ಸಾಗರ : ತೆಂಗಿನ ಮರದ (Tree) ಮೇಲೆ ಗೂಡು ಕಟ್ಟಿದ್ದ ಗಿಣಿಯನ್ನು ಹಿಡಿಯುವ ಸಾಹಸದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತೆಂಗಿನ ಮರ ತಲೆ ಮೇಲೆ ಬಿದ್ದು ಸಚಿನ್ (24) ಕೊನೆಯುಸಿರೆಳೆದಿದ್ದಾನೆ.
ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇನ್ನಿಬ್ಬರು ಯುವಕರು ಪಾರಾಗಿದ್ದಾರೆ.
ಒಣಗಿದ ತೆಂಗಿನ ಮರದ ತುದಿಯಲ್ಲಿ
ಭೂತಯ್ಯನ ಕಟ್ಟೆ ಸಮೀಪ ಒಣಗಿದ ತೆಂಗಿನ ಮರದ (Tree) ತುದಿಯಲ್ಲಿ ಗಿಣಿಯೊಂದು ಗೂಡು ಕಟ್ಟಿತ್ತು. ಮರ ಉರುಳಿಸಿ ಗೂಡು ಮತ್ತು ಗಿಣಿಯನ್ನು ಸೆರೆ ಹಿಡಿಯಲು ಯುವಕರು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಮರ ಕತ್ತರಿಸುವಾಗ ಒಣಗಿದ ಮರ ಯುವಕರತ್ತ ಉರುಳಿದೆ. ಸಚಿನ್ ಎಂಬಾತನ ತಲೆ ಮೇಲೆ ಮರ ಬಿದ್ದಿದ್ದು, ಆತನ ಸಾವನ್ನಪ್ಪಿದೆ.
ಸಚಿನ್ ಜೊತೆಗೆ ತೆರಳಿದ್ದ ಇನ್ನಿಬ್ಬರು ಯುವಕರು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಲಕ್ಷ ಲಕ್ಷ ಮೌಲ್ಯದ ಮಾಂಗಲ್ಯ ಸರ ಖರೀದಿಸಿ ಮನೆಗೆ ಹೋಗಿ ನೋಡಿದಾಗ ಕಾದಿತ್ತು ಆಘಾತ, ಆಗಿದ್ದೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200