SHIVAMOGGA LIVE NEWS | 4 JANUARY 2024
ಹೊಸನಗರ : ಕ್ಷುಲಕ ವಿಚಾರಕ್ಕೆ ಸ್ನೇಹಿತರ (Friends) ಮಧ್ಯೆ ಗಲಾಟೆಯಾಗಿದ್ದು ಬಿಡಿಸಲು ಹೋದ ಸಂಬಂಧಿಗೆ ರೇಜರ್ನಿಂದ ಇರಿಯಲಾಗಿದೆ. ಗಾಯಾಗೊಂಡಿರುವ ಯುವಕನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೊಸನಗರ ತಾಲೂಕು ಕೇಶವಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕಾರ್ತಿಕ್ ಎಂಬಾತನ ಹೊಟ್ಟೆಗೆ ರೇಜರ್ನಿಂದ ಇರಿಯಲಾಗಿದೆ. ರಘು ಮತ್ತು ಆತನ ಸ್ನೇಹಿತ ಮಧ್ಯೆ ವೈಮನಸು ಉಂಟಾಗಿತ್ತು. ಮಾತುಕತೆ ವೇಳೆ ರಘುಗೆ ಆತನ ಸ್ನೇಹಿತ ಹೊಡೆಯಲು ಬಂದಾಗ ರಘುವಿನ ಸಂಬಂಧಿ ಕಾರ್ತಿಕ್ ತಡೆದಿದ್ದಾನೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಉದ್ಯಮಿಗೆ ಸಂಕಷ್ಟ ತಂದ ವಾಟ್ಸಪ್ ಗ್ರೂಪ್, ಆಗಿದ್ದೇನು?
ರಘುವಿನ ಸ್ನೇಹಿತ ತನ್ನ ಜೇಬಿನಲ್ಲಿದ್ದ ರೇಜರ್ನಿಂದ ಕಾರ್ತಿಕ್ಗೆ ಚುಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಾಳು ಕಾರ್ತಿಕ್ಗೆ ಹೊಸನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲ ಮಾಡಲಾಗಿದೆ. ಹೊಸನಗರ ಠಾಣೆಯಲ್ಲಿ ಪ್ರವೀಣ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200