ಭದ್ರಾ ಜಲಾಶಯ: ಮೇ 17ರ ಮಧ್ಯರಾತ್ರಿಯಿಂದ ಕಾಲುವೆ ನೀರು ಸ್ಥಗಿತ, ಕಾರಣವೇನು?

FREE NEWS

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ

7411700200

ಶಿವಮೊಗ್ಗ: ಭದ್ರಾ ಜಲಾಶಯದಿಂದ (Bhadra Reservoir) ಬೇಸಿಗೆ ಹಂಗಾಮಿನ ಬೆಳೆಗಳಿಗಾಗಿ ಹೆಚ್ಚುವರಿಯಾಗಿ ಹರಿಸಲಾಗುತ್ತಿದ್ದ ನೀರನ್ನು ಮೇ 17ರ ಮಧ್ಯರಾತ್ರಿಯಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ (Irrigation Consultative Committee – ICC) ತಿಳಿಸಿದೆ.

ನೀರು ಸ್ಥಗಿತಕ್ಕೆ ಕಾರಣವೇನು?

ಜಲಾಶಯದಲ್ಲಿ ಪ್ರಸ್ತುತ ಕುಡಿಯುವ ನೀರಿಗಾಗಿ (Drinking water) ಅಗತ್ಯವಿರುವಷ್ಟು ಮಾತ್ರ ನೀರಿನ ಸಂಗ್ರಹ ಉಳಿದಿದೆ. ಬೆಳೆಗಳಿಗೆ (Crops) ಹರಿಸಲು ಹೆಚ್ಚಿನ ನೀರಿನ ಲಭ್ಯತೆ ಇಲ್ಲದ ಕಾರಣ, ಪೂರ್ವ ನಿಗದಿಯಂತೆ ಮೇ 17ರವರೆಗೆ ಮಾತ್ರ ಕಾಲುವೆಗಳಿಗೆ (Canals) ನೀರು ಹರಿಸಲಾಗುತ್ತದೆ.

Bhadra-Dam-in-Bhadravathi

ಬಲದಂಡೆ ಮತ್ತು ಎಡದಂಡೆ ಕಾಲುವೆಗಳ (Left and Right Bank Canals) ಮೂಲಕ ಹರಿಯುತ್ತಿರುವ ನೀರನ್ನು ಸ್ಥಗಿತಗೊಳಿಸುವ ಈ ಪ್ರಕ್ರಿಯೆಗೆ ಅಚ್ಚುಕಟ್ಟು ಭಾಗದ ಎಲ್ಲಾ ರೈತರು (Farmers) ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ Shimoga News, Shivamogga News ಮತ್ತು BHADRAVATHI ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಮೇ 15, 2026