ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಗದ್ದಲ, ಗೊಂದಲ, ಪೊಲೀಸ್‌ ಮಧ್ಯಪ್ರವೇಶ, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 31 AUGUST 2023

SHIMOGA : ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ (Farmers) ಇವತ್ತು ಏರ್‌ಪೋರ್ಟ್‌ ಟರ್ಮಿನಲ್‌ನಲ್ಲಿ (Airport Terminal) ಸನ್ಮಾನಿಸಲಾಯಿತು. ಸಾಂಕೇತಿಕವಾಗಿ ಇಬ್ಬರನ್ನು ವೇದಿಕೆಗೆ ಆಹ್ವಾನಿಸಿ ಶಾಲು ಹೊದಿಸಿ ಗೌರವಿಸಲಾಯಿತು. ಆದರೆ ಸನ್ಮಾನಿತರು ಭೂಮಿಯನ್ನು ಕಳೆದುಕೊಂಡ ರೈತರಲ್ಲ ಎಂದು ಕಾರ್ಯಕ್ರಮದಲ್ಲಿದ್ದ ಉಳಿದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿದ್ದ ಮೊದಲ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 3 ಪ್ರಮುಖ ವಿಚಾರ

ಟರ್ಮಿನಲ್‌ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದ ವೇಳೆ ಕೆಲಕಾಲ ಗೊಂದಲ ಸೃಷ್ಟಿಯಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆದರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವೇದಿಕೆಯಲ್ಲಿ ಕೃಷ್ಣಪ್ಪ ಮತ್ತು ಗೋವಿಂದರಾಜು ಎಂಬುವವರನ್ನು ಸನ್ಮಾನಿಸಿದರು.

ಇದನ್ನೂ ಓದಿ – ಶಿವಮೊಗ್ಗದ ಮೊದಲ ವಿಮಾನದಲ್ಲಿ 10 ಬೆಳ್ಳಿ ಕಾಯಿನ್‌ ಬಹುಮಾನ, ಯಾರಿಗೆ ವಿತರಿಸಲಾಯಿತು?

ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಗರಂ

ಸನ್ಮಾನ ಸ್ವೀಕರಿಸಲು ಕೃಷ್ಣಪ್ಪ ಮತ್ತು ಗೋವಿಂದರಾಜು ವೇದಿಕೆಗೆ ಆಗಮಿಸುತ್ತಿದ್ದಂತೆ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ, ಕಾಂಗ್ರೆಸ್‌ ಮುಖಂಡ ವಿಜಯ್‌ ಕುಮಾರ್‌ ಗರಂ ಆದರು. ಅವರು ರೈತರಲ್ಲ (Farmers), ಭೂಮಿಯನ್ನೂ ಕಳೆದುಕೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ವೇದಿಕೆ ಮೇಲೇರಿದರು. ಈ ವೇಳೆ ಪೊಲೀಸರು ವಿಜಯ್‌ ಕುಮಾರ್‌ ಅವರನ್ನು ತಡೆದರು.

Farmers Protest at Shimoga Airport

ಆಕ್ರೋಶ ಹೊರ ಹಾಕಿದ ರೈತರು

ಇತ್ತ ವೇದಿಕೆಯ ಬಲ ಭಾಗದಲ್ಲಿದ್ದ ಉಳಿದ ರೈತರು ಮತ್ತು ಸ್ಥಳೀಯರು ಕೂಡ ವಿಜಯ್ ಕುಮಾರ್‌ ಅವರಿಗೆ ದನಿಗೂಡಿದರು. ಬಿಜೆಪಿ ಕಾರ್ಯಕರ್ತರನ್ನು ಕರೆತಂದು ರೈತರು ಎಂದ ಸನ್ಮಾನಿಸಲಾಗುತ್ತಿದೆ ಎಂದು ಸಿಟ್ಟಾದರು. ‌

ಭೂಮಿ ಕಳೆದುಕೊಂಡ 303 ರೈತರಿಗೆ ಸೈಟು, ಕೆಲಸ ಕೊಡುವ ಭರವಸೆ ನೀಡಿದ್ದರು. ಈ ಹಿಂದಿನ ಶಾಸಕರ ಬಳಿ ಕೇಳಿದಾಗ ರೈತರಿಗೆ ಕೆಲಸ ಕೊಡಲು ಅಸಾಧ್ಯ ಎಂದರು. ಈಗ ಹೌಸ್‌ ಕೀಪಿಂಗ್‌ಗೆ 18 ಮಹಿಳೆಯರನ್ನು ನೇಮಸಿಕೊಂಡಿದ್ದಾರೆ. ಇವರೆಲ್ಲ ಶಿಕಾರಿಪುರದವರು. ಅವರಷ್ಟು ವಿದ್ಯಾರ್ಹತೆ ಇಲ್ಲಿನ ಸ್ಥಳೀಯರಲ್ಲಿ ಇರಲಿಲ್ಲವೆ. ಇವತ್ತು ಇಬ್ಬರನ್ನು ಕರೆದು ಸನ್ಮಾನಿಸಿದ್ದಾರೆ. ಅವರದ್ದು ಒಂದೇ ಕೊಂದು ಕುಂಟೆ ಜಾಗವು ಹೋಗಿಲ್ಲ.ಅರುಣ್‌ ಕುಮಾರ್‌‌.ಎಸ್, ಭೂಮಿ ಕಳೆದುಕೊಂಡವರು

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅರ್ಧ ಗಂಟೆಗೊಂದು KSRTC ಬಸ್‌, ಯಾವ ಸಮಯದಿಂದ ಶುರುವಾಗುತ್ತೆ?

ಭೂಮಿಯನ್ನೇ ಕಳೆದುಕೊಳ್ಳದವರನ್ನು ಕರೆದು ಸನ್ಮಾನ ಮಾಡಿದ್ದಾರೆ. ರೈತ ಮುಖಂಡ ಕೆ.ಟಿ.ಗಂಗಾಧರ್‌, ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷ ವಿಜಯ್‌ ಕಮಾರ್‌, ವೇದಾ ವಿಜಯ್‌ ಕುಮಾರ್‌ ಅವರಿಗೆ ಸನ್ಮಾನ ಮಾಡಬೇಕಿತ್ತು. ಭೂಮಿ ಕಳೆದುಕೊಂಡ ರೈತರ ಪರವಾಗಿ ಹೋರಾಟ ಮಾಡಿದ್ದು ಅವರು. ಇವತ್ತಿನ ಸನ್ಮಾನವನ್ನು ನಾವು ಖಂಡಿಸುತ್ತೇವೆ.ಗಣೇಶ್‌, ಕಾಚಿನಕಟ್ಟೆ ನಿವಾಸಿ

ಇದನ್ನೂ ಓದಿ – ಶಿವಮೊಗ್ಗದ ಮೊದಲ ವಿಮಾನ, ಲ್ಯಾಂಡಿಂಗ್‌ನಿಂದ ಟೇಕಾಫ್‌ವರೆಗೆ ಏನೇನಾಯ್ತು? ಇಲ್ಲಿದೆ ಪೂರ್ತಿ ಮಾಹಿತಿ

ರೈತರಿಗೆ ಭೇದವಿಲ್ಲ

ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸಂಸದ ರಾಘವೇಂದ್ರ, ರೈತರಿಗೆ ಯಾವುದೆ ಜಾತಿ, ಧರ್ಮ, ಪಕ್ಷದ ಭೇದವಿಲ್ಲ. ಎಲ್ಲರು ರೈತರೆ ಎಂದರು. ಆದರೆ ವೇದಿಕೆ ಮಂದಿದ್ದ ಉಳಿದ ರೈತರು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment