ಶಿವಮೊಗ್ಗ ಲೈವ್.ಕಾಂ | BHADRAVATHI NEWS | 17 FEBRUARY 2021
ಭದ್ರಾವತಿಯಲ್ಲಿ ಸುಂಕದಮ್ಮ ಜಾತ್ರೆ ಅದ್ಧೂರಿಯಾಗಿ ನೆರವೇರಿತು. ತಾಯಿಗೆ ತಂಬಿಟ್ಟು ಆರತಿ ಬೆಳಗಿ ಮಹಿಳೆಯರು ದೇವಿಯ ಕೃಪೆಗೆ ಪಾತ್ರರಾದರು.
ನ್ಯೂ ಟೌನ್ ಹುತ್ತಾ ಕಾಲೋನಿಯ ಗೋಲ್ಡನ್ ಜೂಬ್ಲಿ ಮಹಡಿ ಮನೆಗಳ ಸಮೀಪದ ಆಟದ ಮೈದಾನದಲ್ಲಿ ಸುಂಕದಮ್ಮ ಜಾತ್ರೆ ನಡೆಯಿತು. ಬೆಂಗಳೂರಿನ ಶಿಲ್ಪಿ ಷಣ್ಮುಗಂ ಅವರು ದೇವಿಯ ಮೂರ್ತಿಯನ್ನು ಸ್ಥಾಪಿಸಿದರು.
ಆರತಿ ಬೆಳಗಿ, ವರವ ಬೇಡಿದರು
ಭದ್ರಾವತಿಯ ವಿವಿಧ ಬಡಾವಣೆಯ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿದ್ದರು. ತಂಬಿಟ್ಟು ಆರತಿ ಬೆಳಗುವುದರಿಂದ ತಾಯಿಯ ಕೃಪೆ ಸಿಗಲಿದೆ ಎಂಬ ನಂಬಿಕೆಯಿಂದ ಆರತಿ ಬೆಳಗಿ, ವರವನ್ನು ಬೇಡಿದರು. ಕರೋನ ಮಹಾಮಾರಿಯನ್ನು ದೂರಾಗಿಸಿ ಜನರು ನೆಮ್ಮದಿಯಿಂದ ಬದುಕುವಂತಾಲಿ ಎಂದು ಬೇಡಿಕೊಂಡರು.
ಜಿಂಕ್ ಲೈನ್, ವೇಲೂರು ಶೆಡ್, ಹುತ್ತಾ ಕಾಲೋನಿ, ಜನ್ನಾಪುರ, ಸಿದ್ದಾಪುರ ಸೇರಿದಂತೆ ಸುತ್ತಮುತ್ತ ಪ್ರದೇಶದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200