ಶಿವಮೊಗ್ಗ ಲೈವ್.ಕಾಂ | TALAGUPPA NEWS | 18 JUNE 2021➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ತಾಳಗುಪ್ಪ ಹೋಬಳಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಭತ್ತದ ಗದ್ದೆಗಳು ಜಲಾವೃತವಾಗಿವೆ.
ರಾಷ್ಟ್ರೀಯ ಹೆದ್ದಾರಿ 206 ಇಕ್ಕೆಲೆಗಳಲ್ಲಿ ಎಲ್ಲ ಭತ್ತದ ಗದ್ದೆಗಳಲ್ಲಿ ನೀರು ನಿಂತಿದೆ. ಗುಂಡಿಬೈಲು ಗದ್ದೆ ಬಯಲು ನೀರಲ್ಲಿ ಮುಳುಗಿದ್ದು ಇನ್ನೆರಡು ದಿನ ಮಳೆ ಮುಂದುವರಿದರೆ ಬಿತ್ತಿದ ಬೀಜ ಕೊಳೆಯುವ ಸಾಧ್ಯತೆ ಇದೆ.
ಮಳೆಗಾಲ ಪೂರ್ವದಲ್ಲಿ ಚರಂಡಿ ಹೂಳೆತ್ತಿಸುವ ಕಾಮಗಾರಿ ನಡೆಯದೆ, ಬೆಳ್ಳ, ರಸ್ತೆ, ಅಚಾರ್ಯ ಹೋಟೆಲ್ ಪಕ್ಕದ ರಸ್ತೆಯಲ್ಲಿ ಚರಂಡಿ ನೀರು ರಸ್ತೆಗೆ ನುಗ್ಗುತ್ತಿದೆ. ತಾಳಗುಪ್ಪದಲ್ಲಿ ಕಳೆದ 48 ತಾಸಿನಲ್ಲಿ 196.20 ಎಂಎಂ ಮಳೆ ಸುರಿದಿದೆ.
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಇದನ್ನೂ ಓದಿ:➤ ಚಿನ್ನದ ನಾಣ್ಯಗಳು, ಆನಂದಪುರದಲ್ಲಿ ಹರಪನಹಳ್ಳಿಯ ವ್ಯಕ್ತಿ ಅರೆಸ್ಟ್, ಲಕ್ಷ ಲಕ್ಷ ಹಣ ವಶಕ್ಕೆ, ಏನಿದು ಕೇಸ್?