ಏಲಕ್ಕಿ ಬಾಳೆಹಣ್ಣು ಕಳ್ಳತನ, ದಾಖಲಾಯ್ತು ಪ್ರಕರಣ, ಎಲ್ಲಿ? ಆಗಿದ್ದೇನು?

ಆನಂದಪುರ: ಮಲಂದೂರು ಗ್ರಾಮದ ತೋಟವೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 200 ಗಿಡಗಳಲ್ಲಿದ್ದ ಏಲಕ್ಕಿ ಬಾಳೆಗೊನೆಗಳನ್ನು (banana) ಕಟಾವು ಮಾಡಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕಳುವಾದ ಬಾಳೆಯ ಮೌಲ್ಯ ಸುಮಾರು ₹1.68 ಲಕ್ಷ ಎಂದು ಅಂದಾಜಿಸಲಾಗಿದೆ.

ದಾಸಕೊಪ್ಪದ ಗಜೇಂದ್ರ ಎಂಬುವವರು ಮಲಂದೂರು ಅಡಿಕೆ ಮತ್ತು ಬಾಳೆ ತೋಟ ಹೊಂದಿದ್ದಾರೆ. ರಾತ್ರಿ ವೇಳೆ ತೋಟಕ್ಕೆ ನುಗ್ಗಿರುವ ಕಳ್ಳರು ಕೃತ್ಯ ಎಸಗಿದ್ದಾರೆ. ಗಜೇಂದ್ರ ಅವರು ಬೆಳಗ್ಗೆ ತೋಟಕ್ಕೆ ಹೋದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

281123-Anandapura-Police-Station-Board.webp

281123-Anandapura-Police-Station-Board.webp

ತೋಟದಲ್ಲಿದ್ದ ಸುಮಾರು 180 ರಿಂದ 200 ಬಾಳೆಗಿಡಗಳಲ್ಲಿದ್ದ ಏಲಕ್ಕಿ ಬಾಳೆಗೊನೆಗಳನ್ನು ಕಟಾವು ಮಾಡಿದ್ದಾರೆ. ಒಟ್ಟು ಸುಮಾರು 2400 ಕೆ.ಜಿ ತೂಕದ ಬಾಳೆಗೊನೆಗಳನ್ನು ವಾಹನವೊಂದರಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಮಾರುಕಟ್ಟೆ ದರದಂತೆ ಇದರ ಒಟ್ಟು ಮೌಲ್ಯ ₹1,68,000 ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ – ಬಿಜೆಪಿ ನಾಯಕನಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿದ ಕಾಂಗ್ರೆಸ್‌ ಸರ್ಕಾರ, ಕೆಂಡವಾದ ಕೈ ಕಾರ್ಯಕರ್ತರು, ಏನಿದು?

ಘಟನೆ ಸಂಬಂಧ ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment