ಸಿಗಂದೂರು ಸೇತುವೆ, ಹಗಲು, ರಾತ್ರಿ ಕೆಲಸ ಮಾಡಿದ ಕಾರ್ಮಿಕರಿಗೆ ಸನ್ಮಾನ

ಸಾಗರ: ಸಿಗಂದೂರು ಸೇತುವೆ (Sigandur Bridge) ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಸಂಘಟನೆ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಕಳೆದ ಐದು ವರ್ಷದಿಂದ ಕಾರ್ಮಿಕರು ಹಗಲು, ರಾತ್ರಿ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ದೇಶದ ಎರಡನೆ ಅತಿ ಉದ್ದನೆಯ ಕೇಬಲ್‌ ಆಧಾರಿತ ಸೇತುವೆಯನ್ನು ಈ ಕಾರ್ಮಿಕರು ನಿರ್ಮಿಸಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

felicitation-for-sigandur-bridge-workers.

ಇದನ್ನೂ ಓದಿ » ಶಿವಮೊಗ್ಗದಲ್ಲಿ ‘ಭುಗಿಲುʼ ಬಿಡುಗಡೆ, ಬಿ.ಎಲ್.ಸಂತೋಷ್‌ ಭಾಗಿ, ಏನೆಲ್ಲ ಮಾತನಾಡಿದರು? ಇಲ್ಲಿದೆ ಪ್ರಮುಖಾಂಶ

ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಸಂಜಯ್ ಕುಮಾರ್, ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷೆ ಕವಿತಾ ಥೋರತ್, ಪ್ರಮುಖರಾದ ಕೆ.ಸುಂದರ್ ಬಾಬು, ಧನುಶ್ರೀ, ತಾಲ್ಲೂಕು ಅದ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು.

felicitation-for-sigandur-bridge-workers.

Leave a Comment