ದಿಢೀರ್‌ ತೆರೆದುಕೊಳ್ತು ಮಿನಿ ಬಸ್‌ ಡೋರ್‌, ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಗಾಯ, ಎಲ್ಲಿ? ಆಗಿದ್ದೇನು?

ಸಾಗರ: ಮಿನಿ ಬಸ್‌ನ ಹಿಂಬದಿಯ ಬಾಗಿಲು ದಿಢೀರ್‌ ತೆರೆದುಕೊಂಡಿದ್ದು ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ತಗುಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸಾಗರ ನಗರದ ಎಸ್‌ಎನ್ ಸರ್ಕಲ್ ಬಳಿ ಘಟನೆ ನಡೆದಿದೆ. ತರೀಕೆರೆ ತಾಲ್ಲೂಕಿನ ಕಲ್ಲಾಟಿಪುರದ ಕೂಲಿ ಕಾರ್ಮಿಕ ಕೃಷ್ಣ (35) ಗಾಯಗೊಂಡಿದ್ದಾರೆ. ಕೃಷ್ಣ ಹಾಗೂ ಅವರ ಸಂಬಂಧಿ ದೇವರಾಜ ಅವರು ಸಿಗಂದೂರು ರಸ್ತೆಯಿಂದ ಬಿ.ಎಚ್. ರಸ್ತೆಗೆ ಬರಲು ಎಸ್‌ಎನ್ ಸರ್ಕಲ್ ಹತ್ತಿರ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

SAGARA-NEWS-GRAPHICS-BY-SHIVAMOGGA-LIVE

ಎದುರುಗಡೆಯಿಂದ ಬಂದ ಮಿನಿ ಬಸ್‌ನ ಹಿಂಬದಿಯ ಡೋರ್ ಲಾಕ್ ಮಾಡಿರಲಿಲ್ಲ. ಬಸ್ಸಿನ ಡೋರ್ ಹಠಾತ್ ತೆರೆದುಕೊಂಡು ದಾರಿಯಲ್ಲಿ ಹೋಗುತ್ತಿದ್ದ ಕೃಷ್ಣ ಅವರಿಗೆ ತಗುಲಿದ್ದು, ಅವರ ಎಡ ಭುಜ, ಮೂಗು, ಬಲಗೈಗೆ ಪೆಟ್ಟುಬಿದ್ದಿದೆ. ಕೂಡಲೆ ಕೃಷ್ಣ ಅವರನ್ನು ಸಾಗರದ ಸರ್ಕಾರಿ ಆಸ್ಪತ್ರೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಘಟನೆ ಸಂಬಂಧ ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.