಸಮೀಪ ಭದ್ರಾ ನದಿ ಸೇತುವೆ ಬಳಿ ಚಿರತೆಯ (Leopard) ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹ ವಶಕ್ಕೆ ಪಡೆದಿದ್ದಾರೆ.

ಸ್ಥಳೀಯರು ಚಿರತೆ ಮೃತದೇಹ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಲೆ ದೊಡ್ಡ ಸಂಖ್ಯೆಯ ಜನರು ಸೇತುವೆ ಬಳಿ ಜಮಾಯಿಸಿದ್ದರು.
ಸಾಯಿಸಿ, ತಂದು ಹಾಕಿರುವ ಶಂಕೆ
ಚಿರತೆಯನ್ನು ಸಾಯಿಸಿ ಇಲ್ಲಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಈ ಭಾಗದಲ್ಲಿ ಚಿರತೆ ಓಡಾಟವಿಲ್ಲ. ಆದರೆ ಬೇರಡೆ ಇದನ್ನು ಕೊಂದು ಇಲ್ಲಿಗೆ ತಂದು ಹಾಕಿರುವ ಸಾಧ್ಯತೆ ಇದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ.
ಆಶೀಶ್ ರೆಡ್ಡಿ, ಡಿಸಿಎಫ್, ಭದ್ರಾವತಿ ವಿಭಾಗ
![]()
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ATMನಿಂದ ಹಣ ದರೋಡೆಗೆ ಯತ್ನ, ಇಲ್ಲಿದೆ ಘಟನೆಯ ಕಂಪ್ಲೀಟ್ ಡಿಟೇಲ್