ನೀರು ಹಾಯಿಸಲು ತೋಟಕ್ಕೆ ಬಂದ ಮಾಲೀಕನಿಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

ಹೊಸನಗರ: ತೋಟವೊಂದರಲ್ಲಿ ಅಳವಡಿಸಲಾಗಿದ್ದ ಎರಡು ನೀರಿನ ಮೋಟಾರ್‌ಗಳನ್ನು (irrigation pump motors) ಕಳ್ಳತನ ಮಾಡಲಾಗಿದೆ. ಹೊಸನಗರ (Hosanagara) ತಾಲೂಕಿನ ಮಸಗಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಮಸಗಲ್ ಗ್ರಾಮದಲ್ಲಿ ವೆಂಕಟರಮಣ ಅವರ ತಾಯಿಯ ತೋಟವಿದೆ. ಅಲ್ಲಿನ ಬಾವಿಗೆ 2 ಹೆಚ್.ಪಿ ಬೋರ್ ಮೋಟಾರ್ ಹಾಗೂ ಕೆರೆಗೆ 3 ಹೆಚ್.ಪಿ ಸಬ್‌ ಮರ್ಸೇಬಲ್ ಮೋಟಾರ್ ಅಳವಡಿಸಲಾಗಿತ್ತು. ವೆಂಕಟರಮಣ ಅವರು ಮಾಸ್ತಿಕಟ್ಟೆಯಲ್ಲಿ ವಾಸವಿದ್ದು, ವಾರಕ್ಕೆ ಎರಡು ಬಾರಿ ಬಂದು ತೋಟಕ್ಕೆ ನೀರು ಹಾಯಿಸಿ ಹೋಗುತ್ತಿದ್ದರು. ಈಚೆಗೆ ನೀರು ಹಾಯಿಸಲು ವೆಂಕಟರಮಣ ಅವರು ತೋಟಕ್ಕೆ ಬಂದಾಗ ಬಾವಿ ಮತ್ತು ಕೆರೆಯಲ್ಲಿದ್ದ ಎರಡು ಮೋಟಾರ್‌ಗಳು ಕಳುವಾಗಿದ್ದವು.

Hosanagara-Police-Station-Board

Hosanagara Police Station 1

ಅಕ್ಕಪಕ್ಕದ ಮನೆಯವರು ಹಾಗೂ ಊರಿನವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಕಳುವಾದ ಮೋಟಾರ್‌ಗಳ ಒಟ್ಟು ಮೌಲ್ಯ ₹30,000 ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಹೊಸನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹಣಗೆರೆ ಕಟ್ಟೆಯಿಂದ ಮರಳುವಾಗ ಹೊಳೆಹೊನ್ನೂರು ಬಳಿ ಕಾದಿದ್ದ ಜವರಾಯ, ಕುಟುಂಬಕ್ಕೆ ದಿಗ್ಭ್ರಮೆ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion