SHIVAMOGGA LIVE NEWS, 6 JANUARY 2025
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಸಾಗರ : ಕನ್ನಡ ಸಾಹಿತ್ಯ ಲೋಕದ ಜೀವ‘ನಾಡಿ’ ಹಿರಿಯ ಸಾಹಿತಿ (Writer) ಡಾ. ನಾ.ಡಿಸೋಜ ನಿಧನರಾಗಿದ್ದಾರೆ. ಲೋಕೋಪಯೋಗಿ ಇಲಾಖೆಯ ಒತ್ತಡದ ಕೆಲಸದ ನಡುವೆಯು ನಾ.ಡಿಸೋಜ ಸಾಹಿತ್ಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅವರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಲು ಎರಡು ಪ್ರಮುಖ ಘಟ್ಟಗಳು ಕಾರಣವಾಗಿದ್ದವು.
ನಾ. ಡಿಸೋಜ ಅವರು ಹುಟ್ಟಿದ್ದು ಸಾಗರ ತಾಲೂಕಿನಲ್ಲಿ. 1937ರ ಜೂನ್ 6ರಂದು ಅವರ ಜನನವಾಯಿತು. ಡಾ. ನಾ.ಡಿಸೋಜ ಅವರ ಪೂರ್ಣ ಹೆಸರು ನಾಲ್ಬರ್ಟ್ ಡಿಸೋಜ. ತಂದೆ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಎಫ್.ಸಿ.ಡಿಸೋಜ ಅವರು ಸಾಗರದ ಚಾಮರಾಜಪೇಟೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು.

ತಂದೆ ಎಫ್.ಸಿ.ಡಿಸೋಜ ಶಾಲೆಯಲ್ಲಿ ಮಕ್ಕಳಿಗೆ ಕಲಿಸಲು ಹಲವು ಕವಿತೆಗಳನ್ನು ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದರು. ಆರು ವರ್ಷದ ನಾ.ಡಿಸೋಜ ಅವರು ಅಪ್ಪನ ಪುಸ್ತಕದಲ್ಲಿನ ಕವಿತೆಗಳನ್ನು ಓದಲು ಆರಂಭಿಸಿದರು. ‘ಇದು ತಾನು ಓದಿದ ಮೊದಲ ಪುಸ್ತಕ’ ಎಂದು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅವರಿಗೆ ನೀಡಿದ ಸಂದರ್ಶನದಲ್ಲಿ ನಾ.ಡಿಸೋಜ ಸ್ಮರಿಸಿಕೊಂಡಿದ್ದರು. ಇನ್ನು, ತಾಯಿ ರೂಪೀನಾ ಡಿಸೋಜ ಮಕ್ಕಳನ್ನು ಮಲಗಿಸುವಾಗ ಅನೇಕ ಜಾನಪದ ಕತೆಗಳನ್ನು ಹೇಳುತ್ತಿದ್ದರು. ಇದು ಸಾಹಿತ್ಯದ ಕುರಿತು ನಾ.ಡಿಸೋಜ ಅವರಲ್ಲಿ ಆಸಕ್ತಿ ಮೂಡಿಸಿತು.ಸಾಹಿತ್ಯ ಆಸಕ್ತಿ ಮೂಡಿಸಿದ ಘಟ್ಟ – 1

ನಾ.ಡಿಸೋಜ ಅವರಿಗೆ ಹತ್ತು ವರ್ಷ ಇದ್ದಾಗ ತಂದೆ ತೀರಿಕೊಂಡರು. ತಾಯಿಯ ಒಂಟಿತನ ನೀಗಿಸಲು ಅಣ್ಣ, ಅಕ್ಕಂದಿರು ಗ್ರಂಥಾಲಯದಿಂದ ಪುಸ್ತಕಗಳನ್ನು ತರುತ್ತಿದ್ದರು. ಆ ಪುಸ್ತಕಗಳನ್ನು ಓದಿ ತಾಯಿಗೆ ವಿವರಿಸಬೇಕು ಎಂದು ನಾ.ಡಿಸೋಜ ಅವರಿಗೆ ಅಕ್ಕ, ಅಣ್ಣಂದಿರು ಆದೇಶಿಸುತ್ತಿದ್ದರು. ಕತೆ, ಕಾದಂಬರಿಗಳನ್ನು ಓದಿ ತಾಯಿಗೆ ವಿವರಿಸುತ್ತಲೆ ಸಾಹಿತ್ಯದ ಪರಿಚಯವಾಯಿತು. ಅತ್ಯಂತ ಕಿರಿಯ ವಯಸ್ಸಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ ಅವರ ಕಾದಂಬರಿಗಳನ್ನು ಓದಲು ಆರಂಭಿಸಿದ್ದರು.ಸಾಹಿತ್ಯ ಆಸಕ್ತಿ ಮೂಡಿಸಿದ ಘಟ್ಟ – 2
ಇದನ್ನೂ ಓದಿ » ನಾ.ಡಿಸೋಜ ಅಂತ್ಯಕ್ರಿಯೆ ಕುರಿತು ಪುತ್ರನ ಹೇಳಿಕೆ, ಇಲ್ಲಿದೆ ವಿಡಿಯೋ
LATEST NEWS
- ಉಪನ್ಯಾಸಕಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವರ್ತನೆ, ದಾಖಲಾಯ್ತು ಕೇಸ್, ಏನಿದು ಪ್ರಕರಣ?

- ಕಪ್ಪು ಪ್ಯಾಕೆಟ್ ಕೇಸ್, ಮೂವರು ಅರೆಸ್ಟ್, ಏನಿದು ಪ್ರಕರಣ? ಯಾರಿವರು ಬಂಧಿತರು?

- ಅರ್ಜಿಗಳನ್ನು ಪೂರ್ತಿಗೊಳಿಸಲು ಫೆಬ್ರವರಿ 12ರವರೆಗೆ ಅವಕಾಶ, ಇಲ್ಲಿದೆ ಕಂಪ್ಲೀಟ್ ಮಾಹಿತಿ

- ಸೋಗಾನೆಯಲ್ಲಿ ಧಗಧಗ ಹೊತ್ತಿ ಉರಿದ ತೊಗರಿ, ಹುರುಳಿಯ ಬೊಣವೆ, ಆಗಿದ್ದೇನು?

- ಕಾರು, ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ನೆರವಾದ ಶಿವಮೊಗ್ಗ ಜಿಲ್ಲಾಧಿಕಾರಿ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





