ಜೋಡಿ ಕೊಲೆ ಕೇಸ್, ಪೊಲೀಸ್ ಇಲಾಖೆ ವೈಫಲ್ಯ ಖಂಡಿಸಿ ಪ್ರತಿಭಟನೆಗೆ ನಿರ್ಧಾರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SAGARA | ಸಾಗರ ತಾಲೂಕು ಬ್ಯಾಕೋಡಿನ ಸುಂದರ ಶೇಟ್ ದಂಪತಿ ಬರ್ಬರ ಕೊಲೆಯಾಗಿ (DOUBLE MURDER) ಎರಡು ವರ್ಷವಾದರೂ ಆರೋಪಿಗಳು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ವಿಫಲವಾಗಿರುವುದನ್ನು ಖಂಡಿಸಿ  ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

Shimoga Nanjappa Hospital

ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೆ.21ರಂದು ಬ್ಯಾಕೋಡಿನಲ್ಲಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಎರಡು ವರ್ಷದ ಹಿಂದೆ ಜೋಡಿ ಕೊಲೆ ನಡೆದಿದೆ. ಕೊಲೆಯಾದವರು ವೃದ್ಧರು ಮತ್ತು ಚಿನ್ನದ ವ್ಯಾಪಾರಿಗಳು. ತನಿಖೆಯಾದರೂ ಈವರೆಗೆ ಆರೋಪಿಗಳ ಬಂಧನ ಆಗಿಲ್ಲ. ಜಿಲ್ಲಾ ರಕ್ಷಣಾಧಿಕಾರಿ ಅವರು ಸ್ಥಳಕ್ಕೆ ಬರುವವರೆಗೆ ಪಕ್ಷಾತೀತ ಹೋರಾಟ ನಡೆಸುವ ಅಗತ್ಯವಿದೆ.ನಾಗರಾಜ್‌ ಬೊಬ್ಬಿಗೆ, ಕುದುರೂರು ಗ್ರಾಪಂ ಅಧ್ಯಕ್ಷ
ಜೋಡಿ ಕೊಲೆ (DOUBLE MURDER) ಆರೋಪಿಗಳ ಬಂಧನ ಆಗದೆ ಇರುವುದರಿಂದ ದ್ವೀಪದ ಜನರಲ್ಲಿ ಆತಂಕ ಹೆಚ್ಚಿದೆ. ಇಂದಲ್ಲ ನಾಳೆಯಾದರೂ ಬಂಧನ ಆಗುತ್ತದೆ ಎಂದು ಕಾಯುತ್ತಿದ್ದ ನಮ್ಮ ನಿರೀಕ್ಷೆ ಹುಸಿಯಾಗಿದೆ. ಉನ್ನತ ಮಟ್ಟದ ತನಿಖಾ ತಂಡ ರಚಿಸಿ ನ್ಯಾಯ ನೀಡಬೇಕು.ವಿನಾಯಕ ಶೇಟ್
ಜೋಡಿ ಕೊಲೆ ಗೃಹ ಸಚಿವರ ಜಿಲ್ಲೆಯಲ್ಲಿ ನಡೆದು ಆರೋಪಿಗಳು ತಪ್ಪಿಸಿಕೊಳ್ಳುವುದು ಸರ್ಕಾರಕ್ಕೆ ಶೋಭೆ ತರುವಂತದ್ದು ಅಲ್ಲ. ಈ ಹಿನ್ನೆಲೆಯಲ್ಲಿ ಶಾಸಕರು ಅಧಿವೇಶನದಲ್ಲಿ ನ್ಯಾಯಕ್ಕೆ ಪಟ್ಟು ಹಿಡಿಯಬೇಕು.ಘಂಟೆ ಹರೀಶ್, ತಾಪಂ ಮಾಜಿ ಅಧ್ಯಕ್ಷ
ಪೊಲೀಸ್ ಇಲಾಖೆಗೆ ತನಿಖೆಗೆ ಅಗತ್ಯವಾದ ಎಲ್ಲ ಸಹಕಾರವನ್ನು ಕುಟುಂಬದವರು ಮತ್ತು ನಾಗರಿಕರು ನೀಡಿದ್ದಾರೆ. ಹಲವು ಜನರ ವಿಚಾರಣೆ ಮಾಡಿದರೂ ನಾವು ಹಸ್ತಕ್ಷೇಪ ಮಾಡಿಲ್ಲ. ಹೀಗಿರುವಾಗ ಪ್ರಗತಿ ಕಾಣದಿರುವುದು ದುರಂತ.ಜಿ.ಟಿ.ಸತ್ಯನಾರಾಯಣ, ಜನಪರ ಹೋರಾಟ ವೇದಿಕೆಯ ಅಧ್ಯಕ್ಷ

ದೇವರಾಜ ಕಪ್ಪದೂರು, ಕೃಷ್ಣ ಭಂಡಾರಿ, ಜಿನೇಂದ್ರ ಜೈನ್‌, ತಿಮ್ಮಪ್ಪ ಹುರುಳಿ, ಲಕ್ಷ್ಮೀಪತಿ ಜೈನ್, ವಿಜಯ ಅಡಗಳಲೆ, ರಘುಪತಿ, ವಿಶ್ವನಾಥ, ಕೃಷ್ಣಮೂರ್ತಿ, ಮಂಜಪ್ಪ, ಸುರೇಶ್‌ ಕೆರೋಡಿ, ಶೇಖರ್ ಇತರರಿದ್ದರು.

Sarji Hospital

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದ ಮಹಿಳೆಯರೆ ಹುಷಾರ್, ಮನೆಯಲ್ಲಿ ಒಬ್ಬರೆ ಇದ್ದಾಗ ನುಗ್ಗಬಹುದು ಇಂತಹ ಖದೀಮರು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 13, 2022

Leave a Comment